ಮಾನವರ ಉಗಮ ನಮ್ಮಲ್ಲೇ ಮೊದಲು? ಇತ್ತೀಚಿನ ಹಲವು ಅಧ್ಯಯನಗಳಲ್ಲಿ ಉಲ್ಲೇಖ
2018ರ ಆಂಧ್ರಪ್ರದೇಶದಲ್ಲಿ ಪಡೆದುಕೊಂಡಿದ್ದ ಪರಿಕರಗಳ ಅಧ್ಯಯನ
Team Udayavani, Aug 11, 2022, 6:50 AM IST
ವಡೋದರಾ: ದೇಶಕ್ಕೆ ಮೊದಲ ಬಾರಿಗೆ ಮಾನವರು ಯಾವ ಪ್ರವೇಶ ಮಾಡಿದರು ಎಂಬ ಬಗ್ಗೆ ಹಲವು ಸಂಶೋಧನಾತ್ಮಕ ವಾದಗಳು ಇವೆ. ಆದರೆ, ಇತ್ತೀಚೆಗೆ ನಡೆಸಲಾಗಿರುವ ಹೊಸ ಅಧ್ಯಯನಗಳು ಮತ್ತಷ್ಟು ಹೊಸ ಅಂಶಗಳನ್ನು ಹೊರ ಚೆಲ್ಲಿದೆ. ಜಗತ್ತಿನ ಇತರ ಭಾಗಗಳಿಗೆ ಹೋಲಿಕೆ ಮಾಡಿದರೆ, ದೇಶದಲ್ಲಿಯೇ ಮೊದಲು ಮಾನವರ ಉಗಮವಾಗಿತ್ತು ಎಂದು ಹೇಳಲಾಗುತ್ತಿದೆ.
ಆಧುನಿಕ ಮಾನವರು ಆಫ್ರಿಕಾದಿಂದ ದೇಶಕ್ಕೆ 1.25 ಲಕ್ಷ ವರ್ಷಗಳ ಹಿಂದೆ ಆಗಮಿಸಿದ್ದರು ಎಂಬ ಬಗ್ಗೆ ಇದುವರೆಗೆ ನಂಬಿಕೊಳ್ಳಲಾಗಿತ್ತು. ಆದರೆ, ಈ ಅಂಶವನ್ನು ಸುಳ್ಳು ಎಂದು ಸಾಬೀತು ಮಾಡುವ ಅಂಶಗಳು ಈಗ ದೃಢಪಟ್ಟಿದೆ. ಅವರು ದೇಶಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಕೆಲವೊಂದು ಕಲ್ಲಿನಿಂದ ಸಿದ್ಧಗೊಳಿಸಿದ್ದ ಪರಿಕರಗಳನ್ನೂ ತೆಗೆದುಕೊಂಡು ಬಂದಿದ್ದರೂ ಎಂದು ಹೇಳಲಾಗಿತ್ತು. 2018ರಲ್ಲಿ ಆಂಧ್ರಪ್ರದೇಶದಲ್ಲಿ ಇದೇ ಮಾದರಿಯ ಪರಿಕರಗಳು ಸಂಶೋಧನೆಯ ವೇಳೆ ಪತ್ತೆಯಾಗಿತ್ತು.
ಅಹ್ಮದಾಬಾದ್ನ ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿ (ಪಿಆರ್ಎಲ್)ಯ ಆಟೋಮಿಕ್ ಮೊಲೇಕ್ಯುಲರ್ ಆ್ಯಂಡ್ ಆಪ್ಟಿಕಲ್ ಫಿಸಿಕ್ಸ್ ವಿಭಾಗದಲ್ಲಿ ಸಂಶೋಧನೆಗೆ ಒಳಪಡಿಸಲಾಗಿತ್ತು. ಆಂಧ್ರಪ್ರದೇಶದಲ್ಲಿ ದೊರಕಿದ್ದ ಹಲವು ಪರಿಕರಗಳು 1.22 ಲಕ್ಷ ವರ್ಷಗಳ ಹಿಂದೆ ದೇಶದಲ್ಲಿಯೇ ಇದ್ದವು ಎಂಬ ಅಂಶ ಈಗ ಗೊತ್ತಾಗಿದೆ.
ಇನ್ನೊಂದೆಡೆ, ಬರೋಡಾದ ಎಂ.ಎಸ್.ವಿಶ್ವವಿದ್ಯಾನಿಲಯ ಆಂಧ್ರಪ್ರದೇಶದ ಓಂಗೋಲ್ನಲ್ಲಿ 2018ರಲ್ಲಿ ಸಂಶೋಧನೆ ವೇಳೆ ಸಿಕ್ಕಿದ್ದ ಹಿಂದಿನ ಮಾನವರು ಬಳಕೆ ಮಾಡಿಕೊಂಡಿದ್ದ ಪರಿಕರಗಳನ್ನು ಅಧ್ಯಯನ ನಡೆಸಿದೆ. ಈ ಮೂಲಕ ಅವುಗಳು 2.47 ಲಕ್ಷ ವರ್ಷಗಳ ಹಿಂದೆ ಬಳಕೆ ಮಾಡಿಕೊಂಡಿದ್ದ ವಸ್ತುಗಳು ಎಂದು ಅದರಲ್ಲಿ ಅಭಿಪ್ರಾಯಪಡಲಾಗಿದೆ. ದೇಶದಲ್ಲಿ ಪತ್ತೆಯಾಗಿರುವ ಪರಿಕರಗಳು ಶಿಲಾಯುಗದಲ್ಲಿಯೇ ಸಿದ್ಧಪಡಿಸಲಾದದ್ದು ಮತ್ತು ಇಲ್ಲಿಯೇ ಅಭಿವೃದಿಪಡಿಸಲಾಗಿದೆ ಎಂದು ನಿರ್ಧಾರಕ್ಕೆ ಬರಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ