ಇಮಾಮ್ ಸಂಘಟನೆಗಳ ಮುಖ್ಯಸ್ಥರ ಭೇಟಿಯಾದ ಆರ್ಎಸ್ಎಸ್ ಮುಖ್ಯಸ್ಥ ಭಾಗವತ್
ದೇವರನ್ನು ಆರಾಧಿಸುವ ವಿಧಾನಗಳು ಭಿನ್ನ,ದೇಶ ಮೊದಲು....
Team Udayavani, Sep 22, 2022, 6:15 PM IST
ನವದೆಹಲಿ: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಗುರುವಾರ ಕಸ್ತೂರ್ಬಾ ಗಾಂಧಿ ಮಾರ್ಗದಲ್ಲಿರುವ ಮಸೀದಿಯಲ್ಲಿ ಆಲ್ ಇಂಡಿಯಾ ಇಮಾಮ್ ಸಂಘಟನೆಗಳ ಮುಖ್ಯ ಇಮಾಮ್ ಡಾ. ಉಮರ್ ಅಹ್ಮದ್ ಇಲ್ಯಾಸಿ ಅವರೊಂದಿಗೆ ವಿಶೇಷ ಮಾತುಕತೆ ನಡೆಸಿದರು.
”ಮೋಹನ್ ಭಾಗವತ್ ಅವರು ಇಂದು ನನ್ನ ಆಹ್ವಾನದ ಮೇರೆಗೆ ಭೇಟಿ ನೀಡಿದ್ದರು. ಅವರು ‘ರಾಷ್ಟ್ರಪಿತ’ ಮತ್ತು ‘ರಾಷ್ಟ್ರಋಷಿ’, ಅವರ ಭೇಟಿಯಿಂದ ಉತ್ತಮ ಸಂದೇಶ ಹೊರಡಲಿದೆ. ದೇವರನ್ನು ಆರಾಧಿಸುವ ನಮ್ಮ ವಿಧಾನಗಳು ವಿಭಿನ್ನವಾಗಿವೆ, ಆದರೆ ದೊಡ್ಡ ಧರ್ಮವೆಂದರೆ ಮಾನವೀಯತೆ. ದೇಶ ಮೊದಲು ಬರುತ್ತದೆ ಎಂದು ನಾವು ನಂಬುತ್ತೇವೆ” ಎಂದು ಭೇಟಿಯ ಬಳಿಕ ಡಾ. ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ದೇಶಾದ್ಯಂತ ಪಿಎಫ್ ಐ ಕಚೇರಿಗಳ ಮೇಲೆ ಎನ್ ಐಎ ದಾಳಿ: ರಾಹುಲ್ ಹೇಳಿದ್ದೇನು?
”ಇಲ್ಯಾಸಿ ಸಾಹಬ್ ಅವರು ಮೋಹನ್ ಭಗವತ್ ಅವರನ್ನು ಹಲವು ದಿನಗಳ ಹಿಂದೆ ಆಹ್ವಾನಿಸಿದ್ದರು. ಆದ್ದರಿಂದ, ಅವರು ಇಲ್ಲಿ ಅವರನ್ನು ಭೇಟಿಯಾದರು. ಆರ್ಎಸ್ಎಸ್ ಸರ ಸಂಘ ಚಾಲಕ್ ಎಲ್ಲಾ ವರ್ಗದ ಜನರನ್ನು ಭೇಟಿಯಾಗುತ್ತಾರೆ. ಇದು ನಿರಂತರ ಸಾಮಾನ್ಯ ಸಂವಾದದ ಪ್ರಕ್ರಿಯೆಯ ಭಾಗವಾಗಿದೆ” ಎಂದು ಆರ್ಎಸ್ಎಸ್ ಅಖಿಲ ಭಾರತೀಯ ಪ್ರಚಾರ್ ಪ್ರಮುಖ್ ಸುನಿಲ್ ಅಂಬೇಕರ್ ಹೇಳಿದ್ದಾರೆ.