
LOVE: ಮದುವೆಯಾದ 20 ದಿನದಲ್ಲೇ ಓಡಿಹೋದ ಪತ್ನಿ; ಹಳೆ ಪ್ರೇಮ್ ಕಹಾನಿಗೆ ಸಾಥ್ ಕೊಟ್ಟ ಪತಿ.!
Team Udayavani, Jun 5, 2023, 9:38 AM IST

ಮಹಾರಾಷ್ಟ್ರ: ಪ್ರೀತಿ ಸಿಗೋದು ಕಷ್ಟ. ಅದೇ ಪ್ರೀತಿಯನ್ನು ಉಳಿಸಿಕೊಳ್ಳುವುದು ಕೆಲವರಿಗೆ ಇನ್ನು ಕಷ್ಟ. ಪ್ರೀತಿಸಿದವರನ್ನೇ ಮದುವೆಯಾಗಿ ಸುಖವಾಗಿ ಬಾಳುವುದು ಬಹುಶಃ ನೂರರಲ್ಲಿ ಒಂದಷ್ಟು ಸಂಖ್ಯೆಯ ಜನರು ಮಾತ್ರ.
ಇಲ್ಲೊಂದು ಪ್ರೇಮ ಕಥೆಗೆ ಪತಿಯೇ ಸಹಾಯ ಮಾಡಿದ ಘಟನೆ ನಡೆದಿದೆ. ಮದುವೆಯ ಬಳಿಕ ತನ್ನ ಪತ್ನಿಯ ಮೊದಲ ಪ್ರೇಮಯಾನಕ್ಕೆ ಆಕೆಯ ಪತಿಯೇ ಸಹಾಯ ಮಾಡಿರುವ ಘಟನೆ ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ನಡೆದಿದೆ.
ಮಹಾರಾಷ್ಟ್ರದ ಬೀಚ್ಕಿಲಾ ಗ್ರಾಮದ ನಿವಾಸಿ ಸನೋಜ್ ಕುಮಾರ್ ಸಿಂಗ್ ಅವರು ಮೇ 10 ರಂದು ಪ್ರಿಯಾಂಕಾ ಕುಮಾರಿ ಎಂಬಾಕೆಯನ್ನು ವಿವಾಹವಾಗಿದ್ದಾರೆ. ಮದುವೆಯಾದ ಕೆಲ ದಿನಗಳ ಬಳಿಕ ತನ್ನ ಪತ್ನಿ ಪ್ರಿಯಾಂಕ ನಿತ್ಯ ನಿರಾಶರಾಗಿ ಕೂತಿರುವುದನ್ನು, ಏನೋ ಮುಚ್ಚಿಡುವುದನ್ನು ಪತಿ ಸನೋಜ್ ಅವರು ಗಮನಿಸಿದ್ದಾರೆ. ಪ್ರಿಯಾಂಕ ಅವರು ಜಿತೇಂದ್ರ ಎಂಬ ಯುವಕನನ್ನು ಪ್ರೀತಿಸುತ್ತಿದ್ದಾರೆ ಎನ್ನುವ ವಿಚಾರ ಪತಿ ಸನೋಜ್ ಗೆ ಗೊತ್ತಾಗಿದೆ. ಕಳೆದ 10 ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದಾರೆ. ಜಾತಿಯ ವಿಚಾರದಲ್ಲಿ ಅವರ ಸಂಬಂಧವನ್ನು ಒಪ್ಪಲಿಲ್ಲ ಎಂದು ಪತಿಗೆ ಗೊತ್ತಾಗಿದೆ.
ಮದುವೆಯಾಗಿ ಸರಿಯಾಗಿ 20 ದಿನಗಳ ಬಳಿಕ ಪ್ರಿಯಾಂಕ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಲು ನಿರ್ಧರಿಸಿದ್ದಾರೆ. ಜಿತೇಂದ್ರ- ಪ್ರಿಯಾಂಕ ಇಬ್ಬರು ಓಡಿ ಹೋಗಲು ಯತ್ನಿಸಿದ್ದಾರೆ. ಆದರೆ ಇಬ್ಬರನ್ನು ಗ್ರಾಮಸ್ಥರು ನೋಡಿ, ಮನಾಟು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಇದಾದ ಬಳಿಕ ಪೊಲೀಸರು ಎರಡೂ ಕುಟುಂಬದವರನ್ನು ಠಾಣೆಗೆ ಕರೆಸಿದ್ದಾರೆ. ಈ ವೇಳೆ ಪತಿ ಸನೋಜ್ ಪತ್ನಿ ಪ್ರಿಯಾಂಕ ಅವರ ಪ್ರೀತಿಗೆ ಸಹಾಯ ಮಾಡಿದ್ದಾರೆ. ಪ್ರಿಯಾಕರನೊಂದಿಗೆ ಓಡಿ ಹೋದದ್ದಕ್ಕೆ ಯಾವುದೇ ತಕರಾರು ಎತ್ತದೇ ಇಬ್ಬರ ಸಹಾಯಕ್ಕೆ ನಿಂತಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Video: ಬೈಕ್ನಲ್ಲಿ ಚಲಿಸುವ ವೇಳೆ ಹಾವು ಕಡಿತ; ಸೆರೆ ಹಿಡಿದ ಹಾವಿನಿಂದಲೇ ಪ್ರಾಣ ಹಾನಿ.!

Congress ಛತ್ತೀಸ್ಗಢ, ಮಧ್ಯಪ್ರದೇಶದಲ್ಲಿ ಗೆಲ್ಲುವುದು ಖಚಿತ, ರಾಜಸ್ಥಾನದಲ್ಲಿ…: ರಾಹುಲ್

Vande Bharat; ಭಾರತೀಯ ರೈಲ್ವೆಯ ಪರಿವರ್ತನೆಗಾಗಿ ನಮ್ಮ ಸರ್ಕಾರದ ಕೆಲಸ: ಪ್ರಧಾನಿ ಮೋದಿ

WrestlersCase ಅವಕಾಶ ಸಿಕ್ಕಾಗೆಲ್ಲಾ ಬ್ರಿಜ್ ಭೂಷಣ್ ಕಿರುಕುಳ:ಕೋರ್ಟ್ ನಲ್ಲಿ ದೆಹಲಿಪೊಲೀಸರು

Love Story: ಪತ್ನಿಯನ್ನೇ ಪ್ರಿಯಕರನ ಜೊತೆ ಮದುವೆ ಮಾಡಿಸಿಕೊಟ್ಟ ಪತಿ ಮಹಾಶಯ.!
MUST WATCH
ಹೊಸ ಸೇರ್ಪಡೆ

Kannada in UK ; ಲಂಡನ್ ನಲ್ಲಿ ಮೊಳಗಲಿರುವ ಕನ್ನಡ ಬಳಗದ ಡಿಂಡಿಮ

Sandalwood; ಡಬ್ಬಿಂಗ್ ಮುಗಿಸಿದ ‘ಜಲಂಧರ’

INDvsAUS: ಹೋಳ್ಕರ್ ಮೈದಾನದಲ್ಲಿ ರನ್ ರಾಶಿ ಪೇರಿಸಿದ ಟೀಂ ಇಂಡಿಯಾ; ಆಸೀಸ್ ಗೆ 400 ರನ್ ಗುರಿ

World Cup 2023; ರೋಹಿತ್- ವಿರಾಟ್ ಗಿಂತ ಬಾಬರ್ ಅಜಂ ಉತ್ತಮ ಪ್ರದರ್ಶನ ನೀಡಬಹುದು: ಗಂಭೀರ್

Kumta ; ಮಸೀದಿಯಲ್ಲಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಮೌಲ್ವಿಯ ಬಂಧನ