ಮುಂಬೈ: “ವಿಧವಾ ಶಾಸ್ತ್ರ’ಕ್ಕೆ 34 ಗ್ರಾಪಂಗಳಿಂದ ಗುಡ್ಬೈ!
Team Udayavani, May 27, 2022, 11:03 PM IST
ಮುಂಬೈ: ಮಹಾರಾಷ್ಟ್ರದ ದಕ್ಷಿಣ ಕೊಲ್ಹಾಪುರ ಅಸೆಂಬ್ಲಿ ಕ್ಷೇತ್ರದ ಎಲ್ಲ 34 ಗ್ರಾಮ ಪಂಚಾಯತ್ಗಳೂ ಒಂದು ವಿಶಿಷ್ಟ ಹಾಗೂ ಸುಧಾರಣಾ ಕಾರ್ಯಕ್ಕೆ ಮುಂದಾಗಿವೆ.
ಮಹಿಳೆಯ ಪತಿ ಮೃತಪಟ್ಟರೆ, ಬಲವಂತವಾಗಿ ಆಕೆಯ ಹಣೆಯಲ್ಲಿನ ಸಿಂಧೂರವನ್ನು ತೆಗೆಸುವುದು, ಬಳೆ ಒಡೆಯುವುದು ಮುಂತಾದ ವಿಧವಾ ಶಾಸ್ತ್ರಗಳನ್ನು ನಿರ್ಮೂಲನೆ ಮಾಡುವಂಥ ನಿರ್ಣಯವನ್ನು ಈ ಗ್ರಾಪಂಗಳು ಕೈಗೊಳ್ಳಲಿವೆ.
ಶಿವಾಜಿ ಮಹಾರಾಜರಿಗೆ “ಛತ್ರಪತಿ’ ಎಂಬ ಬಿರುದು ಸಿಕ್ಕ ದಿನವಾದ ಜೂ.6ರಂದು “ಶಿವ ರಾಜ್ಯಾಭಿಷೇಕ ದಿನ’ವೆಂದು ಆಚರಿಸಲಾಗುತ್ತದೆ. ಅಂದೇ 34 ಗ್ರಾಪಂಗಳೂ ವಿಧವಾ ಶಾಸ್ತ್ರವನ್ನು ಬಹಿಷ್ಕರಿಸುವುದಾಗಿ ಶಪಥ ಮಾಡಲಿವೆ ಎಂದು ಇಲ್ಲಿನ ಕಾಂಗ್ರೆಸ್ ಶಾಸಕ ರಿತುರಾಜ್ ಪಾಟೀಲ್ ಹೇಳಿದ್ದಾರೆ.
ಮೊದಲಿಗೆ ಮೇ 4ರಂದು ಕೊಲ್ಹಾಪುರದ ಹೆರ್ವಾಡ್ ಗ್ರಾಮದಲ್ಲಿ ಇಂಥದ್ದೊಂದು ನಿರ್ಧಾರ ಕೈಗೊಳ್ಳಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ