ಕಾರಿನ ಮೇಲೆ ಸಂಚಾರ: ನಟ ಪವನ್ಗೆ ಸಂಚಕಾರ!
Team Udayavani, Nov 13, 2022, 7:35 AM IST
ಹೈದರಾಬಾದ್: ಆಂಧ್ರಪ್ರದೇಶದ ಜನಸೇನಾ ನಾಯಕ, ಖ್ಯಾತ ನಟ ಪವನ್ ಕಲ್ಯಾಣ್ ಇತ್ತೀಚೆಗೆ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ವಿರುದ್ಧ ತಿರುಗಿಬಿದ್ದಿದ್ದಾರೆ.
ಇದೇ ಉತ್ಸಾಹದಲ್ಲಿ ಅವರು ಸಿನೆಮಾ ಶೈಲಿಯಲ್ಲಿ ಆಂಧ್ರ ಪ್ರದೇಶದ ಗುಂಟೂರಿನ ಹೆದ್ದಾರಿಯಲ್ಲಿ ಕಾರಿನ ಮೇಲೆ ಕುಳಿತು ಸವಾರಿ ಮಾಡಿದ್ದರು. ಅದೀಗ ಅವರಿಗೆ ದೊಡ್ಡ ಸಂಕಷ್ಟ ತಂದಿಟ್ಟಿದೆ. ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ ಸ್ಪಷ್ಟ ಸಾಕ್ಷ್ಯವಿರುವುದರಿಂದ ಅವರ ವಿರುದ್ಧ ಪೊಲೀಸರು ಪ್ರಬಲ ದೂರನ್ನೇ ದಾಖಲಿಸಿಕೊಂಡಿದ್ದಾರೆ.
ನ.5ರಂದು ಗುಂಟೂರು ರಸ್ತೆಯಲ್ಲಿ ಪವನ್ ಕಲ್ಯಾಣ್ ತಮ್ಮ ಪಡೆಗಳೊಂದಿಗೆ ಸಂಚರಿಸಿದ್ದರು. ಕಾರಿನ ಮೇಲೆ ಪವನ್ ಕಾಲುಚಾಚಿ ಕುಳಿತಿದ್ದರು. ಅವರ ಭದ್ರತಾ ಸಿಬಂದಿ, ಇನ್ನಿತರರು ಕಾರಿನ ಎರಡೂ ಬದಿಗಳಿಗೆ ನೇತುಬಿದ್ದಿದ್ದರು. ಇದೇ ಮಾದರಿಯಲ್ಲಿ ಹಲವು ಕಾರುಗಳಲ್ಲಿ ಅವರನ್ನು ಜನ ಹಿಂಬಾಲಿಸುತ್ತಿದ್ದರು. ಒಂದು ಕಡೆ ವೇಗವಾಗಿ ಚಲಿಸುತ್ತಿರುವ ಕಾರುಗಳು,ಮತ್ತೊಂದು ಕಡೆ ಅಭಿಮಾನಿಗಳು… ಸಣ್ಣ ವ್ಯತ್ಯಾಸವಾಗಿದ್ದರೂ ಹತ್ತಾರು ಮಂದಿ ಸಾವಿಗೀಡಾಗುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ