ಕೃಷ್ಣ, ಹನುಮಂತ ವಿಶ್ವದ ಶ್ರೇಷ್ಠ ರಾಜತಾಂತ್ರಿಕರು: ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿಕೆ
Team Udayavani, Jan 30, 2023, 7:15 AM IST
ನವದೆಹಲಿ: ಭಗವಾನ್ ಕೃಷ್ಣ ಹಾಗೂ ಹನುಮಂತ, ವಿಶ್ವದ ಶ್ರೇಷ್ಠ ರಾಜತಾಂತ್ರಿಕರು. ಜಗತ್ತಿನ ಅತ್ಯುತ್ತಮ 10 ಅಂತಾರಾಷ್ಟ್ರೀಯ ರಾಜತಾಂತ್ರಿಕ ಪರಿಕಲ್ಪನೆಯನ್ನ ಪರಿಗಣಿಸುವುದಾದರೆ ಅದರ ಮೂಲವೂ ಮಹಾಭಾರತವೇ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಜೈಶಂಕರ್ ಅವರ ದಿ-ಇಂಡಿಯನ್ ವೇ ಪುಸ್ತಕದ ಮರಾಠಿ ಅವತರಣಿಕೆ ಭಾರತ್ ಮಾರ್ಗ್ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ವೇಳೆ ಅಂತಾರಾಷ್ಟ್ರೀಯ ಸಂಬಂಧ, ಯೋಜನೆ, ವಿಚಾರ ಮಂಡನೆ, ನಿಲುವು ಹೀಗೆ ಸಾಕಷ್ಟು ವಿಚಾರಗಳನ್ನು ಕೃಷ್ಣ-ಹನುಮಂತ ನಿಭಾಯಿಸಿದ ರೀತಿ ಹಾಗೂ ಪರಿಸ್ಥಿತಿ ಅನುಕರಣೀಯ ಎಂದರು.
ಸೀತಾದೇವಿಯ ಅಪಹರಣದ ಸಮಯದಲ್ಲಿ ಲಂಕೆಗೆ ತೆರಳಿದ್ದ ಆಂಜನೇಯ, ದುಷ್ಟ ಸಂಹಾರ ಹಾಗೂ ಸೀತಾದೇವಿಯ ರಕ್ಷಣೆ ಹೊಣೆ ಹೊತ್ತಿದ್ದ. ಆತನನ್ನು ವಿವಿಧ ಉದ್ದೇಶವನ್ನು ಹೊಂದಿದ್ದ ಅತ್ಯುತ್ತಮ ರಾಜತಾಂತ್ರಿಕನೆಂದು ಪರಿಗಣಸಿಬಹುದು.
ಅದೇ ರೀತಿ ಮಹಾಭಾರತವನ್ನು ನೋಡಿದರೆ ಕುರುಕ್ಷೇತ್ರ ನಿದರ್ಶನ. ವಿವಿಧ ರಾಜ್ಯಗಳ ರಾಜರು ನಾವು ಅವರ ಪರ, ವಿರೋಧ, ತಟಸ್ಥ ಎನ್ನುವ ನಿಲುವುಗಳನ್ನು ತಾಳಿದ್ದರು. ಆದರೆ, ಕೃಷ್ಣ ಧರ್ಮದ ಪರವಿದ್ದರು. ಅರ್ಜುನ ತನ್ನ ಸ್ವಂತ ರಕ್ತಸಂಬಂದಧ ವಿರುದ್ಧ ಹೋರಾಡಬೇಕೇ ಎಂದುಕೊಂಡರೂ, ಧರ್ಮವೇ ಮುಖ್ಯವೆಂದು ಯುದ್ಧ ಮಾಡಿದ. ಅಂತಹ ನಿರ್ಣಯಗಳು ಅಗತ್ಯ ಎಂದೂ ಜೈಶಂಕರ್ ಹೇಳಿದರು.
ಪಾಕ್ ಶಿಶುಪಾಲನಿದ್ದಂತೆ!
ಶ್ರೀ ಕೃಷ್ಣ ಶಿಶುಪಾಲನನ್ನು 100 ಬಾರಿ ಕ್ಷಮಿಸಿದಂತೆ, ಭಾರತವು ಪಾಕಿಸ್ತಾನದ ಉದ್ಧಟತನವನ್ನು ಸಹಿಸಿ ಪದೇ ಪದೆ ಕ್ಷಮಿಸುತ್ತಿದೆ. ಸಮಯ ಬಂದಾಗ ಹಾಗೂ ಶಿಷ್ಟರ ರಕ್ಷಣೆ ಆಗಲೇಬೇಕು ಎಂದಾಗ ದುಷ್ಟರ ಸಂಹಾರ ಮಾಡುವುದೇ ಧರ್ಮವೆಂದು ಮಹಾಭಾರತ ಹೇಳಿದೆ ಎಂದು ಜೈಶಂಕರ್ ಟಾಂಗ್ ನೀಡಿದ್ದಾರೆ.
ನಾನು ಸಚಿವನಾಗುತ್ತೇನೆಂದು ಕನಸು ಮನಸಿನಲ್ಲೂ ಭಾವಿಸಿರಲಿಲ್ಲ. ಮೋದಿಯವರು ಪ್ರಧಾನಿ ಆಗಿರದಿದ್ದರೆ, ನನಗೆ ರಾಜಕೀಯಕ್ಕೆ ಎಂಟ್ರಿಯಾಗುವ ಧೈರ್ಯವಾದರೂ ಬರುತ್ತಿತ್ತೇ ಎಂದು ಹಲವು ಬಾರಿ ನನ್ನನ್ನು ನಾನೇ ಪ್ರಶ್ನಿಸಿದ್ದೇನೆ.
– ಎಸ್.ಜೈಶಂಕರ್, ವಿದೇಶಾಂಗ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಧ್ಯಪ್ರದೇಶದಲ್ಲಿ 230 ರಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ: ನಡ್ಡಾ
ಅಂದು ಮೋದಿ ಉಪನಾಮ ಟೀಕೆ…; ಇಂದು ಖುಷ್ಬು ಟ್ವೀಟ್ ವೈರಲ್
ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಬೆದರಿಕೆ ಪ್ರಕರಣ: ಆರೋಪಿ ಮುಂಬೈ ಪೊಲೀಸರ ವಶಕ್ಕೆ
ಕೊಕ್ಕರೆಯನ್ನು ರಕ್ಷಿಸಿ ಸಾಕಿದ್ದ ಆರಿಫ್ ಖಾನ್ ಗೆ ಅರಣ್ಯ ಇಲಾಖೆ ನೋಟಿಸ್
ರಾಹುಲ್ ವಿಚಾರದಲ್ಲಿ ಕಾಂಗ್ರೆಸ್ ಸತ್ಯಾಗ್ರಹ ನಡೆಸುವುದು ವಿಪರ್ಯಾಸವೇ ಸರಿ: ಯುಪಿ ಸಿಎಂ ಯೋಗಿ
MUST WATCH
ಹೊಸ ಸೇರ್ಪಡೆ
ವಿಶ್ವ ಚಾಂಪಿಯನ್ಶಿಪ್: ಪ್ರಶಸ್ತಿ ಮುಡಿಗೇರಿಸಿಕೊಂಡ ಬಾಕ್ಸರ್ ನಿಖತ್ ಜರೀನ್
ಮೋದಿ ಕೈಕೆಳಗೆ ಕೆಲಸ ಮಾಡುತ್ತೇನೆಯೇ ಹೊರತು ರಾಜ್ಯ ರಾಜಕಾರಣಕ್ಕೆ ಬರಲ್ಲ: ಪ್ರತಾಪ್ ಸಿಂಹ
ರಾಜಧಾನಿಯಲ್ಲಿ ಮೇಳೈಸಿದ ಸ್ಟಾರ್ ಸ್ಪೋರ್ಟ್ಸ್ ನ “ಟ್ರೋಫಿ ಟೂರ್’
50 ಕೊಡ್ತಿರಿ ಅಂತ ಗೊತ್ತಿದೆ,ಬೇಕಿರೋದು 123 ಸ್ಥಾನ : ಹೆಚ್.ಡಿ.ಕುಮಾರಸ್ವಾಮಿ
ಮಧ್ಯಪ್ರದೇಶದಲ್ಲಿ 230 ರಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ: ನಡ್ಡಾ