
ಕೇರಳದ ಹಳ್ಳಿಯ ಹೆಸರೇ ಕಥಕ್ಕಳಿ ಗ್ರಾಮಂ; 12 ವರ್ಷಗಳ ಹೋರಾಟಕ್ಕೆ ಸಂದ ಜಯ
ಪಟ್ಟಣಂತಿಟ್ಟ ಜಿಲ್ಲೆಯ ಅರಿಯೂರು ಹಳ್ಳಿಯ ಹೆಸರು ಬದಲು
Team Udayavani, Mar 25, 2023, 7:30 AM IST

ಪಟ್ಟಣಂತಿಟ್ಟ: ಕೇರಳದ ಪಟ್ಟಣಂತಿಟ್ಟ ಎಂಬ ಜಿಲ್ಲೆಯಲ್ಲಿರುವ ಅರಿಯೂರು ಗ್ರಾಮದ ಹೆಸರನ್ನು “ಅರಿಯೂರು ಕಥಕ್ಕಳಿ ಗ್ರಾಮಂ’ ಎಂದು ಬದಲಿಸಲಾಗಿದೆ. ಇದರ ಹಿಂದೆ 12 ವರ್ಷಗಳ ರೋಚಕ ಹೋರಾಟವಿದೆ. ಈ ಊರು ಕಥಕ್ಕಳಿಗೆ ಬಹಳ ಪ್ರಖ್ಯಾತವಾಗಿದೆ. ಇಲ್ಲಿ ಪುರಾಣಗಳ ಕಥೆಗಳನ್ನು ಮಾತ್ರವಲ್ಲ, ಬೈಬಲ್ನ ಕಥೆಗಳನ್ನೂ ಕಥಕ್ಕಳಿಗೆ ಅಳವಡಿಸಲಾಗಿದೆ! ಹಾಗಾಗಿ ಪಂಪಾ ನದೀ ತೀರದಲ್ಲಿರುವ ಅರಿಯೂರು ಗ್ರಾಮ ಸಂಪೂರ್ಣ ಕಥಕ್ಕಳಿಮಯವಾಗಿದೆ.
ಕಥಕ್ಕಳಿ ಎಂಬ ನೃತ್ಯಕಲೆ 300 ವರ್ಷಗಳ ಹಿಂದೆ ಕೇರಳದಲ್ಲಿ ಹುಟ್ಟಿದ್ದು. ಇದರಲ್ಲಿ ನರ್ತನ, ನಟನೆ, ಅರ್ಪಣೆ, ಸಂಗೀತ, ವಸ್ತ್ರಾಲಂಕಾರ, ಅಲಂಕಾರಗಳಿವೆ. ಪುರಾಣ ಕಥೆಗಳನ್ನು ನರ್ತನ, ಮುಖಭಾವ, ಹಾವಭಾವಗಳ ಮೂಲಕ ತೋರಿಸಲಾಗುತ್ತದೆ. ಈಗಂತೂ ಅಬ್ರಹಾಮನ ತ್ಯಾಗ, ಪೋಲಿ ಮಗ, ಮೇರಿ ಮ್ಯಾಗ್ಡಲೀನ್ ಎಂಬ ಕ್ರೈಸ್ತರಿಗೆ ಸಂಬಂಧಿಸಿದ ಕಥೆಗಳನ್ನೂ ಅಳವಡಿಸಿಕೊಳ್ಳಲಾಗಿದೆ. ಇದನ್ನು ಕ್ರೈಸ್ತ ಸಮುದಾಯವೂ ಅಷ್ಟೇ ಪ್ರೀತಿಯಿಂದ ಸ್ವೀಕರಿಸಿದೆ.
ಕಥಕ್ಕಳಿ ನರ್ತಕರ ಕುಟುಂಬದಲ್ಲಿ ಹುಟ್ಟಿದ ವಿಮಲ್ರಾಜ್ಗೆ ನರ್ತನ ಬರುವುದಿಲ್ಲ. ಆದರೆ ಅದರ ಪ್ರೇಮಿಯಾಗಿರುವ ಅವರು 1995ರಲ್ಲಿ ಕಥಕ್ಕಳಿ ಜಿಲ್ಲಾ ಕ್ಲಬ್ ಆರಂಭಿಸಿದರು. ಅವರ ವಿನಂತಿಯಂತೆ 2010ರಲ್ಲಿ ಗ್ರಾಮ ಪಂಚಾಯ್ತಿ, ಗ್ರಾಮದ ಹೆಸರನ್ನು ಬದಲಾಯಿಸುವ ನಿರ್ಣಯ ಕೈಗೊಂಡಿತು. ಅದು ಜಾರಿಯಾಗಬೇಕಾದರೆ 12 ವರ್ಷಗಳು ಬೇಕಾಯಿತು ಎಂದು ವಿಮಲ್ರಾಜ್ ತಿಳಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Express train ಬರುವ ವೇಳೆ ಟ್ರ್ಯಾಕ್ ಮೇಲೆ ಲಾರಿ ಟೈರ್ ಗಳು; ಆರೋಪಿಗಳಿಗೆ ಶೋಧ

NCB ಯಿಂದ ನಿಷೇಧಿತ ಮಾದಕವಸ್ತು ಸಹಿತ ಮಹಿಳೆಯ ಬಂಧನ

Odisha trains ಅವಘಡ: ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದದ್ದೇನು?

Train Tragedy ಜವಾಬ್ದಾರರಿಗೆ ಕಠಿಣ ಶಿಕ್ಷೆಯಾಗುತ್ತದೆ: ಒಡಿಶಾದಲ್ಲಿ ಪ್ರಧಾನಿ ಮೋದಿ

India’s Train Tragedy: 1981-2023ರ ನಡುವೆ ಭಾರತದಲ್ಲಿ ನಡೆದ ಭೀಕರ ರೈಲು ದುರಂತಗಳಿವು…
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ
ಹೊಸ ಸೇರ್ಪಡೆ

French Open Grand Slam-2023: ರುನೆ, ಸ್ವಿಯಾಟೆಕ್, ಗಾಫ್ ಮುನ್ನಡೆ

ಲಂಚ ನೀಡಬೇಡಿ, ಮಧ್ಯವರ್ತಿಗಳ ಬಗ್ಗೆ ಎಚ್ಚರದಿಂದಿರಿ: ಶಾಸಕ ಹರೀಶ್ಗೌಡ

ಸಿಡಿಲಿಗೆ ಬಲಿಯಾಗಿದ್ದ ಹರೀಶ್ ಕುಟುಂಬಕ್ಕೆ 5 ಲಕ್ಷ ರೂ. ಚೆಕ್ ವಿತರಣೆ

Congress ದೌರ್ಜನ್ಯ ತಡೆಯಲು ಶೀಘ್ರದಲ್ಲೇ ಸಹಾಯವಾಣಿ: ತೇಜಸ್ವಿ ಸೂರ್ಯ

ಕಾರ್ಕಳ: ಮೀನಿನ ಗೊಬ್ಬರ ಸಾಗಿಸುತ್ತಿದ್ದ ಲಾರಿ ಮರಕ್ಕೆ ಢಿಕ್ಕಿ: ಗಾಯ