ಪ್ರೀತಿ ನಿರಾಕರಿಸಿದಕ್ಕೆ ಬೆಂಕಿ ಹಚ್ಚಿ ತಾನೂ ಜೀವ ಕಳೆದುಕೊಂಡ!
Team Udayavani, Dec 19, 2021, 7:45 PM IST
ಕಲ್ಲಿಕೋಟೆ: ಪ್ರೀತಿಯನ್ನು ನಿರಾಕರಿಸಿದ ಕಾರಣಕ್ಕಾಗಿ ಕಿಡಿಗೇಡಿ ಹಚ್ಚಿದ್ದ ಬೆಂಕಿಯಿಂದ ಶೇ.98ರಷ್ಟು ಸುಟ್ಟ ಗಾಯಗಳಾಗಿದ್ದ ಕೃಷ್ಣಪ್ರಿಯಾ (22) ಎಂಬ ಯುವತಿ ಅಸುನೀಗಿದ್ದಾಳೆ. ಈ ಕುಕೃತ್ಯವೆಸಗಿದ ನಂದನ್ ಕುಮಾರ್ (26) ಎಂಬಾತ ಕೂಡ ಬೆಂಕಿ ಹಚ್ಚಿಕೊಂಡು, ಗಾಯಗೊಂಡು ಸಾವಿಗೀಡಾಗಿದ್ದಾನೆ.
ಕಲ್ಲಿಕೋಟೆ ಜಿಲ್ಲೆಯ ಥಿಕ್ಕೋಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೃಷ್ಣಪ್ರಿಯಾ ಎಂಬ ಯುವತಿ ವಾರದ ಹಿಂದಷ್ಟೇ ಕೆಲಸಕ್ಕೆ ಸೇರಿದ್ದರು. ಅಲ್ಲಿ ನೌಕರನಾಗಿದ್ದ ನಂದನ್ ಕುಮಾರ್ ಎಂಬಾತ ಆಕೆಗೆ ಕಿರುಕುಳ ನೀಡಲು ಆರಂಭಿಸಿದ್ದ. ಆತ ಕೃಷ್ಣಪ್ರಿಯಾಳನ್ನು ಮದುವೆಯಾಗುವ ಬೇಡಿಕೆ ಇರಿಸಿದ್ದ. ಆದರೆ, ಆಕೆ ಅದನ್ನು ತಿರಸ್ಕರಿಸಿದ್ದ ಕಾರಣ ಶುಕ್ರವಾರ ಮಾತನಾಡಲೆಂದು ಆಕೆಯನ್ನು ಕರೆದಿದ್ದ. ಈ ಸಂದರ್ಭದಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ.
ಇದನ್ನೂ ಓದಿ:ಮಾಜಿ ಸಚಿವ ಅನ್ಸಾರಿ ಜಾತಿ ಜಗಳ ಹಚ್ಚಲು ಷಡ್ಯಂತ್ರ ನಡೆಸಿದ್ದಾರೆ: ಯಮನೂರ ಚೌಡ್ಕಿ
ಸುಟ್ಟಗಾಯಗಳಿಂದ ನರಳುತ್ತಿದ್ದ ಇಬ್ಬರನ್ನೂ ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪೊಲೀಸರಿಗೆ ಯುವತಿ ನೀಡಿದ ಮಾಹಿತಿಯಲ್ಲಿ ನಂದಕುಮಾರ್ ಚೂರಿಯಿಂದ ಇರಿದಿದ್ದ ಘಟನೆ ವಿವರಿಸಿದ್ದಳು.
ಪೊಲೀಸರು ಕೇಸುದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA