‘ಕಾಶ್ಮೀರ ಎಂದೂ ನಿಮ್ಮದಾಗಿರಲಿಲ್ಲ – ಇನ್ನು ಮುಂದೆಯೂ ನಿಮ್ಮದಾಗುವುದಿಲ್ಲ!’

ಪಾಕಿಸ್ಥಾನಕ್ಕೆ ಹೀಗೆಂದ ಇಸ್ಲಾಂ ಚಿಂತಕ ಯಾರು ಗೊತ್ತೇ?

Team Udayavani, Aug 13, 2019, 7:20 PM IST

Imam Mohamad-Tawhidi-726

ನವದೆಹಲಿ: ಒಂದು ಕಡೆಯಲ್ಲಿ ಕಾಶ್ಮೀರವನ್ನು ಶತಾಯಗತಾಯ ಭಾರತದ ಕೈಯಿಂದ ಕಿತ್ತುಕೊಂಡು ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕೆಂದು ಪಾಕಿಸ್ಥಾನ ಸಾಧ್ಯವಿರುವ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಇದೇ ಸಂದರ್ಭದಲ್ಲಿ ಕಾಶ್ಮೀರವು ಯಾವತ್ತೂ ಪಾಕಿಸ್ಥಾನದ ಭಾಗವಾಗಿರಲೇ ಇಲ್ಲ ಮತ್ತು ಮುಂದೆಯೂ ಅದು ಸಾಧ್ಯವಾಗುವುದಿಲ್ಲ ಎಂದು ಆ ದೇಶಕ್ಕೆ ನೇರವಾಗಿ ಹೇಳುವ ಮೂಲಕ ಇಸ್ಲಾಂ ಚಿಂತಕರೊಬ್ಬರು ಇದೀಗ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ.

ಪರಿಸ್ಥಿತಿಯನ್ನು ನೀವು ಪ್ರಾಮಾಣಿಕವಾಗಿ ಎದುರಿಸಬೇಕು ಎಂದು ಕಾಶ್ಮೀರದ ವಿಚಾರದಲ್ಲಿ ಪಾಕಿಸ್ಥಾನಕ್ಕೆ ಕಿವಿಮಾತು ಹೇಳಿರುವ ವಿವಾದಾತ್ಮಕ ಇಸ್ಲಾಂ ಚಿಂತಕರೇ ಇಮಾಮ್ ಮಹಮ್ಮದ್ ತಹ್ವಿಡಿ ಆಗಿದ್ದಾರೆ. ‘ಶಾಂತಿಯ ನ್ಯಾಯವಾದಿ’, ‘ಸುಧಾರಣಾವಾದಿ ಪ್ರವಾದಿ’ ಎಂದು ಕರೆಯಿಸಿಕೊಳ್ಳುವ ಇಮಾಮ್ ಮಹಮ್ಮದ್ ಅವರು ಕಾಶ್ಮೀರ ವಿಚಾರವಾಗಿ ತಮ್ಮ ಸ್ಪಷ್ಟ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

‘ಕಾಶ್ಮೀರ ಎಂದೂ ಪಾಕಿಸ್ಥಾನದ ಭಾಗವಾಗಿರಲಿಲ್ಲ ಮತ್ತು ಅದು ಮುಂದೆಂದೂ ಪಾಕಿಸ್ಥಾನದ ಭಾಗವಾಗುವುದೂ ಇಲ್ಲ. ಮಾತ್ರವಲ್ಲದೇ ಪಾಕಿಸ್ಥಾನ ಮತ್ತು ಕಾಶ್ಮೀರ ಎರಡೂ ಸಹ ಭಾರತದ ಭಾಗಗಳೇ ಆಗಿವೆ’ ಎಂದು ಈ ಇಮಾಮ್ ಪ್ರತಿಪಾದಿಸಿದ್ದಾರೆ.

ಇನ್ನೂ ಮುಂದುವರೆದು ‘ಈ ಪೂರ್ತಿ ಪ್ರದೇಶವೇ ಹಿಂದೂ ಭೂಮಿಯಾಗಿದೆ ಮತ್ತು ಇವರೆಲ್ಲಾ ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರವಾದವರಾಗಿದ್ದಾರೆ ಎಂಬ ಸತ್ಯವನ್ನು ಬಚ್ಚಿಡಬೇಡಿ ಮತ್ತು ಭಾರತವು ಇಸ್ಲಾಂ ಧರ್ಮಕ್ಕಿಂತಲೂ ಪುರಾತನವಾದುದಾಗಿದೆ.’ ಎಂದೂ ಇಮಾಮ್ ಮಹಮ್ಮದ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಮಾತ್ರವಲ್ಲದೇ ಪಾಕಿಸ್ಥಾನವನ್ನು ಏಕಾಂಗಿಯಾಗಿಸಿ ಎಂದೂ ಸಹ ಇಮಾಮ್ ಅವರು ವಿಶ್ವನಾಯಕರಿಗೆ ಕರೆಕೊಟ್ಟಿದ್ದಾರೆ.

ಎಡ ಮತ್ತು ಬಲಪಂಥೀಯ ತೀವ್ರಗಾಮಿ ಧೋರಣೆಗಳ ವಿರೋಧಿಯಾಗಿರುವ ಇಮಾಮ್ ಮಹಮ್ಮದ್ ಅವರು ಈ ಹಿಂದೆಯೂ ಹಲವಾರು ಸಲ ಕಾಶ್ಮೀರ ವಿಚಾರದ ಕುರಿತಾಗಿ ‘ಹಿಂದೂ ಭೂಮಿ’ ಎಂಬ ತಮ್ಮ ನಿಲುವನ್ನು ಹಲವು ವೇದಿಕೆಗಳಲ್ಲಿ ಹಂಚಿಕೊಂಡಿದ್ದರು. ಮಾತ್ರವಲ್ಲದೇ ಕಳೆದ ಬಾರಿಯ ತಮ್ಮ ಭಾರತ ಭೇಟಿಯ ಸಂದರ್ಭದಲ್ಲೂ ಇಮಾಮ್ ಅವರು ತಮ್ಮ ಈ ನಿಲುವನ್ನೇ ಪುನರುಚ್ಚರಿಸಿದ್ದರು.

ಇರಾನ್ ಮೂಲದ ಇಮಾಮ್ ಮಹಮ್ಮದ್ ತಹ್ವಿದಿ ಅವರು ತಮ್ಮ ಹನ್ನೆರಡನೇ ವಯಸ್ಸಿನಲ್ಲಿಯೇ ತಂದೆ-ತಾಯಿಗಳೊಂದಿಗೆ ಆಸ್ಟ್ರೇಲಿಯಾಗೆ ವಲಸೆ ಹೋದರು. ಇಸ್ಲಾಂ ಧರ್ಮದ ಸುಧಾರಣಾವಾದಿ ಪ್ರವಾದಿಯಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್

Mangaluru ಸಾರಿಗೆ ಉದ್ಯಮಿ ಪ್ರಕಾಶ್‌ ಅಂತ್ಯಸಂಸ್ಕಾರ

Mangaluru ಸಾರಿಗೆ ಉದ್ಯಮಿ ಪ್ರಕಾಶ್‌ ಅಂತ್ಯಸಂಸ್ಕಾರ

Manipal ಚೂರಿ ಇರಿತ: ನಾಲ್ವರ ಬಂಧನ

Manipal ಚೂರಿ ಇರಿತ: ನಾಲ್ವರ ಬಂಧನ

Udupi ಲಾರಿ ಮಾಲಕರ ಮುಷ್ಕರದಲ್ಲಿ ತಾತ್ಕಾಲಿಕ ಬದಲಾವಣೆ

Udupi ಲಾರಿ ಮಾಲಕರ ಮುಷ್ಕರದಲ್ಲಿ ತಾತ್ಕಾಲಿಕ ಬದಲಾವಣೆ

Belthangady ಸಾತ್ವಿಕ ಬದುಕು ಕಟ್ಟಿಕೊಟ್ಟ ಜನಜಾಗೃತಿ: ಮಾಣಿಲ ಶ್ರೀ

Belthangady ಸಾತ್ವಿಕ ಬದುಕು ಕಟ್ಟಿಕೊಟ್ಟ ಜನಜಾಗೃತಿ: ಮಾಣಿಲ ಶ್ರೀ

Udupi ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ; 3 ಮಂದಿ ವಶಕ್ಕೆ

Udupi ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ; 3 ಮಂದಿ ವಶಕ್ಕೆ

1-sadasd

Manali; ದಟ್ಟಾರಣ್ಯದಲ್ಲಿ ನಾಪತ್ತೆಯಾದ ಬೆಂಗಳೂರಿನ ಚಾರಣಿಗ; ತೀವ್ರ ಶೋಧ

Mangaluru 18 ವರ್ಷದ ಯುವತಿ ನಾಪತ್ತೆ, ದೂರು ದಾಖಲು

Mangaluru 18 ವರ್ಷದ ಯುವತಿ ನಾಪತ್ತೆ, ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadasd

Manali; ದಟ್ಟಾರಣ್ಯದಲ್ಲಿ ನಾಪತ್ತೆಯಾದ ಬೆಂಗಳೂರಿನ ಚಾರಣಿಗ; ತೀವ್ರ ಶೋಧ

1-sadsadas

Nanded ; ಆಸ್ಪತ್ರೆಯಲ್ಲಿ ಒಂದೇ ದಿನ 12 ನವಜಾತ ಶಿಶುಗಳು ಸೇರಿ 24 ರೋಗಿಗಳ ಮೃತ್ಯು

pramod-sawanth

Goa ಕೋಮು ಸೌಹಾರ್ದತೆ ಕದಡುವ ಪ್ರಯತ್ನಗಳು ಚಾಲ್ತಿಯಲ್ಲಿವೆ: ಸಿಎಂ ಸಾವಂತ್

eart

Earthquake; ಮೇಘಾಲಯದಲ್ಲಿ 5.2 ತೀವ್ರತೆಯ ಭೂಕಂಪ: ಬಂಗಾಳ, ಅಸ್ಸಾಂನಲ್ಲೂ ಕಂಪನ

JNU

JNU ನಲ್ಲಿ ಪದೇ ಪದೇ ದೇಶವಿರೋಧಿ ಘೋಷಣೆ ; ಪರಿಶೀಲಿಸಲು ಸಮಿತಿ ರಚನೆ

MUST WATCH

udayavani youtube

ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲೊಂದು ಹೋಟೆಲ್ ಬಿಸಿ ಬಿಸಿ ಇಡ್ಲಿ ಚಟ್ನಿಗೆ ಬಾರಿ ಫೇಮಸ್

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

ಹೊಸ ಸೇರ್ಪಡೆ

Mangaluru ಸಾರಿಗೆ ಉದ್ಯಮಿ ಪ್ರಕಾಶ್‌ ಅಂತ್ಯಸಂಸ್ಕಾರ

Mangaluru ಸಾರಿಗೆ ಉದ್ಯಮಿ ಪ್ರಕಾಶ್‌ ಅಂತ್ಯಸಂಸ್ಕಾರ

Manipal ಚೂರಿ ಇರಿತ: ನಾಲ್ವರ ಬಂಧನ

Manipal ಚೂರಿ ಇರಿತ: ನಾಲ್ವರ ಬಂಧನ

Udupi ಲಾರಿ ಮಾಲಕರ ಮುಷ್ಕರದಲ್ಲಿ ತಾತ್ಕಾಲಿಕ ಬದಲಾವಣೆ

Udupi ಲಾರಿ ಮಾಲಕರ ಮುಷ್ಕರದಲ್ಲಿ ತಾತ್ಕಾಲಿಕ ಬದಲಾವಣೆ

Belthangady ಸಾತ್ವಿಕ ಬದುಕು ಕಟ್ಟಿಕೊಟ್ಟ ಜನಜಾಗೃತಿ: ಮಾಣಿಲ ಶ್ರೀ

Belthangady ಸಾತ್ವಿಕ ಬದುಕು ಕಟ್ಟಿಕೊಟ್ಟ ಜನಜಾಗೃತಿ: ಮಾಣಿಲ ಶ್ರೀ

Kundapura ಬುಲೆಟ್‌ ಢಿಕ್ಕಿ; ಬೈಕ್‌ ಸವಾರನಿಗೆ ಗಾಯ

Kundapura ಬುಲೆಟ್‌ ಢಿಕ್ಕಿ; ಬೈಕ್‌ ಸವಾರನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.