Saroornagar: ಪ್ರೇಯಸಿಯನ್ನು ಕೊಂದು ದೇವಸ್ಥಾನದ ಬಳಿ ಚರಂಡಿಗೆ ಎಸೆದ ಅರ್ಚಕ!
Team Udayavani, Jun 10, 2023, 1:10 PM IST
ಹೈದರಾಬಾದ್: ವಿವಾಹಿತ ಪುರೋಹಿತರೊಬ್ಬರು ಮಹಿಳೆಯೊಬ್ಬರನ್ನು ಕೊಂದು ಅವರ ದೇಹವನ್ನು ದೇವಸ್ಥಾನದ ಬಳಿಯ ಚರಂಡಿಯಲ್ಲಿ ಅಡಗಿಸಿಟ್ಟ ಘಟನೆ ತೆಲಂಗಾಣದ ಸರೋರ್ ನಗರದಲ್ಲಿ ನಡೆದಿದೆ.
ಆರೋಪಿಯನ್ನು ಅಯ್ಯಗಾರಿ ಸಾಯಿ ಕೃಷ್ಣ ಎಂದು ಗುರುತಿಸಲಾಗಿದೆ. ಕುರುಗಂಟಿ ಅಪ್ಸರಾ ಎಂಬಾಕೆ ಮೃತ ಯುವತಿ.
ಕುರುಗಂಟಿ ಅಪ್ಸರಾಳನ್ನು ಭದ್ರಾಚಲಂಗೆ ತೆರಳಲು ಮುಂದಾಗಿದ್ದ ವೇಳೆ ಶಂಶಾಬಾದ್ ಬಸ್ ನಿಲ್ದಾಣದಲ್ಲಿ ಡ್ರಾಪ್ ಮಾಡಿರುವುದಾಗಿ ಸಾಯಿಕೃಷ್ಣ ಅವರೇ ನಾಪತ್ತೆ ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಅಂದಿನಿಂದ ಅವಳು ಯಾವುದೇ ಕರೆಗಳಿಗೆ ಪ್ರತಿಕ್ರಿಯಿಸಲಿಲ್ಲ. ಮೇ 3 ರಿಂದ ನಾಪತ್ತೆಯಾಗಿದ್ದಾಳೆ ಎಂದು ಪುರೋಹಿತ ಸಾಯಿ ಕೃಷ್ಣ ದೂರು ನೀಡಿದ್ದರು.
ದೂರಿನಲ್ಲಿ ಅಪ್ಸರಾ ತನ್ನ ಸೊಸೆ ಎಂದು ಸಾಯಿ ಕೃಷ್ಣ ಹೇಳಿಕೊಂಡಿದ್ದ. ತನಿಖೆ ನಡೆಸಿದ ಪೊಲೀಸರು ದೂರು ನೀಡಿದ ಸಾಯಿ ಕೃಷ್ಣನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಸಿಸಿಟಿವಿ ವಿಡಿಯೋಗಳು ಸೇರಿ ಹಲವು ಸಾಕ್ಷ್ಯಗಳು ಇದಕ್ಕೆ ಬಲ ತುಂಬಿದ್ದವು.
ಬಳಿಕ ವಿಚಾರಣೆಯ ವೇಳೆ ಸಾಯಿ ಕೃಷ್ಣ ತನ್ನ ತಪ್ಪು ಒಪ್ಪಿಕೊಂಡಿದ್ದು, ತಾನೇ ಆಕೆಯನ್ನು ಕೊಲೆಗೈದಿರುವುದಾಗಿ ಹೇಳಿದ್ದಾನೆ.
ಪೊಲೀಸರ ಮಾಹಿತಿಯ ಪ್ರಕಾರ ಸಾಯಿ ಕೃಷ್ಣ ವಿವಾಹಿತನಾಗಿದ್ದು, ಆತನಿಗೆ ಇಬ್ಬರು ಮಕ್ಕಳಿದ್ದಾರೆ. ಅದಾಗ್ಯೂ ಅಪ್ಸರಾ ಜತೆ ಸಂಬಂಧ ಇಟ್ಟಕೊಂಡಿದ್ದ. ತನ್ನನ್ನು ಮದುವೆಯಾಗು ಎಂದು ಅಪ್ಸರಾ ಒತ್ತಾಯ ಮಾಡುತ್ತಿದ್ದಳು ಎಂದು ಸಾಯಿ ಕೃಷ್ಣ ಹೇಳಿಕೊಂಡಿದ್ದಾನೆ.
ಇದನ್ನೂ ಓದಿ:ವಿಮಾನ ಅಪಘಾತದಲ್ಲಿ ನಾಪತ್ತೆ: 40 ದಿನಗಳ ಬಳಿಕ ಅಮೆಜಾನ್ ಕಾಡಿನಲ್ಲಿ ಪತ್ತೆಯಾದ 4 ಮಕ್ಕಳು
ಶಂಶಾಬಾದ್ ನಲ್ಲಿ ಅಪ್ಸರಾಳನ್ನು ಕೊಲೆ ಮಾಡಿದ್ದ ಸಾಯಿ ಕೃಷ್ಣ ಬಳಿಕ ಮೃತದೇಹವನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಕಟ್ಟಿ ಸರೋರ್ ನಗರಕ್ಕೆ ಸಾಗಿಸಿದ್ದ. ಅಲ್ಲಿ ಎಂಆರ್ ಓ ಕಚೇರಿ ಬಳಿಯ ಮ್ಯಾನ್ ಹೋಲ್ ಗೆ ಮೃತದೇಹವನ್ನು ಎಸೆದಿದ್ದ. ಈ ಎಂಆರ್ ಓ ಕಚೇರಿ ಬಳಿಯ ದೇವಸ್ಥಾನದಲ್ಲಿ ಸಾಯಿ ಕೃಷ್ಣ ಅರ್ಚಕನಾಗಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್