ಇಲ್ಲಿ ನಡೆಯುತ್ತದೆ ಪರಸ್ಪರ ಕಲ್ಲು ಎಸೆಯುವ ಉತ್ಸವ!
Team Udayavani, Aug 16, 2019, 8:00 AM IST
ಉತ್ತರಾಖಂಡ: ನಮ್ಮದು ವೈವಿಧ್ಯತೆಯಿಂದ ಕೂಡಿದ ದೇಶ. ಇಲ್ಲಿ ಒಂದೊಂದು ಕಡೆ ಒಂದೊಂದು ರೀತಿಯ ಆಚರಣೆಗಳಿರುತ್ತವೆ. ಉತ್ತರಾಖಂಡ ರಾಜ್ಯದ ಚಂಪಾವತ್ ಜಿಲ್ಲೆಯಲ್ಲಿರುವ ದೈಧುರ ಎಂಬಲ್ಲಿರುವ ದೇವಿ ಮಂದಿರದಲ್ಲಿ ಪ್ರತೀ ವರ್ಷ ಕಲ್ಲೆಸೆಯುವ ಉತ್ಸವ ನಡೆಯುತ್ತದೆ. ಇದು ಅಲ್ಲಿನ ದೇವಿಯನ್ನು ಸಂತುಷ್ಟಿಗೊಳಿಸುವ ಆಚರಣೆಯಾಗಿ ಪ್ರತೀತಿಯಲ್ಲಿದೆ.
ಇಲ್ಲಿರುವ ಬಾರಾಹಿ ದೇವಿಯನ್ನು ಸಂತೃಪ್ತಿಗೊಳಿಸುವ ಸಲುವಾಗಿ ಪ್ರತೀ ವರ್ಷ ‘ಬಾಗ್ವಾಲ್’ ಕಲ್ಲೆಸೆಯುವ ಉತ್ಸವ ರಕ್ಷಾ ಬಂಧನದ ದಿನ ನಡೆಯುತ್ತದೆ.
ಆದರೆ ಪ್ರತೀ ವರ್ಷ ಈ ಉತ್ಷವದ ಸಂದರ್ಭದಲ್ಲಿ ಹಲವಾರು ಭಕ್ತರು ಗಾಯಗೊಳ್ಳುತ್ತಲೇ ಇರುತ್ತಾರೆ. ಈ ಸಲವೂ ಸಹ ಸುಮಾರು 120 ಜನ ಈ ಉತ್ಸವಾಚರಣೆಯ ವೇಳೆ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
‘ಬಾಗ್ವಾಲ್’ ಎಂಬ ಹೆಸರಿನ ಈ ಉತ್ಸವದ ಸಂದರ್ಭದಲ್ಲಿ ಎರಡು ತಂಡಗಳು ಪರಸ್ಪರ ಕಲ್ಲುಗಳನ್ನು ಎಸೆದುಕೊಳ್ಳುತ್ತವೆ. ಸಾವಿರಾರು ಜನ ಭಕ್ತರು ಈ ಉತ್ಸವದಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವಿಶೇಷವಾಗಿದೆ.
ಇಲ್ಲಿನ ಐತಿಹ್ಯದ ಪ್ರಕಾರ ಚಾಮ್ಯಾಲ್, ಗಹರ್ವಾಲ್, ಓಲ್ಗಿಯಾ ಮತ್ತು ಲಾಮ್ಗರಿಯಾ ಎಂಬ ಹೆಸರಿನ ನಾಲ್ಕು ಜನ ಜಮೀನ್ದಾರರು ಎರಡು ಗುಂಪುಗಳಾಗಿ ರೂಪುಗೊಂಡು ಪರಸ್ಪರ ಕಲ್ಲೆಸೆದುಕೊಳ್ಳುವುದಕ್ಕೆ ಪ್ರಾರಂಭಿಸಿದರಂತೆ, ಅದೇ ಪದ್ಧತಿಯು ಕಾಲಾನಂತರದಲ್ಲಿ ಸಂಪ್ರದಾಯವಾಗಿ ಮುಂದುವರಿದು ಬಂತು ಎನ್ನುತ್ತಾರೆ ಸ್ಥಳೀಯರು. ಪ್ರಧಾನ ಅರ್ಚಕರು ಸೂಚನೆ ಕೊಟ್ಟ ಬಳಿಕ ಈ ಕಲ್ಲೆಸೆಯುವಿಕೆ ನಿಲ್ಲುತ್ತದೆ.
Uttarakhand: ‘Bagwal’ stone pelting festival held in Champawat, part of a ritual to appease a local deity. More than 120 people injured. The festival is held every year at the temple of goddess Barahi on the occasion of #RakshaBandhan. pic.twitter.com/bU0lKODXt3
— ANI (@ANI) August 15, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ