ಓಲ್ಡ್ ಗೋವಾ ಸಂತ ಫ್ರಾನ್ಸಿಸ್ ಜೇವಿಯರ್ ಚರ್ಚ್ ಫೆಸ್ಟ್: ಲಕ್ಷಾಂತರ ಭಕ್ತರು ಭಾಗಿ
ಗೋವಾ ಸಿಎಂ ಸಾವಂತ್ ಸೇರಿ ವಿವಿಧ ರಾಜ್ಯಗಳ ಚರ್ಚ್ ಗಳ ಧರ್ಮಗುರುಗಳು ಭಾಗಿ
Team Udayavani, Dec 3, 2022, 8:13 PM IST
ಪಣಜಿ: ಸಂತ ಫ್ರಾನ್ಸಿಸ್ ಜೇವಿಯರ್ ರವರು ಏಸುಕ್ರಿಸ್ತರ ಬಗ್ಗೆ ಬೋಧನೆ ಮಾಡುವ ಮೂಲಕ ಜನರಲ್ಲಿ ಸಾಮರಸ್ಯ ಸೃಷ್ಠಿಸಲು ಪ್ರಯತ್ನಿಸಿದರು. ಸಂತ ಫ್ರಾನ್ಸಿಸ್ ಜೇವಿಯರ್ ರವರು ಕೈಯ್ಯಲ್ಲಿ ಗಂಟೆ ಮತ್ತು ಶಿಲುಬೆಯನ್ನು ಹಿಡಿದು ಹೊರಬರುತ್ತಿದ್ದರು. ಜನರನ್ನು ಒಗ್ಗೂಡಿಸಿ ಅವರು ಏಸುವಿನ ಕಥೆಗಳನ್ನು ಹಳುತ್ತಿದ್ದರು ಮತ್ತು ಪ್ರಾರ್ಥಿಸಲು ಹೇಳುತ್ತಿದ್ದರು, ಅದು ಅದ್ವಿತೀಯ ಬೋಧನಾ ವಿಧಾನವಾಗಿತ್ತು ಎಂದು ಬಾಮ್ ಜೀಸಸ್ ಬಾಸಿಲಿಕಾ ರೆಕ್ಟರ್ ಫಾದರ್ ಪ್ಯಾಟ್ರಿಸಿಯೋ ಫರ್ನಾಂಡಿಸ್ ಆಶೀರ್ವಚನ ನೀಡಿದರು.
ಶನಿವಾರ ನಡೆದ ಜಗತ್ಪ್ರಸಿದ್ಧ ಓಲ್ಡ್ ಗೋವಾದ ಸಂತ ಫ್ರಾನ್ಸಿಸ್ ಜೇವಿಯರ್ ಚರ್ಚ್ ನ ಫೆಸ್ಟ್ ನಲ್ಲಿ ದೇಶ ವಿದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಪ್ರಾರ್ಥನಾ ಸಭೆಗಳಲ್ಲಿ ಪಾಲ್ಗೊಂಡರು. ಈ ಪ್ರಾರ್ಥನಾ ಸಭೆಯಲ್ಲಿ ಫಾದರ್ ಪ್ಯಾಟ್ರಿಸಿಯೋ ಫರ್ನಾಂಡಿಸ್ ಆಶೀರ್ವಚನ ನೀಡಿದರು.
ಸಂತ ಫ್ರಾನ್ಸಿಸ್ ಕ್ಸೇವಿಯರ್ ರವರು 1541 ರಲ್ಲಿ ಲಿಸ್ಬನ್ ನಿಂದ ಪ್ರಯಾಣ ಬೆಳೆಸಿದರು ಮತ್ತು ಮೇ 6, 1542 ರಂದು ಭಾರತವನ್ನು ತಲುಪಿದರು. ಅವರು ಗೋವಾಕ್ಕೆ ಬರಲು ಒಂದು ವರ್ಷ ಒಂದು ತಿಂಗಳು ನಾಲ್ಕು ದಿನ ತೆಗೆದುಕೊಂಡರು. ಗೋವಾಕ್ಕೆ ಬಂದ ನಂತರ ಪ್ರೀತಿ, ಸೌಹಾರ್ದತೆಯ ಸಂದೇಶ ಸಾರಲು ಪ್ರಯತ್ನಿಸಿದರು. ಗೋವಾದಿಂದ ವಸಾಯಿ, ತಿರುವನಂತಪುರ, ಮದ್ರಾಸ್, ಮೈಲಾಪುರ್, ಮಲಯ, ಮಲಕ್ಕಾ, ಇಂಡೋನೇಷಿಯಾ, ಫಿಲಿಪೈನ್ಸ್, ಜಾವಾ, ಬೊರ್ನಿಯೊ, ಜಪಾನ್ ದೇಶಗಳಿಗೂ ತೆರಳಿ ಧರ್ಮ ಪ್ರಚಾರ ಮಾಡಿದರು ಎಂದು ಫಾದರ್ ಪ್ಯಾಟ್ರಿಸಿಯೋ ನುಡಿದರು.
ಓಲ್ಡ್ ಗೋವಾ ಫೆಸ್ಟ್ ನ ಪ್ರಾರ್ಥನಾ ಸಭೆಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್, ರಾಜ್ಯದ ಶಾಸಕರು ಮತ್ತು ಸಚಿವರು, ವಿವಿಧ ರಾಜ್ಯಗಳ ಚರ್ಚ್ ಗಳ ಧರ್ಮಗುರುಗಳು, ದೇಶವಿದೇಶಗಳಿಂದ ಆಗಮಿಸಿದ ಲಕ್ಷಾಂತರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು. ಶನಿವಾರ ಬೆಳಿಗ್ಗೆಯಿಂದ ವಿವಿಧ ಭಾಷೆಗಳಲ್ಲಿ ಪ್ರಾರ್ಥನಾ ಸಭೆ ಜರುಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
MUST WATCH
ಹೊಸ ಸೇರ್ಪಡೆ
LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್
Belthangady: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ
NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ
Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್ ಕಾನ್ಸ್ಟೆಬಲ್ ಗೆ ಗಾಯ