
ಮತಬ್ಯಾಂಕ್ ರಾಜಕಾರಣವಿಲ್ಲ; ಇಸ್ರೇಲ್ ವಿಚಾರದಲ್ಲಿ ನಮ್ಮ ನಿಲುವು ಸಾಕ್ಷಿ: ಜೈಶಂಕರ್
ವೋಟ್ ಬ್ಯಾಂಕ್ ರಾಜಕೀಯವು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಪ್ರಾಬಲ್ಯ ಸಾಧಿಸಿದ ದಿನಗಳು ಕಳೆದುಹೋಗಿವೆ
Team Udayavani, Sep 5, 2022, 3:53 PM IST

ನವದೆಹಲಿ : ”ವಿದೇಶಾಂಗ ನೀತಿಗಳಲ್ಲಿ ಮತಬ್ಯಾಂಕ್ ರಾಜಕಾರಣ ಮೇಲುಗೈ ಸಾಧಿಸುವ ದಿನಗಳು ಕಳೆದು ಹೋಗಿವೆ ಮತ್ತು ಇಸ್ರೇಲ್ನ ವಿಚಾರದಲ್ಲಿ ಭಾರತದ ಪ್ರಸ್ತುತ ನಿಲುವು ಇದಕ್ಕೆ ಸಾಕ್ಷಿ” ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
‘ದಿ ಇಂಡಿಯಾ ವೇ : ಸ್ಟ್ರೇಟರ್ಜಿಸ್ ಫಾರ್ ಎನ್ ಅನ್ ಸರ್ಟೈನ್ ವರ್ಲ್ಡ್” ಗುಜರಾತಿ ಭಾಷಾಂತರ ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಜೈಶಂಕರ್ ಅವರು ಶೋತೃಗಳ ಪ್ರಶ್ನೆಗಳಿಗೆ ಉತ್ತರಿಸಿದರು.
“ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಯುಗಗಳಿಂದ ನಡೆಯುತ್ತಿದೆ. ನಮಗೆ ಕೆಲವು ರಾಜಕೀಯ ಕಾರಣಗಳಿವೆ, ಇದರಿಂದಾಗಿ ನಾವು ಇಸ್ರೇಲ್ನೊಂದಿಗೆ ನಮ್ಮ ಸಂಬಂಧವನ್ನು ಮುಂದುವರಿಸಲಿಲ್ಲ. ನಾವು ನಮ್ಮನ್ನು ನಿರ್ಬಂಧಿಸಿದ್ದೇವೆ. ಇಸ್ರೇಲ್ಗೆ ಭೇಟಿ ನೀಡಿದ ಭಾರತದ ಇತಿಹಾಸದಲ್ಲಿ ನರೇಂದ್ರ ಮೋದಿ ಮೊದಲ ಪ್ರಧಾನಿಯಾಗಿದ್ದಾರೆ. ನಾವು ಬಾಂಧವ್ಯದಿಂದ ಪ್ರಯೋಜನ ಪಡೆಯಬಹುದಿತ್ತು ಎಂಬುದು ಇಡೀ ದೇಶಕ್ಕೆ ತಿಳಿದಿದೆ. ಆದರೆ ಒಮ್ಮೆ ನೀವು ವೋಟ್ ಬ್ಯಾಂಕ್ ರಾಜಕಾರಣದಿಂದ ಹೊರಬಂದರೆ, ನಿಮ್ಮ ವಿದೇಶಾಂಗ ನೀತಿಗಳು ಸಹ ಪರಿಣಾಮ ಬೀರುತ್ತವೆ. ವೋಟ್ ಬ್ಯಾಂಕ್ ರಾಜಕೀಯವು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಪ್ರಾಬಲ್ಯ ಸಾಧಿಸಿದ ದಿನಗಳು ಕಳೆದುಹೋಗಿವೆ” ಎಂದು ಜೈಶಂಕರ್ ಹೇಳಿದರು.
ಭಾರತದಲ್ಲಿ ಜನಸಂಖ್ಯೆ ನಿಯಂತ್ರಣದ ಕುರಿತುಸಚಿವ ಡಾ ಎಸ್ ಜೈಶಂಕರ್ ಮಾತನಾಡಿ, ”ಬಲವಂತದ ಜನಸಂಖ್ಯಾ ನಿಯಂತ್ರಣದ ಅತ್ಯಂತ ಅಪಾಯಕಾರಿ ಪರಿಣಾಮಗಳನ್ನು ಬೀರುತ್ತದೆ. ಶಿಕ್ಷಣ, ಸಾಮಾಜಿಕ ಅರಿವು ಮತ್ತು ಸಮೃದ್ಧಿಯ ಕಾರಣದಿಂದಾಗಿ ಭಾರತೀಯ ಜನಸಂಖ್ಯೆಯ ಬೆಳವಣಿಗೆಯ ದರವು ಕ್ಷೀಣಿಸುತ್ತಿದೆ. ನಮ್ಮಲ್ಲಿ ಪ್ರತಿಯೊಬ್ಬರ ಕುಟುಂಬದ ಗಾತ್ರವು ಕಾಲಾನಂತರದಲ್ಲಿ ಚಿಕ್ಕದಾಗುತ್ತಿದೆ. ಬಲವಂತದ ಜನಸಂಖ್ಯೆ ನಿಯಂತ್ರಣವು ತುಂಬಾ ಅಪಾಯಕಾರಿ ಪರಿಣಾಮಗಳನ್ನು ಉಂಟುಮಾಡಬಹುದು, ಇದು ಲಿಂಗ ಅಸಮತೋಲನಕ್ಕೆ ಕಾರಣವಾಗಬಹುದು” ಎಂದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಷ್ಟ್ರದ ಪ್ರಗತಿಗಾಗಿ ಜಾತಿ ಮತ್ತು ಪ್ರಾದೇಶಿಕ ತಾರತಮ್ಯವನ್ನು ತೊಡೆದುಹಾಕಿ: ಯೋಗಿ ಆದಿತ್ಯನಾಥ್

ಒಡಿಶಾ ಸಚಿವನ ಹತ್ಯೆ: ಸಿಬಿಐ ತನಿಖೆಗೆ ಆಗ್ರಹ

ಬಿಜೆಪಿ ಜೊತೆಗೆ ಮೈತ್ರಿಗಿಂತ ಸಾಯುವುದು ಲೇಸು: ನಿತೀಶ್ ಕುಮಾರ್

ಮೋದಿ ಸರ್ಕಾರದ ಡಿಡಿಎಲ್ಜೆಯಲ್ಲಿ ಸಚಿವ ಜೈಶಂಕರ್ ನಟನೆ: ಜೈರಾಮ್ ರಮೇಶ್

ಗೋರಖ್ನಾಥ್ ದೇಗುಲ ದಾಳಿ: ಆರೋಪಿ ಅಹ್ಮದ್ ಮುರ್ತಾಜಾಗೆ ಮರಣದಂಡನೆ ಶಿಕ್ಷೆ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
