New Born Baby; ಹೆರಿಗೆ ಆದ ಕೂಡಲೇ ಶಿಶುವನ್ನು ಬಕೆಟ್ಗೆ ಹಾಕಿದ ಮಹಾ ತಾಯಿ!
ನವಜಾತ ಶಿಶುವನ್ನು ರಕ್ಷಿಸಿದ ಕೇರಳ ಪೊಲೀಸರು, ನರ್ಸಿಂಗ್ ಹೋಂ ಸಿಬ್ಬಂದಿ
Team Udayavani, Apr 6, 2023, 7:30 AM IST
ಚೆಂಗನ್ನೂರ್: ಮನೆಯ ಸ್ನಾನದ ಕೊಠಡಿಯಲ್ಲಿ ಬಕೆಟ್ವೊಂದರಲ್ಲಿ ಹಾಕಲಾಗಿದ್ದ ನವಜಾತ ಶಿಶುವೊಂದು ಕೇರಳ ಪೊಲೀಸರು ಮತ್ತು ಖಾಸಗಿ ನರ್ಸಿಂಗ್ ಹೋಂ ವೈದ್ಯರ ಸಮಯಪ್ರಜ್ಞೆಯಿಂದಾಗಿ ಬದುಕುಳಿಯಲು ಸಾಧ್ಯವಾಗಿದೆ.
ಪಟ್ಟಣಂತಿಟ್ಟ ಜಿಲ್ಲೆಯ ಕೊಟ್ಟ ಎಂಬ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ತನಗೆ ತೀವ್ರ ರಕ್ತಸ್ರಾವವಾಗುತ್ತಿದ್ದು, ಚಿಕಿತ್ಸೆ ನೀಡಿ ಎಂದು ಕೋರಿ 34 ವರ್ಷದ ಮಹಿಳೆ ಚೆಂಗನ್ನೂರು ನರ್ಸಿಂಗ್ ಹೋಂಗೆ ಆಗಮಿಸಿದ್ದರು. ಆಕೆಯನ್ನು ಪರೀಕ್ಷಿಸಿದಾಗ, ಆಕೆಗೆ ಸ್ವಲ್ಪ ಹೊತ್ತಿಗೆ ಮುಂಚೆಯಷ್ಟೇ ಹೆರಿಗೆಯಾಗಿದ್ದು ವೈದ್ಯರಿಗೆ ಗೊತ್ತಾಯಿತು.
ಕೂಡಲೇ, ಮಗು ಎಲ್ಲಿದೆ ಎಂದು ಆಕೆಯನ್ನು ಪ್ರಶ್ನಿಸಲಾಯಿತು. ಮಹಿಳೆಯೊಂದಿಗೆ ಆಸ್ಪತ್ರೆಗೆ ಬಂದಿದ್ದ ಆಕೆಯ 9 ವರ್ಷದ ಮಗ, “ಮಗುವನ್ನು ಅಮ್ಮ ಮನೆಯ ಬಾತ್ರೂಂನಲ್ಲಿ ಬಕೆಟ್ಗೆ ಹಾಕಿಟ್ಟಿದ್ದಾರೆ’ ಎಂದು ಮಾಹಿತಿ ನೀಡಿದ.
ಇದನ್ನು ಕೇಳಿ ಗಾಬರಿಗೊಂಡ ಆಸ್ಪತ್ರೆಯ ಸಿಬ್ಬಂದಿ, ಸ್ವಲ್ಪವೂ ತಡಮಾಡದೇ ಆಕೆಯ ಮನೆಗೆ ಧಾವಿಸಿ, ಮಗುವನ್ನು ಎತ್ತಿಕೊಂಡು ನರ್ಸಿಂಗ್ ಹೋಂಗೆ ಶಿಫ್ಟ್ ಮಾಡಿದರು.
ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಶಿಶುವನ್ನು ಕೊಟ್ಟಾಯಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತು. ಈ ಮೂಲಕ ಮಗುವಿನ ಜೀವವನ್ನು ಉಳಿಸಲಾಯಿತು. ಪೊಲೀಸರು ಬಾತ್ರೂಂನಿಂದ ಶಿಶುವನ್ನು ಎತ್ತಿಕೊಂಡು ರಸ್ತೆಗೆ ಧಾವಿಸುತ್ತಿರುವ, ಅಲ್ಲಿಂದ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Kerala | Police in Chengannur of Alappuzha district rescued a newborn abandoned by its mother in a bucket at her home. The woman reached the hospital after delivery at home and informed the hospital authorities that she left her newborn alive in a bucket in the bathroom of her… pic.twitter.com/ffGsQFFh4s
— ANI (@ANI) April 4, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ