ರಫೇಲ್: ಪಿಎಂಒ ಹಸ್ತಕ್ಷೇಪವಿಲ್ಲ
Team Udayavani, May 5, 2019, 7:07 AM IST
ಹೊಸದಿಲ್ಲಿ: ರಫೇಲ್ ಒಪ್ಪಂದದ ಸುಪ್ರೀಂಕೋರ್ಟ್ ತೀರ್ಪು ಮರುಪರಿಶೀಲನೆ ದಾವೆಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸರಕಾರ, ರಫೇಲ್ ಒಪ್ಪಂದದ ಮೇಲ್ವಿಚಾರಣೆಯನ್ನು ಪ್ರಧಾನಿ ಸಚಿವಾಲಯ ನಡೆಸಿರುವುದನ್ನು ಹಸ್ತಕ್ಷೇಪ ಎಂದು ಪರಿಗಣಿಸಲಾಗದು ಎಂದಿದೆ. ಇದು ಎರಡು ಸರಕಾರಗಳು ಮಾಡಿಕೊಂಡ ಒಪ್ಪಂದ. ಹೀಗಾಗಿ ಇದನ್ನು ಹಸ್ತಕ್ಷೇಪ ಎಂದು ಪರಿಗಣಿಸಲಾಗದು. ಮಾಧ್ಯಮಗಳ ವರದಿ, ಅಪೂರ್ಣ ದಾಖಲೆಗಳ ಆಧಾರದಲ್ಲಿ ದೂರುದಾರರು ಪ್ರಕರಣದ ವಿಚಾರಣೆ ಮರು ಆರಂಭಿಸುವಂತೆ ಕೇಳುವುದು ಸರಿಯಲ್ಲ ಎಂದೂ ಕೇಂದ್ರ ಸರಕಾರ ಸಲ್ಲಿಸಿದ ಪ್ರತಿಕ್ರಿಯೆಯಲ್ಲಿ ವಿವರಿಸಲಾಗಿದೆ.
ಡಿಸೆಂಬರ್ 14 ರಂದು ಕೋರ್ಟ್ ನೀಡಿದ್ದ ತೀರ್ಪು ಮರುಪರಿಶೀಲಿಸುವಂತೆ ಮಾಜಿ ಸಚಿವ ಯಶವಂತ ಸಿನ್ಹಾ, ಅರುಣ್ ಶೌರಿ ಹಾಗೂ ಹೋರಾಟಗಾರ ಪ್ರಶಾಂತ್ ಭೂಷಣ್ ಸೇರಿ ಹಲವರು ದೂರು ಸಲ್ಲಿಸಿದ್ದು, ಇದರ ವಿಚಾರಣೆ ಮುಂದಿನ ವಾರ ನಡೆಯುವ ಸಾಧ್ಯತೆಯಿದೆ.