ಮುಂದೆ ಎರಡು ವರ್ಷ ಇಲ್ಲದ ಶುಭ ಮುಹೂರ್ತ ; ವಿಡಿಯೋ ಕಾಲ್ ಮೂಲಕವೇ ನಡೆದ ವಿವಾಹ!
Team Udayavani, May 2, 2020, 6:13 PM IST
ತಿರುವನಂತಪುರಂ: ಕೋವಿಡ್ ವೈರಸ್ ಮಣಿಸಲು ದೇಶವ್ಯಾಪಿ ವಿಧಿಸಲಾಗಿರುವ ಲಾಕ್ ಡೌನ್ ಹಲವಾರು ವೈಚಿತ್ರ್ಯಗಳಿಗೆ ಕಾರಣವಾಗುತ್ತಿದೆ. ಲಾಕ್ ಡೌನ್ನಿಂದಾಗಿ ವೀಡಿಯೋ ಕಾಲ್ ಮೂಲಕ ಮದುವೆ ಕಾರ್ಯಕ್ರಮವೂ ನಡೆದಿದೆ.
ಕೊಟ್ಟಾಯಂನಲ್ಲಿ ವರ ಶ್ರೀಜಿತ್ ನಟೇಶನ್, ವಧು ಅಂಜನಾ ಲಕ್ನೋದಲ್ಲಿ. ಪ್ರಯಾಣಕ್ಕೆ ಅಡ್ಡಿ ಮತ್ತು ಮುಂದಿನ 2 ವರ್ಷಗಳವರೆಗೆ ಶುಭ ದಿನ ಇಲ್ಲದೇ ಇರುವ ಬಗ್ಗೆ ಅರಿತ 2 ಕುಟುಂಬಗಳು ಇಂಥ ಸಾಹಸಕ್ಕೆ ನಿರ್ಧರಿಸಿದವು.
ವೀಡಿಯೋ ಕರೆ ಮಾಡಿಸಿ, ವರನು ಫೋನ್ಗೆ ಮಂಗಳ ಸೂತ್ರ ಕಟ್ಟುವ ಮೂಲಕ ಮದುವೆ ಪೂರ್ಣಗೊಳಿಸಿದ್ದಾನೆ. ಈ ವೇಳೆ ವೀಡಿಯೋ ಕರೆಯಲ್ಲಿ ವಧು ಕೂಡ ಪರದೆ ಮೇಲಿದ್ದಳು.
ಸದ್ಯಕ್ಕೆ ಈ ದಂಪತಿ ಲಾಕ್ಡೌನ್ ನಿರ್ಬಂಧ ತೆಗೆದುಹಾಕುವುದನ್ನು ಕಾಯುತ್ತಿದ್ದಾರೆ. ನಂತರದ ದಿನಗಳಲ್ಲಿ ವಿವಾಹ ಸಂಬಂಧ ದೊಡ್ಡ ಕಾರ್ಯಕ್ರಮ ಆಯೋಜಿಸುವ ಕುರಿತು ಯೋಚಿಸಿದೆ.
ಸೋಂಕಿನಿಂದ ಕೇರಳದ ಶಿಕ್ಷಕಿ ಸಾವು
ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಕೇರಳ ಮೂಲದ ಶಿಕ್ಷಕಿ ಪ್ರಿನ್ಸಿ ರಾಯ್ ಮ್ಯಾಥ್ಯೂ ಕೊನೆಯುಸಿರೆಳೆದಿದ್ದಾರೆ. ಅವರು ಅಬುದಾಭಿಯಲ್ಲಿ ಇರುವ ಅಬುದಾಭಿ ಇಂಡಿಯನ್ ಸ್ಕೂಲ್ನಲ್ಲಿ ಹಿರಿಯ ಶಿಕ್ಷಕಿಯಾಗಿದ್ದರು.
ಕಳೆದವಾರ ಜ್ವರದಿಂದ ಪ್ರಿನ್ಸಿ ನರಳುತ್ತಿದ್ದರು. ಜ್ವರದ ತಾಪಮಾನ ಹೆಚ್ಚಾಗಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ತಕ್ಷಣ ಆಸ್ಪತ್ರೆಗೆ ಸೇರಿಸಿದೆವು. ವೈದರು ಪರೀಕ್ಷೆ ನಡೆಸಿದಾಗ ಕೋವಿಡ್ ಸೋಂಕು ಇರುವುದು ದೃಢಪಟ್ಟಿತ್ತು ಎಂದು ಪತಿ ರಾಯ್ ಮ್ಯಾಥ್ಯೂ ಸ್ಯಾಮ್ಯುಲ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ