
ಪ್ರತ್ಯೇಕತವಾದಿ ಅಮೃತ್ ಪಾಲ್ ಪರಾರಿ? ಉತ್ತರಾಖಂಡದಲ್ಲೂ ಪೊಲೀಸರ ಶೋಧ
ಪಂಜಾಬ್ನ ಹಲವೆಡೆ ದಾಳಿ, ವಿಡಿಯೋ, ದಾಖಲೆಗಳ ವಶ
Team Udayavani, Mar 25, 2023, 7:25 AM IST

ಚಂಡೀಗಢ: ಪಂಜಾಬ್ ಪೊಲೀಸರಿಂದ ತಪ್ಪಿಸಿಕೊಂಡಿರುವ ಖಲಿಸ್ತಾನಿ ಪ್ರತ್ಯೇಕವಾದಿ ನಾಯಕ ಅಮೃತ್ಪಾಲ್ ಸಿಂಗ್ ಉತ್ತರಾಖಂಡದಲ್ಲಿ ಅವಿತಿರುವ ಸಾಧ್ಯತೆ ಇದೆ.
ಹೀಗಾಗಿ, ಈ ರಾಜ್ಯದಲ್ಲೂ ಶೋಧ ಕಾರ್ಯ ನಡೆಸಲಾಗಿದೆ. ಜತೆಗೆ ನೇಪಾಳ ಪ್ರವೇಶ ಮಾಡದಂತೆ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಸಶಸ್ತ್ರ ಸೀಮಾ ಬಲದ ತಂಡವನ್ನು ಕಟ್ಟೆಚ್ಚರ ಸ್ಥಿತಿಯಲ್ಲಿ ಇರಿಸಲಾಗಿದೆ.
ಈ ನಡುವೆ, ಆತನ ಮೊಬೈಲ್ ಲೊಕೇಷನ್ ಪ್ರಕಾರ ಹರ್ಯಾಣದ ಕುರುಕ್ಷೇತ್ರ ಜಿಲ್ಲೆಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಆ ರಾಜ್ಯದ ಪೊಲೀಸರೂ ಶೋಧ ಕಾರ್ಯ ಶುರು ಮಾಡಿದ್ದಾರೆ. ಇದೇ ವೇಳೆ, ಪಂಜಾಬ್ ಪೊಲೀಸರು ವಿವಿಧೆಡೆ ಶೋಧ ಕಾರ್ಯ ನಡೆಸಿದ ವೇಳೆ ಖಲಿಸ್ತಾನ ಬೆಂಬಲಿಗನೊಬ್ಬನ ಬಳಿಯಿಂದ ಖಲಿಸ್ತಾನ ಕರೆನ್ಸಿ, ಧ್ವಜ, ಶಸ್ತ್ರಾಸ್ತ್ರಗಳ ಬಳಕೆ ಬಗ್ಗೆ ತರಬೇತಿ ನೀಡುವ ವಿಡಿಯೋಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಿಖ್ ತಣ್ತೀಪಾಲಕನೇ ಅಲ್ಲ!: ಅಮೃತ್ಪಾಲ್ ಬಗ್ಗೆ ಗುಪ್ತಚರ ವರದಿಯೊಂದು ಸಿದ್ಧವಾಗಿದ್ದು, ಅದರಲ್ಲಿ ಆತನ ಮತನಿಷ್ಠೆಯನ್ನೇ ಪ್ರಶ್ನಿಸುವಂತಹ ಹಲವು ಪ್ರಮುಖ ವಿಚಾರಗಳು ಪ್ರಸ್ತಾಪವಾಗಿವೆ. ಆತ ಸಿಖ್ ತಣ್ತೀಗಳನ್ನೇನು ಶ್ರದ್ಧೆಯಿಂದ ಪಾಲಿಸುತ್ತಿರಲಿಲ್ಲ, ಈಗಾತ ಭಿಂದ್ರನ್ವಾಲೆ ರೀತಿ ತನ್ನನ್ನು ಬಿಂಬಿಸಿಕೊಳ್ಳುತ್ತಿದ್ದಾನೆ ಎಂದು ಗುಪ್ತಚರ ವರದಿಗಳಲ್ಲಿ ಹೇಳಲಾಗಿದೆ.
ಸದ್ಯ ಇಂಗ್ಲೆಂಡ್ ಪ್ರಜೆಯಾಗಿರುವ ಕಿರಣ್ದೀಪ್ ಕೌರ್ಳನ್ನು ಈ ವರ್ಷ ಫೆಬ್ರವರಿಯಲ್ಲಿ ನಡೆದ ಗುಪ್ತ ಕಾರ್ಯಕ್ರಮದಲ್ಲಿ ಅಮೃತ್ಪಾಲ್ ಸಿಂಗ್ ವಿವಾಹವಾಗಿದ್ದಾನೆ. ತನ್ನ ಪತ್ನಿಗೆ ಹೊಡೆಯುವ ಸ್ವಭಾವ ಹೊಂದಿರುವ ಆತ, ಆಕೆಯನ್ನು ಬಂಧಿಸಿಟ್ಟಿರುವ ಸಾಧ್ಯತೆಯಿದೆ. ಆತ ಆಗಾಗ ಥಾಯ್ಲೆಂಡ್ಗೂ ಹೋಗುತ್ತಿದ್ದ. ಅಲ್ಲಿ ಆತನಿಗೆ ಇನ್ನೊಬ್ಬ ಪತ್ನಿಯಿರುವ ಸಾಧ್ಯತೆಯಿದೆ ಎಂಬ ಅಂಶವೂ ಗುಪ್ತಚರ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Balasore Train Tragedy ಸಂತ್ರಸ್ತರಿಗೆ ರಿಲಯನ್ಸ್ ಫೌಂಡೇಷನ್ ಹತ್ತು ಅಂಶಗಳ ನೆರವು

VIDEO: ಅಂತರ್ಜಾತಿ ವಿವಾಹವಾದ ಸಹೋದರಿಯನ್ನು ಗಂಡನ ಮನೆಯಿಂದ ಬಲವಂತವಾಗಿ ಎಳೆದೊಯ್ದ ಸಹೋದರರು

Gujarat: ಕ್ರಿಕೆಟ್ ಬಾಲ್ ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳು ಕತ್ತರಿಸಿ, ಹಲ್ಲೆ

Indore: ಚಾಕ್ಲೇಟ್,ಆಟಿಕೆ ಕೇಳಿದ್ದಕ್ಕೆ 8 ವರ್ಷದ ಮಗಳನ್ನು ಭೀಕರವಾಗಿ ಹತ್ಯೆಗೈದ ಪಾಪಿ ತಂದೆ

Odisha train tragedy: ನಿದ್ದೆ ಇಲ್ಲದ ಆ ಮೂರು ರಾತ್ರಿಗಳು!
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು
ಹೊಸ ಸೇರ್ಪಡೆ

Gruha Jyoti ಬಾಡಿಗೆದಾರರಿಗೂ ಸಿಗಲಿದೆ ಉಚಿತ ವಿದ್ಯುತ್ ಭಾಗ್ಯ: ಮಾಡಬೇಕಾದ ವಿಧಾನ ಇಲ್ಲಿದೆ

Balasore Train Tragedy ಸಂತ್ರಸ್ತರಿಗೆ ರಿಲಯನ್ಸ್ ಫೌಂಡೇಷನ್ ಹತ್ತು ಅಂಶಗಳ ನೆರವು

Kalaburagi: ತಲ್ವಾರ್ ನಿಂದ ಕೊಚ್ಚಿ ಯುವಕನ ಕೊಲೆ

WTC Final 2023: ತೆಂಡೂಲ್ಕರ್, ದ್ರಾವಿಡ್ ದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್ ಕೊಹ್ಲಿ

VIDEO: ಅಂತರ್ಜಾತಿ ವಿವಾಹವಾದ ಸಹೋದರಿಯನ್ನು ಗಂಡನ ಮನೆಯಿಂದ ಬಲವಂತವಾಗಿ ಎಳೆದೊಯ್ದ ಸಹೋದರರು