3 ಲಕ್ಷ ವೇತನದ ಆಫರ್; ವೈದ್ಯರ ಕೊರತೆ ನೀಗಿಸಲು “ಮಹಾ’ ತಂತ್ರ
Team Udayavani, Aug 6, 2018, 11:30 AM IST
ಮುಂಬೈ: ಕರ್ನಾಟಕದಂತೆಯೇ ನೆರೆಯ ಮಹಾರಾಷ್ಟ್ರದಲ್ಲೂ ವಿಶೇಷ ತಜ್ಞ ವೈದ್ಯರ ಕೊರತೆ ಕಾಡುತ್ತಿದ್ದು, ಇದಕ್ಕಾಗಿ ಮಾಸಿಕ 3
ಲಕ್ಷ ರೂ. ವೇತನ ಕೊಟ್ಟು ನೇಮಕ ಮಾಡಿಕೊಳ್ಳಲಾಗುತ್ತಿದೆ. ಆರು ತಿಂಗಳ ಹಿಂದೆ ಈ ಆಫರ್ ನೀಡಿದ್ದ ಮಹಾರಾಷ್ಟ್ರ ಸರ್ಕಾರ ಈಗಾಗಲೇ 356 ತಜ್ಞ ವೈದ್ಯರ ನೇಮಕ ಮಾಡಿಕೊಂಡಿದೆ.
ಗ್ರಾಮಾಂತರ ಜಿಲ್ಲೆಗಳಾದ ಬೀಡ್, ರಾಯಗಡ, ಯವತ್ಮಾಳ್ ಮತ್ತು ಚಂದ್ರಾಪುರದಲ್ಲಿ 12 ಹೆರಿಗೆ ತಜ್ಞ ವೈದ್ಯರಿಗೆ ಮಾಸಿಕ 3 ಲಕ್ಷ ರೂ.
ನೀಡಿ ನೇಮಕ ಮಾಡಿಕೊಳ್ಳಲಾಗಿದೆ. ಸದ್ಯ ಮಹಾ ಸರ್ಕಾರದ ಈ ತಂತ್ರ ಫಲಿಸುತ್ತಿದ್ದು, ಖಾಸಗಿ ವಲಯದಿಂದ ಹಲವಾರು ವೈದ್ಯರನ್ನು ಸೆಳೆದಿದೆ. ಇವರನ್ನು ನಕ್ಸಲ್ ಪೀಡಿತ ಮತ್ತು ಬುಡಕಟ್ಟು ಪ್ರದೇಶದಲ್ಲೂ ನಿಯೋಜಿಸಲಾಗಿದೆ.
ಕರ್ನಾಟಕದಲ್ಲಿ ಬಿಡ್ಡಿಂಗ್
ಕರ್ನಾಟಕ ಸರ್ಕಾರ ಕಳೆದ ವರ್ಷ ಬಿಡ್ಡಿಂಗ್ ಮೂಲಕ ಗ್ರಾಮೀಣ ಪ್ರದೇಶಕ್ಕೆ ತಜ್ಞ ವೈದ್ಯರ ನೇಮಕ ಮಾಡಿಕೊಂಡಿತ್ತು. ಅಂದರೆ 300 ಮಂದಿ ನೇಮಕವಾಗಿ, ಸದ್ಯ 202 ತಜ್ಞ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ.
ನೇಮಕವಾದವರ ವಿವರ
142; ಹೆರಿಗೆ ತಜ್ಞರು
143; ಅರಿವಳಿಕೆ ತಜ್ಞರು
071; ಮಕ್ಕಳ ತಜ್ಞರು
ಮಹಾ ತಂತ್ರವೇನು?
1. ಮಾಸಿಕ ವೇತನ(ವೈದ್ಯರು ಚೌಕಾಸಿ ಮಾಡಿದಷ್ಟು)
2. ಪ್ರತಿ ಹೆರಿಗೆಗೆ 4 ಸಾವಿರ ರೂ. ಪ್ರೋತ್ಸಾಹ ಧನ
3. ಗರ್ಭಿಣಿಯರ ಚೆಕ್-ಅಪ್ಗೆ 40 ರೂ.
4.ಹೆರಿಗೆ ನಡೆಸುವಾಗ ಸಹಾಯ ಮಾಡಿದರೆ 1,500 ರೂ.
5. ಮಕ್ಕಳಿಗೆ ಚಿಕಿತ್ಸೆ ನೀಡಿದಲ್ಲಿ 1,200 ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್