

Team Udayavani, Jun 10, 2024, 6:07 AM IST
ಶ್ರೀನಗರ: ಸತತ 3ನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರಕ್ಕೇ ರಿದ ಮೋದಿ ಅವರಿಗೆ ಉಡುಗೊರೆ ನೀಡುವುದಕ್ಕಾಗಿ ಜಮ್ಮುವಿನ ಆಭರಣ ವ್ಯಾಪಾರಿಯೊಬ್ಬರು 3ಕೆಜಿ ತೂಕದ ಬೆಳ್ಳಿಯ ಕಮಲವನ್ನು ತಯಾರಿಸಿದ್ದಾರೆ.
ಮುಥಿ ಗ್ರಾಮದ ನಿವಾಸಿಯಾಗಿರುವ ರಿಂಕು ಚೌಹಾಣ್ 370ನೇ ವಿಧಿ ರದ್ದುಗೊಳಿಸಿದ್ದಕ್ಕಾಗಿ ಹಾಗೂ ರಾಮ ಮಂದಿರ ನಿರ್ಮಿ ಸಿದ್ದಕ್ಕಾಗಿ ಮೋದಿ ಅವರಿಗೆ ವಿಶೇಷವಾಗಿ ಏನಾದರು ಉಡುಗೊರೆ ನೀಡಲು ಬಯಸಿದ್ದರು. ಇದರ ಜತೆಗೆ ಮೂರನೇ ಬಾರಿಯೂ ಮೋದಿ ಅವರೇ ಪಿಎಂ ಆಗುವ ವಿಶ್ವಾಸವಿದ್ದ ಕಾರಣ ಪದಗ್ರಹಣದ ಬಳಿಕವೇ ಉಡುಗೊರೆ ನೀಡಬೇಕು ಎಂದುಕೊಂಡಿದ್ದರು.
ಅದರಂತೆ 3ಕೆ.ಜಿ ಸಂಪೂರ್ಣ ಬೆಳ್ಳಿ ಬಳಸಿ ಬಿಜೆಪಿ ಚಿಹ್ನೆಯಾದ ಕಮಲವನ್ನು ತಯಾರಿಸಿದ್ದಾರೆ. ಖುದ್ದು ಅವರೇ ಕುಸುರಿ ಕೆಲಸವನ್ನೂ ನಡೆಸಿದ್ದು ಇದಕ್ಕಾಗಿ 15 ರಿಂದ 20 ದಿನಗಳ ಸಮಯ ತೆಗೆದುಕೊಂಡಿದ್ದಾಗಿ ಹೇಳಿದ್ದಾರೆ. ಕಳೆದ 20 ವರ್ಷದಿಂದಲೂ ಬಿಜೆಪಿ ಜತೆಗೆ ಒಡನಾಟ ಹೊಂದಿರುವ ರಿಂಕು ಪ್ರಸಕ್ತ ಬಿಜೆಪಿ ಯುವಮೋರ್ಚಾದ ವಕ್ತಾರರೂ ಆಗಿದ್ದಾರೆ.
Ad
Monsoon Session; ಸಂಸದರಿಗಿನ್ನು ಕುಳಿತಲ್ಲೇ ಹಾಜರಾತಿಗೆ ಅವಕಾಶ!
ಬಾಹ್ಯಾಕಾಶ ಹೀರೋ ಶುಕ್ಲಾ ಇಂದು ಭುವಿಗೆ; ಅಂತರಿಕ್ಷದಿಂದ ಪಯಣ ಶುರು
Supreme Court: ವಿಚ್ಛೇದನಕ್ಕೆ ರಹಸ್ಯ ಕಾಲ್ ರೆಕಾರ್ಡಿಂಗ್ ಸಹ ಸಾಕ್ಷ್ಯ
Hyderabad: ಕ್ರಿಕೆಟ್ ಚೆಂಡು ಹುಡುಕುತ್ತಿದ್ದಾಗ ಮನೆಯಲ್ಲಿ ಕಂಡದ್ದು ಅಸ್ಥಿಪಂಜರ!
Supreme Court: ದ್ವೇಷ ಭಾಷಣ ನಿಯಂತ್ರಿಸಿ: ಸರಕಾರಕ್ಕೆ ಸುಪ್ರೀಂ ಸೂಚನೆ
You seem to have an Ad Blocker on.
To continue reading, please turn it off or whitelist Udayavani.