5 ಪೈಸೆ ಬಿರಿಯಾನಿಗಾಗಿ ಹೊಟೇಲ್ ಮುಂದೆ ಜಮಾಯಿಸಿದ ಜನರು:ಸಂಚಲನ ಸೃಷ್ಟಿಸಿದ ಮಾಲೀಕನ ಘೋಷಣೆ
Team Udayavani, Jul 22, 2021, 8:19 AM IST
ಚೆನ್ನೈ: ವ್ಯಾಪಾರವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಮಧುರೈನ ಸುಕನ್ಯಾ ಬಿರಿಯಾನಿ ಸ್ಟಾಲ್ ನ ಮಾಲೀಕರು ಘೋಷಿಸಿದ ಯೋಜನೆಯೊಂದು ಇದೀಗ ಭಾರೀ ಸಂಚಲನ ಸೃಷ್ಟಿಸಿದೆ.
ತಮ್ಮ ಹೊಟೇಲ್ ಗೆ ಹೆಚ್ಚು ಹೆಚ್ಚು ಗ್ರಾಹಕರು ಬರಬೇಕೆಂದು ಯೋಜಿಸಿದ ಮಾಲೀಕ, 5 ಪೈಸೆ ನಾಣ್ಯವನ್ನು ಯಾರು ತರುತ್ತಾರೋ ಅವರಿಗೆ ಉಚಿತ ಬಿರಿಯಾನಿ ನೀಡುವುದಾಗಿ ಘೋಷಿಸಿದ್ದಾನೆ. ಇದಕ್ಕಾಗಿ ಹಲವು ಕಡೆ ಪೋಸ್ಟರ್ ಗಳನ್ನು ಕೂಡ ಹಾಕಿಸಿದ್ದ.
ಪರಿಣಾಮವೆಂಬಂತೆ ನೂರಾರು ಮಂದಿ 5 ಪೈಸೆ ನಾಣ್ಯವನ್ನು ಹಿಡಿದುಕೊಂಡು ಬಿರಿಯಾನಿ ಸ್ಟಾಲ್ ಮುಂದೆ ಜಮಾಯಿಸಿದ್ದಾರೆ. ಒಂದು ಹಂತದಲ್ಲಿ 300ಕ್ಕಿಂತ ಹೆಚ್ಚು ಮಂದಿ ಅಲ್ಲಿ ಸೇರಿದ್ದರು ಎಂದು ವರದಿ ತಿಳಿಸಿದೆ. ಕೋವಿಡ್ ಮಾರ್ಗಸೂಚಿಯ ಉಲ್ಲಂಘನೆಯೂ ಅದ್ದರಿಂದ ಬಿರಿಯಾನಿ ಸ್ಟಾಲ್ ಮಾಲೀಕ ಬೇರೆ ದಾರಿಯಿಲ್ಲದೆ ಬಿರಿಯಾನಿ ನೀಡುವುದನ್ನು ನಿಲ್ಲಿಸಿ ಸ್ಟಾಲ್ ಗೆ ಬೀಗ ಜಡಿದಿದ್ದಾನೆ.
ಕೇವಲ ಬಿರಿಯಾನಿಗಾಗಿ ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘಿಸಿದ ಜನರ ನಡೆಯ ಬಗ್ಗೆ ಪೊಲೀಸರು ಕೂಡ ಅಚ್ಚರಿಗೊಂಡಿದ್ದಾರೆ. ಮಾತ್ರವಲ್ಲದೆ ಜನರ ಗುಂಪನ್ನು ಚದುರಿಸಿದ್ದಾರೆ. ಈ ವೇಳೆ ಕೆಲವರು ತಾವು 5 ಪೈಸೆಯ ನಾಣ್ಯವನ್ನು ತಂದರೂ ಬಿರಿಯಾನಿ ಸಿಗಲಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ ಪ್ರಸಂಗವೂ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ