ಮಣಿಶಂಕರ್ ಅಯ್ಯರ್ ಪುತ್ರಿ ಸಂಸ್ಥೆ ಲೈಸನ್ಸ್ ರದ್ದು
Team Udayavani, Mar 2, 2023, 6:50 AM IST
ಹೊಸದಿಲ್ಲಿ: ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆಯ (ಎಫ್ಸಿಆರ್ಎ) ನಿಯಮಗಳನ್ನು ಉಲ್ಲಂ ಸಿದ ಆರೋಪದಲ್ಲಿ ಚಿಂತಕರ ಚಾವಡಿ “ಸೆಂಟರ್ ಫಾರ್ ಪಾಲಿಸಿ ರಿಸರ್ಚ್’ನ(ಸಿಪಿಆರ್) ಎಫ್ಸಿಆರ್ಎ ಪರವಾನಗಿಯನ್ನು ಕೇಂದ್ರ ಗೃಹ ಸಚಿವಾಲಯ ರದ್ದುಗೊಳಿಸಿದೆ.
ಈ ಸಂಸ್ಥೆಗೆ ಕಾಂಗ್ರೆಸ್ ನಾಯಕ ಮಣಿ ಶಂಕರ್ ಅಯ್ಯರ್ ಪುತ್ರಿ ಯಾಮಿನಿ ಅಯ್ಯರ್ ಅಧ್ಯಕ್ಷೆ ಮತ್ತು ಸಿಇಒ ಆಗಿದ್ದಾರೆ. ಎಫ್ಸಿಆರ್ಎ ನಿಯಮಗಳು ಉಲ್ಲಂ ಸಿರುವುದು ಸ್ಪಷ್ಟವಾಗಿರುವುದರಿಂದ ಸಿಪಿಆರ್ ಲೈಸನ್ಸ್ ರದ್ದುಪಡಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
ಹಣಕಾಸು ಅಕ್ರಮಗಳ ಆರೋಪದಲ್ಲಿ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಕೇಂದ್ರ ತೆರಿಗೆ ಇಲಾಖೆಯು ಸಿಪಿಆರ್ ಕಚೇರಿಯಲ್ಲಿ ಶೋಧ ನಡೆಸಿತ್ತು.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಬಿಜೆಪಿ ಸರಕಾರದಲ್ಲಿ ಸ್ವತಂತ್ರ ಆಲೋಚ ನೆಯ ಜನರಿಗೆ ಕಿರುಕುಳ ನೀಡುವುದು ಮುಂದುವರಿದಿದೆ. ಪ್ರಧಾನಿ ಮೋದಿ ಅವರಿಗೆ ತಮಟೆ ಬಾರಿಸುವವರು ಬೇಕು ಎಂದು ಟೀಕಿಸಿದ್ದಾರೆ.