ನಮ್ಮದು ಗಡಿ ರಹಿತ ದೇಶ ಕೈಲಾಸ: ನಿತ್ಯಾನಂದ
Team Udayavani, Mar 20, 2023, 7:20 AM IST
ನವದೆಹಲಿ: ಸ್ವಯಂಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ಸ್ಥಾಪಿಸಿರುವ “ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ ದೇಶದ ಬಗ್ಗೆ ಅಲ್ಲಿನ ಪ್ರತಿನಿಧಿಗಳು ಅಧಿಕೃತ ಟ್ವಿಟರ್ ಹೇಳಿಕೆ ನೀಡಿದ್ದಾರೆ.
“ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ ರಾಷ್ಟ್ರವು ಪ್ರಾಚೀನ ಪ್ರಬುದ್ಧ ಪುನರುಜ್ಜೀವನಗೊಂಡ ಹಿಂದೂ ನಾಗರಿಕತ್ವದ ದೇಶವಾಗಿದೆ. ಅದು ಗಡಿ ರಹಿತ, ಸೇವೆ ಆಧಾರಿತ ರಾಷ್ಟ್ರವಾಗಿದೆ. ಅನೇಕ ಸಂಸ್ಥೆಗಳು ಮತ್ತು ಎನ್ಜಿಒ ಗಳು ಮತ್ತು ಮಠಗಳಿಂದ ದೇಶ ನಿರ್ವಹಣೆ ಆಗುತ್ತಿದೆ.
ಲಿಂಗ, ಜನಾಂಗ, ರಾಷ್ಟ್ರೀಯತೆ, ಬಣ್ಣ ಮತ್ತು ಜಾತಿಯ ಭೇದ-ಭಾವವಿಲ್ಲದೆ ಜಾಗತಿಕ ಶಾಂತಿಯು “ಕೈಲಾಸ’ದ ಉದ್ದೇಶವಾಗಿದೆ. ಏಕತೆ ತಣ್ತೀದ ಆಧಾರದಲ್ಲಿ ಮತ್ತು ಎಲ್ಲರಿಗೂ ಜ್ಞಾನೋದಯ ಎಂಬ ಪರಿಕಲ್ಪನೆಯೊಂದಿಗೆ ದೇಶ ಸ್ಥಾಪನೆಯಾಗಿದೆ ಎಂದು “ಕೈಲಾಸ’ದ ಪ್ರತಿನಿಧಿಗಳು ಅಧಿಕೃತ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ “ಕೈಲಾಸ’ ಎನ್ಜಿಒ ಪ್ರತಿನಿಧಿಗಳು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಭೆಯಲ್ಲಿ ಭಾಗವಹಿಸಿದ್ದರು. 2020ರ ಡಿಸೆಂಬರ್ನಲ್ಲಿ ಈಕ್ವೆಡಾರ್ ಕರಾವಳಿಯ ದ್ವೀಪವೊಂದಕ್ಕೆ ಸ್ವಾಮಿ ನಿತ್ಯಾನಂದ “ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ ಎಂದು ನಾಮಕರಣ ಮಾಡಿದ್ದು, ಸ್ವತಂತ್ರ ದೇಶ ಆಗಿಸಲು ಹೊರಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ