ಕೆಂಪುಕೋಟೆಗೆ ನುಗ್ಗಿದ ರೈತರು: ಪ್ರಧಾನಿ ಧ್ವಜಾರೋಹಣ ಮಾಡುವ ಸ್ಥಳದಲ್ಲಿ ರೈತರಿಂದ ಧ್ವಜಾರೋಹಣ!
Team Udayavani, Jan 26, 2021, 2:11 PM IST
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ವಿಕೋಪಕ್ಕೆ ತಿರುಗಿದೆ. ಪೊಲೀಸ್ ಭದ್ರತೆಯನ್ನು ಮುರಿದು ಮುನ್ನುಗ್ಗಿದ ರೈತರು ಕೆಂಪುಕೋಟೆಗೆ ನುಗ್ಗಿದ್ದಾರೆ.
ಕೆಂಪುಕೋಟೆಯ ಮುಂಭಾಗದ ಧ್ವಜ ಸ್ತಂಭ ಏರಿರುವ ಪ್ರತಿಭಟನಾಕಾರರು ತಮ್ಮ ಬಾವುಟಗಳನ್ನು ಹಾರಿಸಿದರು. ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಪ್ರಧಾನ ಮಂತ್ರಿಯವರು ಧ್ವಜಾರೋಹಣ ಮಾಡುವ ಧ್ವಜಸ್ತಂಭದ ಮೇಲೆರಿದ ಪ್ರತಿಭಟನಾಕಾರರು ತಮ್ಮ ಸಂಘಟನೆಗಳ ಧ್ವಜವನ್ನು ಹಾರಿಸಿದರು.
ಶಾಂತಿಯುತವಾಗಿ ನಡೆಯಬೇಕಿದ್ದ ರೈತರ ಟ್ರ್ಯಾಕ್ಟರ್ ರಾಲಿ ಹಿಂಸಾತ್ಮಕ ರೂಪ ಪಡೆದಿದೆ. ರೈತರ ಟ್ರ್ಯಾಕ್ಟರ್ ರಾಲಿಗೆ ಅಡ್ಡಲಾಗಿ ನಿಲ್ಲಿಸಿದ್ದ ಬಸ್ ಗಳ ಗಾಜನ್ನು ಪುಡಿಗೈಯಲಾಗಿದೆ. ಬಸ್ ಗೆ ಟ್ರ್ಯಾಕ್ಟರ್ ಗಳಿಂದ ಗುದ್ದಿ ಹಾನಿ ಮಾಡಲಾಗಿದೆ. ಮತ್ತೊಂದೆಡೆ ಮುಂಜಾಗ್ರತಾ ಕ್ರಮವಾಗಿ ದೆಹಲಿ ಮೆಟ್ರೋ ಸಂಚಾರ ಬಂದ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ದೆಹಲಿ ಟ್ರ್ಯಾಕ್ಟರ್ Rally: ಪೊಲೀಸರನ್ನೇ ಅಟ್ಟಾಡಿಸಿಕೊಂಡು ಹೋದ ರೈತರು, ಹಲವರಿಗೆ ಗಾಯ
#WATCH A protestor hoists a flag from the ramparts of the Red Fort in Delhi#FarmLaws #RepublicDay pic.twitter.com/Mn6oeGLrxJ
— ANI (@ANI) January 26, 2021
ಇದಕ್ಕೂ ಮೊದಲು ದಿಲ್ಲಿ ಪ್ರವೇಶಿಸುವ ರಸ್ತೆಯಲ್ಲಿ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ಉಂಟಾಯಿತು. ರೈತರು ಪೊಲೀಸರ ವಿರುದ್ಧ ಖಡ್ಗ ಝಳಪಿಸಿದ, ಟ್ರ್ಯಾಕ್ಟರ್ ಗಳಿಂದ ಗುದ್ದಲು ಬಂದ ವಿಡಿಯೋಗಳು ವೈರಲ್ ಆಗಿದೆ.