ಅಸ್ಸಾಂನಲ್ಲಿ ಇತರ ರಾಜ್ಯಗಳ ಇಮಾಮರಿಗೆ ದೃಢೀಕರಣ ಕಡ್ಡಾಯ: ಹಿಮಂತ್ ಬಿಸ್ವಾ ಶರ್ಮಾ
Team Udayavani, Aug 23, 2022, 7:07 PM IST
ಗುವಾಹಟಿ: ಬೇರೆ ರಾಜ್ಯಗಳಿಂದ ಬಂದು ಅಸ್ಸಾಂನಲ್ಲಿ ಕೆಲಸ ಮಾಡುವ ಇಮಾಮ್ಗಳು ಮತ್ತು ಮದ್ರಸಾ ಶಿಕ್ಷಕರಿಗೆ ಪೊಲೀಸ್ ದೃಢೀಕರಣ ಕಡ್ಡಾಯ ಮಾಡಲಾಗುವುದು ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ.
ಗೋಲ್ಪಾರಾ ಜಿಲ್ಲೆಯಲ್ಲಿ ಬಾಂಗ್ಲಾದೇಶದ ಅನ್ಸಾರುಲ್ಲಾ ಬಾಂಗ್ಲಾ ಟೀಂ ಮತ್ತು ಅಲ್-ಖೈದಾ ಇನ್ ದ ಇಂಡಿಯನ್ ಸಬ್ಕಾಂಟಿನೆಂಟ್ ಜತೆಗೆ ಲಿಂಕ್ ಇದ್ದ ಇಬ್ಬರನ್ನು ಬಂಧಿಸಿದ ಪ್ರಕರಣದ ಬಳಿಕ ಈ ಘೋಷಣೆ ಮಾಡಲಾಗಿದೆ. 4 ತಿಂಗಳ ಅವಧಿಯಲ್ಲಿ ಬಾಂಗ್ಲಾದೇಶದ 25 ಮಂದಿಯನ್ನು ಬಂಧಿಸಲಾಗಿದೆ.
ಬೇರೆ ಸ್ಥಳಗಳಿಂದ ಬಂದು ಕೆಲಸ ಆರಂಭಿಸುವ ಇಮಾಮ್ಗಳು ಮತ್ತು ಮದ್ರಾಸ ಶಿಕ್ಷಕರ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ಕೊಡಬೇಕು. ಪೊಲೀಸರು ಅವರ ಮಾಹಿತಿ ದೃಢೀಕರಣ ಮಾಡುತ್ತಾರೆ. ಹಾಗೆಯೇ ಅವರಿಗೆಂದೇ ವಿಶೇಷ ಸರ್ಕಾರಿ ಪೋರ್ಟಲ್ ರಚಿಸಲಾಗುವುದು.ಅದರಲ್ಲಿ ಅವರು ಸಂಪೂರ್ಣ ಮಾಹಿತಿ ಭರ್ತಿ ಮಾಡಬೇಕಾಗುತ್ತದೆ ಎಂದು ಸಿಎಂ ಹಿಮಾಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.