ಪಾಕ್ ನುಸುಳುಕೋರನ ಹತ್ಯೆ; ಸಾಂಬಾದಲ್ಲಿ ಒಳನುಸುಳುತ್ತಿದ್ದಂತೆ ಯೋಧರ ಗುಂಡು
Team Udayavani, Jan 4, 2022, 6:30 AM IST
ಶ್ರೀನಗರ/ಜಮ್ಮು: ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ನುಸುಳುಕೋರ ನೊಬ್ಬನನ್ನು ಸೋಮವಾರ ಬಿಎಸ್ಎಫ್ ಯೋಧರು ಕೊಂದಿದ್ದಾರೆ.
ರಾಮಗಢ ಗಡಿಯಲ್ಲಿ ಅನು ಮಾನಾಸ್ಪದ ಚಲನ ವಲನ ಕಂಡುಬಂದ ಹಿನ್ನೆಲೆ ಜಾಗೃತ ರಾದ ಯೋಧರು, ಪಾಕಿಸ್ಥಾನಿ ನುಸುಳುಕೋರನ ಮೇಲೆ ಗುಂಡು ಹಾರಿಸಿದ್ದಾರೆ. ಆತನನ್ನು ಪ್ರಶ್ನಿಸಲು ಯತ್ನಿಸಿದರೂ ಆತ ಮಣಿಯದ ಕಾರಣ ಗುಂಡು ಹಾರಿಸ ಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರವಿವಾರವಷ್ಟೇ ದೇಶ ದೊಳಕ್ಕೆ ನುಸುಳಲು ಯತ್ನಿಸಿದ್ದ ಪಾಕ್ ಸೈನಿಕ ನನ್ನು ಹೊಡೆದುರುಳಿಸಲಾಗಿತ್ತು.
ಇಬ್ಬರು ಉಗ್ರರ ಅಂತ್ಯ: ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಮವಾರ 2 ಪ್ರತ್ಯೇಕ ಎನ್ಕೌಂಟರ್ ನಡೆಸಿ, ಇಬ್ಬರು ಉಗ್ರರ ಹತ್ಯೆಗೈಯಲಾಗಿದೆ. ಶ್ರೀನಗರದ ಹೊರ ವಲಯದಲ್ಲಿರುವ ಹರ್ವಾನ್ ಪ್ರದೇಶದಲ್ಲಿ ಮೊದಲ ಎನ್ಕೌಂಟರ್ ನಡೆದಿದೆ.
ಇದನ್ನೂ ಓದಿ:ಪ್ಯಾಂಗಾಂಗ್ ಸರೋವರಕ್ಕೆ ಸೇತುವೆ ನಿರ್ಮಿಸುತ್ತಿದೆ ಚೀನಾ! ಉಪಗ್ರಹ ಚಿತ್ರದಿಂದ ಸ್ಪಷ್ಟ
ಅದರಲ್ಲಿ ಲಷ್ಕರ್-ಎ-ತಯ್ಯಬಾ ಉಗ್ರ ಸಂಘಟನೆಯ ವಾಂಟೆಡ್ ಉಗ್ರ ನೆನಿಸಿಕೊಂಡಿದ್ದ ಸಲೀಮ್ ಪರ್ರಾಯ್ನನ್ನು ಹತ್ಯೆಗೈಯಲಾಗಿದೆ. ಇದೇ ವೇಳೆ ಗಾಸು ಗ್ರಾಮದಲ್ಲಿಯೂ ಎನ್ಕೌಂಟರ್ ನಡೆಸಲಾಗಿದ್ದು ಓರ್ವ ಉಗ್ರನನ್ನು ಹತ್ಯೆಗೈಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ