ಫಲಿತಾಂಶದ ಮೊದಲೇ ರಸ್ತೆ ಅಪಘಾತದಲ್ಲಿ SSLC ಟಾಪರ್ ಮೃತ್ಯು: 6 ಮಂದಿಗೆ ಅಂಗಾಂಗ ದಾನ
Team Udayavani, May 21, 2023, 11:57 AM IST
ತಿರುವನಂತಪುರಂ: ಎಸ್ಎಸ್ಎಲ್ಸಿ ಟಾಪರ್ ಆದ ವಿದ್ಯಾರ್ಥಿಯೊಬ್ಬ ಫಲಿತಾಂಶ ಪ್ರಕಟಗೊಳ್ಳುವ ಮುನ್ನವೇ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು ಆತನ ಅಂಗಾಂಗ ದಾನವನ್ನು ಮಾಡಿ ಪೋಷಕರು ಸಾರ್ಥಕತೆಯನ್ನು ಮೆರದಿದ್ದಾರೆ.
ಅಟ್ಟಿಂಗಲ್ನ ಸರ್ಕಾರಿ ಬಾಲಕರ ಎಚ್ಎಸ್ಎಸ್ ಶಾಲೆಯ ವಿದ್ಯಾರ್ಥಿಯಾಗಿದ್ದ ಬಿಆರ್ ಸಾರಂಗ್ (16) ಮೇ.6 ರಂದು ತನ್ನ ತಾಯಿಯೊಂದಿಗೆ ಆಟೋರಿಕ್ಷಾದಲ್ಲಿ ತೆರಳುತ್ತಿದ್ದಾಗ ವಡಕ್ಕೊಟ್ಟುಕಾವ್ನ ಕುಣಂತುಕೋಣಂ ಸೇತುವೆ ಬಳಿ ಅಪಘಾತವಾಗಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಬಿಆರ್ ಸಾರಂಗ್ ಬುಧವಾರ( ಮೇ.17 ರಂದು) ಮೃತಪಟ್ಟಿದ್ದಾನೆ.
ಇದನ್ನೂ ಓದಿ:ಮಹತ್ವದ ಪಂದ್ಯಕ್ಕೂ ಮೊದಲು ಶಾಕ್: RCB ಪ್ರಮುಖ ಬೌಲರ್ ಕೂಟದಿಂದಲೇ ಔಟ್!
ಇತ್ತ ಶುಕ್ರವಾರ (ಮೇ.19 ರಂದು) ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು, ಅದರಲ್ಲಿ ಸಾರಂಗ್ ಯಾವುದೇ ಗ್ರೇಸ್ ಮಾರ್ಕ್ಗಳ ಸಹಾಯವಿಲ್ಲದೆ A+ ಅಂಕಗಳನ್ನು ಪಡೆದು ಟಾಪರ್ ಆಗಿದ್ದಾರೆ.
ರಾಜ್ಯದ ಸಾಮಾನ್ಯ ಶಿಕ್ಷಣ ಸಚಿವ ವಿ ಶಿವನ್ಕುಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ಎಸ್ಎಸ್ಎಲ್ಸಿ ಫಲಿತಾಂಶಗಳನ್ನು ಪ್ರಕಟಿಸುವಾಗ ಟಾಪ್ ಗ್ರೇಡ್ ನಲ್ಲಿ ಪಾಸ್ ಆದ ವಿದ್ಯಾರ್ಥಿ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳುತ್ತಾ ಭಾವುಕರಾಗಿದ್ದರು.
ಸಾರಂಗ್ ಪೋಷಕರು ತನ್ನ ಮಗನ ಅಂಗಾಂಗವನ್ನು ದಾನ ಮಾಡಿದ್ದಾರೆ. ಸಾರಂಗ್ ಅವರ ಅಂಗಾಂಗ ದಾನದಿಂದ 6 ಮಂದಿಯ ಜೀವ ಉಳಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ