ರಾಜಕಾರಣಿಗಳನ್ನು ಗುರಿಯಾಗಿಸಿಕೊಂಡ ರ್ಯಾಪರ್ ವಿರುದ್ಧ Mumbai police ಕೇಸ್
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಹಾಡು...
Team Udayavani, Apr 9, 2023, 5:53 PM IST
ಮುಂಬಯಿ : ‘ರಾಜಕಾರಣಿಗಳನ್ನು ಗುರಿಯಾಗಿಸಿಕೊಂಡು’ ಹಾಡು ಮಾಡಿದ ರ್ಯಾಪರ್ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಂದು ವಾರದ ಒಳಗೆ ಇದು ಎರಡನೇ ಪ್ರಕರಣವಾಗಿದೆ. ಅಂಬರನಾಥ್ ಪೊಲೀಸರು ಮೊದಲ ಪ್ರಕರಣ ದಾಖಲಿಸಿದ್ದಾರೆ.
ಶುಕ್ರವಾರ ವಡಾಲಾ ಟಿಟಿ ಪೊಲೀಸರು ‘ಶಂಭೋ’ ಎಂಬ ಹೆಸರಿನ ರ್ಯಾಪರ್ ಉಮೇಶ್ ಖಾಡೆ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಖಾಡೆ ಅವರ ಹಾಡು ‘ಜಂತಾ ಭೋಂಗ್ಲಿ ಕೇಲಿ (ನೀವು ನಾಗರಿಕರನ್ನು ಬೆತ್ತಲೆ ಮಾಡಿದ್ದೀರಿ)’ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಮುಂಬೈ ಪೊಲೀಸರ ಅಪರಾಧ ಗುಪ್ತಚರ ಘಟಕ (ಸಿಐಯು) ನೀಡಿದ ದೂರಿನ ನಂತರ ಎಫ್ಐಆರ್ ದಾಖಲಾಗಿದೆ. ರಾಜಕಾರಣಿಗಳ ಸ್ವಾರ್ಥ ಮತ್ತು ಜನಸಾಮಾನ್ಯರ ಸಂಕಷ್ಟಗಳ ಬಗ್ಗೆ ಹಾಡು ಒಳಗೊಂಡಿದೆ.