ಕುರ್ಚಿ ತರಲು ತಡವಾಗಿದ್ದಕ್ಕೆ ಕಾರ್ಯಕರ್ತನ ಮೇಲೆ ಕಲ್ಲೆಸೆದ ಸಚಿವ: ವಿಡಿಯೋ ವೈರಲ್…
Team Udayavani, Jan 24, 2023, 7:48 PM IST
ತಮಿಳುನಾಡು: ಕುರ್ಚಿ ತರಲು ತಡ ಮಾಡಿದ ಹಿನ್ನೆಲೆಯಲ್ಲಿ ತಾಳ್ಮೆ ಕಳೆದುಕೊಂಡ ಸಚಿವನೊಬ್ಬ ಪಕ್ಷದ ಕಾರ್ಯಕರ್ತನ ಮೇಲೆ ಕಲ್ಲು ಎಸೆದ ಘಟನೆ ತಮಿಳುನಾಡಿನ ತಿರುವಳ್ಳೂರ್ನಲ್ಲಿ ವರದಿಯಾಗಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಜ.25ರಂದು ಕಾರ್ಯಕ್ರಮವೊಂದಕ್ಕೆ ಆಗಮಿಸುವರಿದ್ದರು. ಈ ಸಂಬಂಧ ತಮಿಳುನಾಡು ಹೈನುಗಾರಿಕೆ ಅಭಿವೃದ್ಧಿ ಸಚಿವ ಎಸ್.ಎಂ.ನಾಸರ್ ಸಿದ್ಧತೆ ಪರಿಶೀಲಿಸಲು ಮಂಗಳವಾರ ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ಕೂರಲು ಕುರ್ಚಿ ತರಲು ತಡ ಮಾಡಿದ ಕಾರಣ ಸಿಟ್ಟೆಗೆದ್ದ ಸಚಿವ, ಪಕ್ಷದ ಕಾರ್ಯಕರ್ತರೊಬ್ಬರ ಮೇಲೆ ಕಲ್ಲು ಎಸೆದಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಚಿವರ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಜಾಲತಾಣಗಳಲ್ಲಿಯೂ ಅವರ ವರ್ತನೆಯನ್ನು ಕಟುವಾಗಿ ಟೀಕೆ ವ್ಯಕ್ತವಾಗಿದೆ.
#TAMILNADU Minister SM Nasar hurls stone at a worker, who delayed in bringing chairs for him to sit, at Tiruvallur on Tuesday.
S.M Nasar was inspecting the site where CM @mkstalin was to participate tomorrow . pic.twitter.com/14FZDSwebK— Suresh Kumar (@journsuresh) January 24, 2023