ಸಿಎಂ ಆಗುವ ಆತುರದಲ್ಲಿಲ್ಲ; ಆರ್ಜೆಡಿ ನಾಯಕರಿಗೆ ಡಿಸಿಎಂ ತೇಜಸ್ವಿ ವಾರ್ನಿಂಗ್
ಜೆಡಿಯು ನಾಯಕರ ಕೆಂಗಣ್ಣಿಗೆ ಕಾರಣವಾಗಿದ್ದ ''ಮುಖ್ಯಮಂತ್ರಿ'' ಹೇಳಿಕೆ
Team Udayavani, Oct 1, 2022, 2:14 PM IST
ಪಾಟ್ನಾ: ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸುವ ಆತುರವಿಲ್ಲ ಎಂದು ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ಹೇಳಿದ್ದಾರೆ.
‘ಮುಂದಿನ ವರ್ಷದ ವೇಳೆಗೆ ಯುವ ನಾಯಕ ಮುಖ್ಯಮಂತ್ರಿಯಾಗಲಿದ್ದಾರೆ’ ಎಂದು ಆರ್ಜೆಡಿ ರಾಜ್ಯಾಧ್ಯಕ್ಷ ಜಗದಾನಂದ್ ಸಿಂಗ್ ಇತ್ತೀಚೆಗೆ ದೆಹಲಿಯಲ್ಲಿ ನೀಡಿದ ಹೇಳಿಕೆಗೆ ಯಾದವ್ ಪ್ರತಿಕ್ರಿಯಿಸಿದ್ದು,ಸುದ್ದಿಗಾರರೊಂದಿಗೆ ಮಾತನಾಡಿ, ಆರ್ಜೆಡಿ ನಾಯಕರಿಗೆ ಈ ವಿಷಯದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಲು ಸಲಹೆ ನೀಡಿದ್ದಾರೆ.
ಜಗದಾನಂದ್ ಸಿಂಗ್ ಅವರ ಹೇಳಿಕೆ ಸಿಎಂ ನಿತೀಶ್ ಕುಮಾರ್ ಅವರ ಪಕ್ಷವಾದ ಜೆಡಿಯುನಲ್ಲಿ ಕೆಲವು ನಾಯಕರ ಕೆಂಗಣ್ಣಿಗೆ ಕಾರಣವಾಗಿತ್ತು.
ಇದನ್ನೂ ಓದಿ: ರಾಜಸ್ಥಾನದಲ್ಲಿ ಬಿಜೆಪಿಯ ಯೋಜನೆ ಯಶಸ್ವಿಯಾಗಲು ಬಿಡುವುದಿಲ್ಲ: ಗೆಹ್ಲೋಟ್
“ನನಗೆ ಯಾವುದೇ ವೈಯಕ್ತಿಕ ಮಹತ್ವಾಕಾಂಕ್ಷೆ ಇಲ್ಲ ಅಥವಾ ನಾನು ಆತುರದಲ್ಲಿಲ್ಲ. ಬೆಂಬಲಿಗರು ಮಿತಿಮೀರಿ ಹೋಗುತ್ತಾರೆ ಆದರೆ ಭವಿಷ್ಯದಲ್ಲಿ ಸಿಎಂ ಯಾರಾಗಬಹುದು ಎಂದು ನಾವು ಯೋಚಿಸಬೇಕಾದ ಸಮಯ ಇದು ಅಲ್ಲ” ಎಂದು ಯಾದವ್ ತಿಳಿಸಿದರು.
“ಬಿಜೆಪಿ ಪ್ರತಿನಿಧಿಸುವ ಫ್ಯಾಸಿಸ್ಟ್ ಶಕ್ತಿಗಳನ್ನು ಅಧಿಕಾರದಿಂದ ಕಿತ್ತೊಗೆಯುವುದರ ಮೇಲೆ ನಾವು ಗಮನಹರಿಸಬೇಕು. ಬಿಹಾರದಲ್ಲಿ ನಾವು ಅದನ್ನು ಸಾಧಿಸಿದ್ದೇವೆ. ರಾಷ್ಟ್ರೀಯವಾಗಿಯೂ ಇದನ್ನು ಸಾಧಿಸಬೇಕಾಗಿದೆ” ಎಂದು ಅವರು ಹೇಳಿದರು.
ನಿತೀಶ್ ಕುಮಾರ್ ಮುಖ್ಯಮಂತ್ರಿ ಮತ್ತು ಬಹುಪಕ್ಷೀಯ ಮಹಾಘಟಬಂಧನ್ ನಾಯಕ ಎಂದು ಪ್ರತಿಪಾದಿಸಿದ ಯಾದವ್, ಅವರು ಕೂಡ ತನಗಾಗಿ ಏನನ್ನೂ ಬಯಸದೆ ಬಿಜೆಪಿಯನ್ನು ಸೋಲಿಸಲು ಬಯಸುತ್ತಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
MUST WATCH
ಹೊಸ ಸೇರ್ಪಡೆ
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
Kasaragod ವಿವಿಪ್ಯಾಟ್ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ