Kerala ವಿಧಾನಸಭೆಯಲ್ಲಿ ಓಣಂ ಔತಣ ಕೂಟ; ಸ್ಪೀಕರ್ ಸೇರಿ ಹಲವರಿಗೆ ಸಿಗಲಿಲ್ಲ ಊಟ!
1300 ಜನರಿಗೆ ತರಿಸಲಾಗಿದ್ದ ಊಟ 800 ಜನರೇ ಖಾಲಿ ಮಾಡಿದರು...!
Team Udayavani, Aug 25, 2023, 10:42 PM IST
ತಿರುವನಂತಪುರಂ: ಕೇರಳದ ಅಸೆಂಬ್ಲಿ ನೌಕರರಿಗಾಗಿ ಆಯೋಜಿಸಲಾಗಿದ್ದ ಓಣಂ ಭೋಜನ ಕೂಟದಲ್ಲಿ ಸ್ಪೀಕರ್ ಸೇರಿ ಹಲವಾರು ಊಟ ಸಿಗದೇ ನಿರಾಶೆಯಿಂದ, ಹಸಿವಿನಿಂದ ವಾಪಾಸಾದ ಘಟನೆ ಶುಕ್ರವಾರ ನಡೆದಿದೆ.
ಭೋಜನ ಕೂಟದಲ್ಲಿ ಕೇರಳ ವಿಧಾನಸಭೆಯ ಸ್ಪೀಕರ್ ಎ.ಎನ್.ಶಂಸೀರ್ ಅವರು 20 ನಿಮಿಷಕ್ಕೂ ಹೆಚ್ಚು ಕಾಲ ಕಾದರೂ ಪೂರ್ಣ ಪ್ರಮಾಣದ ಊಟ ಸಿಗಲಿಲ್ಲ. ಅವರಿಗೆ ಬೇರೆ ದಾರಿಯೇ ಕಾಣದೆ ಬಾಳೆ ಎಲೆಯ ಮೇಲೆ ಮೊದಲು ಬಡಿಸಿದ ಪಾಯಸ ಮತ್ತು ಬಾಳೆಹಣ್ಣಿನೊಂದಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.
ಮೊದಲು ಎಲ್ಲಾ ನೌಕರರು ಹಣ ಸಂಗ್ರಹಿಸಿ ಓಣಂ ಹಬ್ಬ ಆಚರಣೆ ಸೇರಿದಂತೆ ಔತಣಕೂಟ ಆಯೋಜಿಸುತ್ತಿದ್ದರು. ಆದರೆ, ಈ ಬಾರಿ ಜವಾಬ್ದಾರಿಯನ್ನು ಗುತ್ತಿಗೆ ನೀಡಿ ಸರಕಾರದ ಖರ್ಚಿನಲ್ಲಿ ನಡೆಸುವ ಪ್ರಯತ್ನ ವಿಫಲವಾಯಿತು.1300 ಜನರಿಗೆ ತರಿಸಲಾಗಿದ್ದ ವಿವಿಧ ಖಾದ್ಯಗಳ ಭೋಜನ ಕೇವಲ 800 ಮಂದಿ ಊಟ ಮಾಡಿದಾಗಲೇ ಮುಗಿದು ಹೋಗಿತ್ತು.
ವರದಿಗಳ ಪ್ರಕಾರ, ಉದ್ಯೋಗಿಗಳಲ್ಲೇ ಅಸಮಾಧಾನವಿದ್ದು, ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ವರದಿಯಾಗಿದೆ. ಹಲವರು ಹತ್ತಿರದ ಹೋಟೆಲ್, ಕ್ಯಾಂಟೀನ್ ಮತ್ತು ಅಂಗಡಿಗಳಿಗೆ ತೆರಳಿ ಹಸಿವು ನೀಗಿಸಿಕೊಂಡ ದೃಶ್ಯ ಕಂಡು ಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ