‘ವಿವಿಐಪಿ ಸಂಸ್ಕೃತಿಗೆ ಅವಕಾಶವೇ ಇಲ್ಲ’ : ಹ್ಯಾಂಡ್ ಪಂಪ್ನಲ್ಲೇ ಸ್ನಾನ ಮಾಡಿದ ಉ.ಪ್ರ ಸಚಿವ
Team Udayavani, May 7, 2022, 8:50 PM IST
ಲಕ್ನೋ: ಉತ್ತರ ಪ್ರದೇಶದ ಕೈಗಾರಿಕಾ ಅಭಿವೃದ್ಧಿ ಸಚಿವ ನಂದಗೋಪಾಲ ಗುಪ್ತಾ ವಿಶೇಷವಾದ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.
ಇತ್ತೀಚೆಗೆ ಶಹಜಹಾನ್ಪುರಕ್ಕೆ ಅಧಿಕೃತ ಪ್ರವಾಸ ಕೈಗೊಂಡಿದ್ದಾಗ ಅವರು ಹ್ಯಾಂಡ್ ಪಂಪ್ ಸಮೀಪ ಸ್ನಾನ ಮಾಡಿ ಸರಳತೆ ಮೆರೆದಿದ್ದಾರೆ.
ಜತೆಗೆ “ವಿವಿಐಪಿ ಸಂಸ್ಕೃತಿಗೆ ಅವಕಾಶವೇ ಇಲ್ಲ’ ಎಂದು ಅದನ್ನು ಕೂ ಆ್ಯಪ್ನಲ್ಲಿ ಬರೆದುಕೊಂಡಿದ್ದಾರೆ. ಅದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
“ಇತ್ತೀಚೆಗೆ ಶಹಜಹಾನ್ಪುರದ ಚಕ್ ಕಾನ್ಹಾವು ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬೆಳಗ್ಗೆ ಒಂದು ಕಪ್ ಚಹಾ ಕುಡಿದೆ ಮತ್ತು ಉತ್ತಮ ಸ್ನಾನದಿಂದ ದಿನ ಶುರು ಮಾಡಿದೆ’ ಎಂದು ಬರೆದುಕೊಂಡಿದ್ದಾರೆ.
आज शाहजहांपुर जनपद के सिंधौली विकासखंड के चक कन्हऊ गांव में श्रीमती सहोदरा जी पत्नी श्री लीलाराम जी के घर पर रात्रि विश्राम के बाद सुबह की चाय और लोगों से बातचीत करते हुए दिन की शुरुआत हुई। वहीं हैंडपंप के पानी से स्नान किया। pic.twitter.com/fbewNxpx2b
— Nand Gopal Gupta ‘Nandi’ (@NandiGuptaBJP) May 7, 2022