ಬಿಹಾರಿಗಳು ಇಲ್ಲಿರುವಾಗ ಹೆಂಡಂದಿರು ಅಲ್ಲಿ ಹೆರುತ್ತಾರೆ: ಮಹಾ BJP MLC
Team Udayavani, Jan 8, 2019, 10:27 AM IST
ಮುಂಬಯಿ : “ಇತ್ತ ಮಹಾರಾಷ್ಟ್ರದಲ್ಲಿ ಬಿಹಾರಿ ವಲಸೆ ಕಾರ್ಮಿಕ ಪುರುಷರು ಕೆಲಸ ಮಾಡಿಕೊಂಡಿರುವಂತೆಯೇ ಅತ್ತ ಬಿಹಾರದಲ್ಲಿ ಅವರ ಹೆಂಡಂದಿರು ಮಕ್ಕಳನ್ನು ಹೆರುತ್ತಿರುತ್ತಾರೆ; ಮಹಾರಾಷ್ಟ್ರದಲ್ಲಿನ ಆ ಬಿಹಾರಿ ಪುರುಷರು ತಾವು ಅಪ್ಪನಾದುದಕ್ಕೆ ಆಗ ಸ್ವೀಟ್ ಹಂಚುತ್ತಾರೆ’ ಎಂದು ಮಹಾರಾಷ್ಟ್ರದ ಬಿಜೆಪಿ ಎಂಎಲ್ಸಿ ಸುರೇಶ್ ದಾಸ್ ಹೇಳಿರುವ ವಿವಾದಾತ್ಮಕ ಮಾತುಗಳು ವೈರಲ್ ಆಗಿದ್ದು ವಿಭಿನ್ನ ರಾಜಕೀಯ ಪಕ್ಷಗಳ ಸದಸ್ಯರಿಂದ ಕೋಪೋದ್ರೇಕದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಮಹಾರಾಷ್ಟ್ರದಲ್ಲಿ ಅಪಾರ ಸಂಖ್ಯೆಯಲ್ಲಿ ಬಿಹಾರಿ ವಲಸೆ ಕಾರ್ಮಿಕರಿರುವ ಕಾರಣ ಸ್ಥಳೀಯರು ಇಲ್ಲಿನ ಉದ್ಯೋಗಾವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳುವ ಭರದಲ್ಲಿ ಎಂಎಲ್ಸಿ ದಾಸ್ ಅವರು ಈ ರೀತಿಯ ಕೀಳು ಉಪಮೆ ನೀಡಿರುವುದು ಸರ್ವತ್ರ ಟೀಕೆ, ಖಂಡನೆಗೆ ಗುರಿಯಾಗಿದೆ.
ಇದೇ ವೇಳೆ ಬಿಜೆಪಿ ನಾಯಕ ಹೈದರ್ ಆಜಂ ಅವರು “ದಾಸ್ ಅವರಿಂದ ಪಕ್ಷವು ಅವರ ಹೇಳಿಕೆ ಬಗ್ಗೆ ಸ್ಪಷ್ಟನೆ ಕೋರಲಿದೆ’ ಎಂದರಲ್ಲದೆ ಈ ವಿವಾದಾತ್ಮಕ ಹೇಳಿಕೆಗಾಗಿ ದಾಸ್ ಅವರು ನಿಶ್ಶರ್ತ ಕ್ಷಮೆಯಾಚಿಸಬೇಕು ಎಂದು ಹೇಳಿದರು.
ಸುರೇಶ್ ದಾಸ್ ಅವರ ಈ ಹೇಳಿಕೆ ಕೇವಲ ಖಂಡನಾರ್ಹ ಮಾತ್ರವಲ್ಲದೆ ಅದು ಜನರನ್ನು ವಿಭಜಿಸುವಂತಿದೆ ಎಂದು ಮತ್ತೋರ್ವ ಬಿಜೆಪಿ ನಾಯಕ ಸಂಜಯ್ ಟೈಗರ್ ಹೇಳಿದರು.
“ಬಿಜೆಪಿ ಎಂಎಲ್ಸಿ ಸುರೇಶ್ ದಾಸ್ ಅವರ ಈ ಹೇಳಿಕೆ 11 ಕೋಟಿ ಬಿಹಾರಿಗಳನ್ನು ಅವಮಾನಿಸುವಂತಿದೆ. ಬಿಹಾರದ ಜನರ ಆತ್ಮಗೌರವದ ಮೇಲೆ ದಾಳಿ ನಡೆಸುವಂತಿದೆ’ ಎಂದು ಜೆಡಿಯು ವಕ್ತಾರ ರಾಜೀವ್ ರಂಜನ್ ಹೇಳಿದರು. ದಾಸ್ ಅವರಿಗೆ ಮಾನಸಿಕ ಸಂತುಲನೆ ಇಲ್ಲವೆಂಬುದಕ್ಕೆ ಅವರ ಈ ಹೇಳಿಕೆಯೇ ಸಾಕ್ಷಿ ಎಂದವರು ಟೀಕಿಸಿದರು.
ದಾಸ್ ಅವರ ಹೇಳಿಕೆಯಲ್ಲಿ ಆಳುವ ಜನತಾ ಪಕ್ಷದ ಸಿದ್ಧಾಂತ ಏನೆಂಬುದು ಪ್ರತಿಫಲಿತವಾಗುತ್ತಿದೆ ಎಂದು ಆರ್ಜೆಡಿ ಟೀಕಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ
Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ
Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ
Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ
Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ