ಕೇರಳ ಯೋಧ ಹುತಾತ್ಮ: ಹೆಲಿಕಾಪ್ಟರ್ ಪತನದಲ್ಲಿ ಮಡಿದ ಯೋಧ ಕೆ.ವಿ.ಅಶ್ವಿನ್
Team Udayavani, Oct 23, 2022, 6:25 AM IST
ಇಟಾನಗರ: ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯಲ್ಲಿ ಶುಕ್ರವಾರ ಭೂಸೇನೆಯ ಹೆಲಿಕಾಪ್ಟರ್ ಪತನಗೊಂಡು ಸಂಭವಿಸಿದ ದುರಂತದಲ್ಲಿ ಕಾಸರಗೋಡು ಜಿಲ್ಲೆಯ ಯೋಧ ಕೆ.ವಿ.ಅಶ್ವಿನ್ (24) ಹುತಾತ್ಮರಾಗಿದ್ದಾರೆ. ಅವರು ಜಿಲ್ಲೆಯ ಚೆರ್ವತ್ತೂರ್ನ ಕಝಕ್ಕುಮೇರಿಯ ನಿವಾಸಿಯಾಗಿದ್ದಾರೆ.
ಒಟ್ಟಾರೆಯಾಗಿ ಈ ದುರಂತದಲ್ಲಿ ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ಐದು ಮಂದಿ ಅಸುನೀಗಿದ್ದಾರೆ. ಅಶ್ವಿನ್ ಅವರು 4 ವರ್ಷಗಳಿಂದ ಭೂಸೇನೆಯ ತಾಂತ್ರಿಕ ಸಿಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ರವಿವಾರ ಪಾರ್ಥಿವ ಶರೀರವನ್ನು ಕಾಸರಗೋಡಿಗೆ ತರಲಾಗುತ್ತದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಪೈಲಟ್ಗಳಾದ ಮೇಜರ್ ವಿಕಾಸ್ ಭಂಭು, ಮೇಜರ್ ಮುಸ್ತಫಾ ಬೋಹರಾ ಮತ್ತು ಹವಾಲ್ದಾರ್ ಬೀರೇಶ್ ಸಿನ್ಹಾ, ನಾಯಕ್ ರೋಹಿತಾಶ್ವ ಕುಮಾರ್ ಹುತಾತ್ಮರಾದ ಇತರರು. ದೈನಂದಿನ ಹಾರಾಟದ ನಿಮಿತ್ತ ಜಿಲ್ಲೆಯಲ್ಲಿ ಇರುವ ಭೂಸೇನಾ ಕೇಂದ್ರದಿಂದ ಎಎಲ್ಎಚ್ ಟೇಕಾಫ್ ಆಗಿತ್ತು. ಇಬ್ಬರು ಪೈಲಟ್ ಸೇರಿದಂತೆ ಒಟ್ಟು ಐವರು ಸಿಬಂದಿ ಹೆಲಿಕಾಪ್ಟರ್ನಲ್ಲಿ ಇದ್ದರು.
ಪತನಗೊಂಡ ಹೆಲಿಕಾಪ್ಟರ್ 2015ರಲ್ಲಿ ಸೇನೆಗೆ ಸೇರ್ಪಡೆಯಾಗಿತ್ತು. ಇದೇ ವೇಳೆ, ಕಾಪ್ಟರ್ನ ಪೈಲಟ್ ತಾಂತ್ರಿಕ ತೊಂದರೆಯ ಬಗ್ಗೆ ಏರ್ಟ್ರಾಫಿಕ್ ಕಂಟ್ರೋಲ್ ಕಚೇರಿಗೆ ಮುನ್ಸೂಚನೆ ನೀಡುವ ನಿಟ್ಟಿನಲ್ಲಿ ಕರೆ ಮಾಡಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್