ಕ್ಯಾಸಿನೊಗಳ ಆರಂಭಕ್ಕೆ ಪರವಾನಗಿ ನೀಡಿದರೆ ಕೋವಿಡ್ ಮೂರನೇ ಅಲೆಗೆ ಆಮಂತ್ರಣ ನೀಡಿದಂತೆ
Team Udayavani, Aug 23, 2021, 4:49 PM IST
ಪಣಜಿ: ರಾಜ್ಯದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಸದ್ಯ ಬಂದ್ ಇರುವ ಕ್ಯಾಸಿನೊಗಳನ್ನು ಆರಂಭಿಸಲು ಪರವಾನಗಿ ನೀಡಿದರೆ ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಗೆ ಆಮಂತ್ರಣ ನೀಡಿದಂತಾಗಲಿದೆ. ಇದರಿಂದಾಗಿ ಸದ್ಯ ರಾಜ್ಯದಲ್ಲಿ ಕ್ಯಾಸಿನೊ ಆರಂಭಿಸಲು ಪರವಾನಗಿ ನೀಡಬಾರದು ಎಂದು ಗೋವಾ ಪ್ರದೇಶ ಯುವ ಕಾಂಗ್ರೇಸ್ ಸಮೀತಿ, ರಾಜ್ಯಪಾಲರಾದ ಪಿ.ಎಸ್.ಶ್ರೀಧರನ್ ಪಿಳ್ಳೆ ರವರ ಬಳಿ ಮನವಿ ಮಾಡಿದೆ.
ಇದನ್ನೂ ಓದಿ:ಗ್ರಾಪಂ ಕಾರ್ಯದರ್ಶಿ ಮತ್ತು ಕಂಪ್ಯೂಟರ್ ಅಪರೇಟರ್ ಎಸಿಬಿ ಬಲೆಗೆ
ಈ ಕುರಿತಂತೆ ರಾಜ್ಯ ಯುವ ಕಾಂಗ್ರೇಸ್ ಸಮೀತಿ ಅಧ್ಯಕ್ಷ ವರದ್ ಮಾರ್ದೋಳಕರ್ ನೀಡಿರುವ ಮಾಹಿತಿಯ ಅನುಸಾರ- ಪಣಜಿಯ ಮಾಂಡವಿ ನದಿಯಲ್ಲಿರುವ ಕ್ಯಾಸಿನೊಗಳಿಗೆ ದೇಶ ವಿದೇಶಗಳ ಪ್ರವಾಸಿಗರು ಆಗಮಿಸುತ್ತಾರೆ. ಕ್ಯಾಸಿನೊ ಆರಂಭಿಸಿದರೆ ರಾಜ್ಯಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಲಿದೆ, ಆದರೆ ರಾಜ್ಯದಲ್ಲಿ ಕೋವಿಡ್ ಹರಡುವ ಸಾಧ್ಯತೆಯಿದೆ. ಇದರಿಂದಾಗಿ ಕ್ಯಾಸಿನೊ ಆರಂಭಿಸಲು ಪರವಾನಗಿ ನೀಡಬಾರದು ಎಂದು ರಾಜ್ಯಪಾಲರ ಬಳಿ ಮನವಿ ಮಾಡಲಾಗಿದೆ ಎಂಬ ಮಾಹಿತಿ ನೀಡಿದರು.