ಬಲಿ ಕೊಟ್ಟವರಿಂದ ನರಮಾಂಸ ಭಕ್ಷಣೆ; ದುಷ್ಕರ್ಮಿಗಳ ಘಾತಕ ಕೃತ್ಯ ಬಯಲು

ಮೂವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

Team Udayavani, Oct 13, 2022, 6:55 AM IST

ಬಲಿ ಕೊಟ್ಟವರಿಂದ ನರಮಾಂಸ ಭಕ್ಷಣೆ; ದುಷ್ಕರ್ಮಿಗಳ ಘಾತಕ ಕೃತ್ಯ ಬಯಲು

ಕೊಚ್ಚಿ/ಪತ್ತನಂತಿಟ್ಟ: ಆರ್ಥಿಕ ಸ್ಥಿತಿ ಉತ್ತಮಗೊಳಿಸುವ ನಿಟ್ಟಿನಲ್ಲಿ ಇಬ್ಬರು ಮಹಿಳೆಯರನ್ನು ನರಬಲಿ ನೀಡಿ ಪೈಶಾಚಿಕತೆ ಮೆರೆದಿರುವ ಭಗವಾಲ್‌ ಸಿಂಗ್‌ ಮತ್ತು ಆತನ ಪತ್ನಿ ಲೈಲಾಳ ಹೇಯ ಖಯಾಲಿಯೂ ಬಯಲಾಗಿದೆ.

ತಿರುವಲ್ಲಾದಲ್ಲಿ ಅವರಿಬ್ಬರೂ ಮಹಿಳೆಯರನ್ನು ಕೊಂದ ಬಳಿಕ ಅವರ ಮಾಂಸವನ್ನು ತಿಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟಾರೆ ಪ್ರಕರಣದ ಬಗ್ಗೆ ಅವರನ್ನು ಬಲವಾಗಿ ವಿಚಾರಣೆಗೆ ಒಳಪಡಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ ಎಂದು ಬುಧವಾರ ಕೊಚ್ಚಿ ಪೊಲೀಸ್‌ ಆಯುಕ್ತ ಸಿ.ನಾಗರಾಜು ತಿಳಿಸಿದ್ದಾರೆ.

ಇದರ ಜತೆಗೆ ಮತ್ತೊಬ್ಬ ಬಂಧಿತ ವ್ಯಕ್ತಿ ಮೊಹಮ್ಮದ್‌ ಶರೀಫ್ ಕಾಮ ಪಿಪಾಸು ಆಗಿದ್ದನೆಂದೂ ಅವರು ತಿಳಿಸಿದ್ದಾರೆ. ಇಬ್ಬರು ಮಹಿಳೆಯರನ್ನೂ ಕಟ್ಟಿ ಹಾಕಿ, ಅತ್ಯಂತ ಹಿಂಸಾತ್ಮಕವಾಗಿ ಅವರ ದೇಹದ ಭಾಗಗಳನ್ನು ಹರಿತವಾದ ಆಯುಧಗಳಿಂದ ಗಾಯಗೊಳಿಸ ಲಾಗಿತ್ತು. ಈ ಪೈಕಿ ಪದ್ಮಾ ಅವರನ್ನು 56 ತುಂಡುಗಳನ್ನಾಗಿ ಕತ್ತರಿಸಿ ಮೂರು ಗುಂಡಿಗಳಲ್ಲಿ ಪ್ರತ್ಯೇಕವಾಗಿ ಹೂಳಲಾಗಿತ್ತು. ಅದಕ್ಕಿಂತ ಮೊದಲು ಅವರ ಕತ್ತು ಹಿಸುಕಿ ಕೊಲ್ಲಲಾಗಿತ್ತು. ಅವರ ಶಿರಚ್ಛೇದವನ್ನೂ ನಡೆಸಲಾಗಿತ್ತು ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

ರೋಸ್ಲಿನ್‌ ಎಂಬವರ ಎದೆಯ ಭಾಗವನ್ನು ಲೈಲಾ ತುಂಡರಿಸಿದ್ದಳು ಎಂದು ತನಿಖೆಯ ವೇಳೆ ಗೊತ್ತಾಗಿದೆ. ಇದೇ ವೇಳೆ, ಮೂವರನ್ನು ಕೊಚ್ಚಿಯ ಸ್ಥಳೀಯ ನ್ಯಾಯಾಲಯ 14 ದಿನಗಳ ನ್ಯಾಯಾಂಗ ವಶಕ್ಕೊಪ್ಪಿಸಿ ಆದೇಶ ನೀಡಿದೆ.

ಶರೀಫ್ ಕಾಮಪಿಪಾಸು: ಬಂಧಿತನಾಗಿರುವ ಮೊಹಮ್ಮದ್‌ ಶರೀಫ್ ಭಗವತ್‌ ಸಿಂಗ್‌ ಮತ್ತು ಲೈಲಾ ದಂಪತಿಯ ವಿತ್ತೀಯ ಬಿಕ್ಕಟ್ಟು ನಿವಾರಣೆಯಾಗಲು ನರಬಲಿ ನೀಡುವುದೇ ಉತ್ತಮ ಎಂದು ಸಲಹೆ ನೀಡಿದ್ದ. 2020ರಲ್ಲಿ ವೃದ್ಧೆಯ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಆರೋಪ ಕೂಡ ದಾಖಲಾಗಿತ್ತು ಎಂದು ಕೊಚ್ಚಿ ಪೊಲೀಸ್‌ ಆಯುಕ್ತರು ಹೇಳಿದ್ದಾರೆ. ಇದರ ಜತೆಗೆ ಆತನೂ ನರಮಾಂಸ ಭಕ್ಷಣೆ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಆತನೇ ಪ್ರಮುಖ: ಒಟ್ಟಾರೆ ಪ್ರಕರಣದಲ್ಲಿ ಮೊಹಮ್ಮದ್‌ ಶರೀಫ್ ಅವನೇ ಪ್ರಧಾನ ಆರೋಪಿ. ಆತ ನರಬಲಿ ಕೊಡದೇ ಇದ್ದರೆ ಸಮಸ್ಯೆಗಳು ನಿವಾರಣೆಯಾಗಲು ಸಾಧ್ಯ ವಿಲ್ಲ ಎಂದು ದಂಪತಿಯ ಮನಸ್ಸಿನಲ್ಲಿ ಭಯದ ಬೀಜ ಬಿತ್ತಿದ್ದ. 15 ವರ್ಷಗಳ ಅವಧಿ ಯಲ್ಲಿ ಆತನ ವಿರುದ್ಧ ಹತ್ತು ಕೇಸು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಅಸುನೀಗಿದ ಮಹಿಳೆಯರ ದೇಹದ ಖಾಸಗಿ ಭಾಗಗಳಿಗೂ ಚೂರಿಯಿಂದ ಇರಿದು ಘಾಸಿಗೊಳಿಸಿದ್ದ. ಆತ ಅತ್ಯಾಚಾರ ಎಸಗಿ, ಗಾಯಗೊಳಿಸಿ, ನೋವಿನಿಂದ ನರಳುವು ದನ್ನು ನೋಡಿ ಸಂತೋಷಪಡುತ್ತಿದ್ದ.

ಹೀಗಾಗಿ ಆತ ವಿಕೃತ ಸಂತೋಷವನ್ನು ಹೊಂದುವ ವ್ಯಕ್ತಿಯಾಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ಶಫಿ ಕೊಚ್ಚಿಯ ಗಾಂಧಿನಗರ ನಿವಾಸಿ ಯಾಗಿದ್ದಾನೆ. ಆತ ಪತ್ನಿಯ ಜತೆಗೆ ಸದಾ ಕಾಲ ಜಗಳವನ್ನೇ ಮಾಡುತ್ತಿದ್ದ ಎಂದು ಸ್ಥಳೀಯರು ಆರೋಪಿ ಸಿದ್ದಾರೆ. ಈತ ದಂಪತಿಗೆ ಮಹಿಳೆಯರನ್ನು ಪೂರೈಸುವ ಏಜೆಂಟ್‌ ಕೂಡ ಆಗಿದ್ದ.

ನಕಲಿ ಖಾತೆ
ಶರೀಫ್ ದುಷ್ಕೃತ್ಯವನ್ನು ಎಸಗಲು ಫೇಸ್‌ಬುಕ್‌ನಲ್ಲಿ “ಶ್ರೀದೇವಿ’ ಎಂಬ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದ ಎಂದು ಐಪಿಎಸ್‌ ಅಧಿಕಾರಿ ಹೇಳಿದ್ದಾರೆ. ಅದರ ಮೂಲಕ ಮಹಿಳೆಯರನ್ನು ಮರಳು ಗೊಳಿಸಿ, ವಂಚಿಸುತ್ತಿದ್ದ. ಫೇಸ್‌ಬುಕ್‌ ಮೆಸೇಂಜರ್‌ ಮೂಲಕವೇ ಸಿಂಗ್‌ ಮತ್ತು ಆತನ ಪತ್ನಿಯನ್ನು ಸಂಪರ್ಕಿಸಿದ್ದ. ಇದಾದ ಬಳಿಕ ಪದೇ ಪದೆ ಅವರ ಮನೆಗೆ ತೆರಳಿ ನಂಬಿಕೆ ಬರುವಂತೆ ಮಾಡಿದ್ದ. ಹೀಗಾಗಿ ಮೂವರ ನಡುವೆ ಗಾಢ ಬಾಂಧವ್ಯ ಏರ್ಪಟ್ಟಿತ್ತು.

ಟಾಪ್ ನ್ಯೂಸ್

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.