Note ban ಎಫೆಕ್ಟ್;ಟೆರರಿಸಂ, ಹವಾಲಾ ಜಾಲ, ನಕ್ಸಲಿಸಂಗೆ ಭರ್ಜರಿ ಹೊಡೆತ
Team Udayavani, Jan 7, 2017, 1:47 PM IST
ನವದೆಹಲಿ: ಅಪನಗದೀಕರಣದ ಬಳಿಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿಪಕ್ಷಗಳು ಸಮರವನ್ನು ಮುಂದುವರಿಸಿದ್ದರೆ ಮತ್ತೊಂದೆಡೆ 500, 1000 ರೂ. ಮುಖಬೆಲೆಯ ನೋಟು ನಿಷೇಧದ ನಂತರ ದೇಶಾದ್ಯಂತ ಶೇ.50ರಷ್ಟು ಹವಾಲಾ ಜಾಲಕ್ಕೆ ಬ್ರೇಕ್ ಬಿದ್ದಿದೆ ಎಂದು ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿ ಬಹಿರಂಗಪಡಿಸಿದೆ.
ನೋಟು ನಿಷೇಧದ ನಂತರ ದೇಶಾದ್ಯಂತ ಹವಾಲಾ ಜಾಲ ಏಜೆಂಟರ ನಡುವಿನ ದೂರವಾಣಿ ಕರೆಯಲ್ಲೂ ಭಾರೀ ಕುಸಿತ ಕಂಡಿರುವುದಾಗಿ ವರದಿ ವಿವರಿಸಿದೆ.
ನವೆಂಬರ್ 9ರಿಂದ ಜಾರಿ ಬಂದಿದ್ದ ನೋಟು ನಿಷೇಧದ ನಿರ್ಧಾರ ದೇಶದ ಹವಾಲಾ ಜಾಲಕ್ಕೆ ದೊಡ್ಡ ಹೊಡೆತ ನೀಡಿರುವುದಾಗಿ ಗುಪ್ತಚರ ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲ ನೋಟು ನಿಷೇಧದ ನಂತರ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ಸಂಬಂಧಿ ಹಿಂಸಾಚಾರಗಳು ಶೇ.60ರಷ್ಟು ಇಳಿಮುಖವಾಗಿದೆ ಎಂದು ತಿಳಿಸಿದೆ.
ಭಾರತದ ನೋಟುಗಳನ್ನು ಪಾಕಿಸ್ತಾನ ಸರ್ಕಾರ ಕ್ವೆಟ್ಟಾದಲ್ಲಿರುವ ಪ್ರೆಸ್ ನಲ್ಲಿ ಉತ್ಕೃಷ್ಟ ಮಟ್ಟದ ನಕಲಿ ನೋಟುಗಳನ್ನು ತಯಾರಿಸಿ ಭಯೋತ್ಪಾದನೆಗೆ ಬಳಸುತ್ತಿತ್ತು ಎಂದು ಭಾರತದ ಗುಪ್ತಚರ ಇಲಾಖೆ ಶಂಕಿಸಿದೆ. ಆ ನಿಟ್ಟಿನಲ್ಲಿ ನೋಟು ನಿಷೇಧದಿಂದಾಗಿ ಭಯೋತ್ಪಾದನೆ ಹಾಗೂ ಹವಾಲಾ ಕಳ್ಳಾಟಕ್ಕೆ ತಡೆ ಬಿದ್ದಿದೆ. ಕಾಶ್ಮೀರದಲ್ಲಿಯೂ ಕಲ್ಲು ಹೊಡೆಯುವ ಸಂಘಟನೆಗಳಿಗೆ ಈಗ ಹಣ ಸಿಗದಂತಾಗಿದೆ ಎಂದು ವರದಿ ವಿವರಿಸಿದೆ.
ಕಣಿವೆ ರಾಜ್ಯದಲ್ಲಿ ಈಗ ಶೇ.60ರಷ್ಟು ಹಿಂಸಾಚಾರಕ್ಕೆ ಕಡಿವಾಣ ಬಿದ್ದಿದೆ.
ನೋಟು ನಿಷೇಧದಿಂದಾಗಿ ನಕ್ಸಲೀಯರ ಚಟುವಟಿಕೆಗೆ ಹೊಡೆತ ಬಿದ್ದಿದೆ. ಹಣವಿಲ್ಲದೆ ಮಾವೋವಾದಿಗಳ ಅಟ್ಟಹಾಸದ ಧ್ವನಿ ಅಡಗತೊಡಗಿದೆ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
MUST WATCH
ಹೊಸ ಸೇರ್ಪಡೆ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ