ನಾಳೆಯ ಕೇಂದ್ರ ಬಜೆಟ್ನಲ್ಲಿ ನಮಗೇನು?
Team Udayavani, Jan 31, 2023, 7:05 AM IST
ಬಹುನಿರೀಕ್ಷಿತ ಕೇಂದ್ರ ಬಜೆಟನ್ನು ಫೆ. 1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. ಪ್ರಸಕ್ತ ವರ್ಷ ಕರ್ನಾಟಕ ಸಹಿತ 9 ರಾಜ್ಯಗಳ ಚುನಾವಣೆಗಳು ನಡೆಯಲಿವೆ. ಜತೆಗೆ ಮುಂದಿನ ವರ್ಷ ಲೋಕಸಭಾ ಚುನಾವಣೆಯೂ ಇದೆ. ವೇತನದಾರರಿಗೆ ವೈಯಕ್ತಿಕ ಆದಾಯ ತೆರಿಗೆಯಲ್ಲಿ ಅನುಕೂಲವಾಗಬಹುದೇ, ಗೃಹ ಸಾಲ ಪಡೆಯುವವರಿಗೇನು ಸಿಗಲಿದೆ ಎಂಬ ನಿರೀಕ್ಷೆ ಸಹಜ. ಇವೆಲ್ಲದಕ್ಕೆ ಪೂರಕವಾಗಿ ಜ. 31ರಂದು ಆರ್ಥಿಕ ಸಮೀಕ್ಷೆ ಮಂಡನೆಯಾಗಲಿದೆ.
ಐ.ಟಿ. ವಿನಾಯಿತಿ
6 ಲಕ್ಷ ರೂ?
ಆದಾಯ ತೆರಿಗೆ ವಿನಾಯಿತಿ 6 ಲಕ್ಷ ರೂ.ಗೆ ಏರಿಸುವ ನಿರೀಕ್ಷೆ. 2014ರಲ್ಲಿ 2.5 ಲಕ್ಷ ರೂ. ನಿಗದಿಯಾದದ್ದು ಮತ್ತೆ ಬದಲಾಗಿಲ್ಲ.
ಗೃಹ ಸಾಲಗಾರರಿಗೆ ಇದೆ ನಿರೀಕ್ಷೆ
ಮನೆ/ಅಪಾರ್ಟ್ಮೆಂಟ್ ಖರೀದಿಗಾಗಿ ಸಾಲ ಮಾಡಿದವರಿಗೆ ಸದ್ಯ 2 ಲಕ್ಷ ರೂ. ವರೆಗೆ ವಿನಾಯಿತಿ ಇದೆ. ಅದು 4 ಲಕ್ಷ ರೂ.ಗೆ ಏರಿಕೆಯಾಗುವ ನಿರೀಕ್ಷೆ ಇದೆ.
ಚುನಾವಣೆಯ ಅನಿವಾರ್ಯ
ಕರ್ನಾಟಕ ಸೇರಿ 9 ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಮತಗಳಿಕೆಯ ಯೋಜನೆಗಳ ಪ್ರಕಟ ಸಾಧ್ಯತೆ.
ಕೃಷಿ ತಾಂತ್ರಿಕತೆಗೆ ಒತ್ತು
ಶೇ. 50 ಮಂದಿ ಕೃಷಿಯನ್ನೇ ಉದ್ಯೋಗಕ್ಕಾಗಿ ನಂಬಿದ್ದಾರೆ. ಈ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಿಸಲು ಆದ್ಯತೆ ನೀಡುವಂಥ ಕ್ರಮ ಸಂಭಾವ್ಯ.
ಸವಾಲುಗಳೇನು?
-ಶೇ. 6.4ರಷ್ಟು ಇರುವ ವಿತ್ತೀಯ ಕೊರತೆ ನಿಯಂತ್ರಿಸಲು ಕ್ರಮ
-ಸಂಭಾವ್ಯ ಆರ್ಥಿಕ ಹಿಂಜರಿತ ಎದುರಿಸಲು ವೆಚ್ಚ ಕಡಿತಕ್ಕೆ ಕ್ರಮ
-ಹಣದುಬ್ಬರ ನಿಯಂತ್ರಣಕ್ಕೆ ಆದ್ಯತೆ
-ರಫ್ತು ಪ್ರಮಾಣ ಏರಿಸಲು ಪ್ರಯತ್ನ
-ಜನರ ಖರೀದಿ ಶಕ್ತಿ ವೃದ್ಧಿಗೆ ಇಂಬು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು