ಪಂಜಾಬ್ ಸಿಎಂ ಭಗವಂತ್ ಮಾನ್ ಪುತ್ರಿಗೆ ಕೊಲೆ ಬೆದರಿಕೆ

ಅಮೃತ್‌ಪಾಲ್‌ ಬಂಧನಕ್ಕೆ ಸಿದ್ಧತೆ ಹಿನ್ನೆಲೆ ದುಷ್ಕರ್ಮಿಗಳ ಕೃತ್ಯ

Team Udayavani, Apr 1, 2023, 7:40 AM IST

ಪಂಜಾಬ್ ಸಿಎಂ ಭಗವಂತ್ ಮಾನ್ ಪುತ್ರಿಗೆ ಕೊಲೆ ಬೆದರಿಕೆ

ಚಂಡೀಗಢ: ಖಲಿಸ್ತಾನಿ ಪ್ರತ್ಯೇಕವಾದಿ ಅಮೃತ್‌ಪಾಲ್‌ ಸಿಂಗ್‌ನ ಹೆಡೆಮುರಿ ಕಟ್ಟಲು ಪಂಜಾಬ್‌ ಸರ್ಕಾರ ಮುಂದಾಗಿರುವ ಬೆನ್ನಲ್ಲೇ, ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ಅವರ ಪುತ್ರಿ ಸೀರತ್‌ ಕೌರ್‌ಗೆ ಕಿಡಿಗೇಡಿಗಳು ಕೊಲೆ ಬೆದರಿಕೆ ಹಾಕಿದ್ದಾರೆ.

ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್‌ ಈ ಕುರಿತು ಮಾಹಿತಿ ನೀಡಿದ್ದಾರೆ. ಅಮೆರಿಕದಲ್ಲಿರುವ ಸೀರತ್‌ ಕೌರ್‌ಗೆ ಕೊಲೆ ಬೆದರಿಕೆಗಳನ್ನು ಹಾಕಲಾಗುತ್ತಿದೆ. ಇದೊಂದು ಹೇಡಿ ಕೃತ್ಯ ಎಂದು ಖಂಡಿಸಿರುವ ಅವರು, ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳಿಗೆ ಸೀರತ್‌ ಅವರ ಸುರಕ್ಷತೆ ಖಾತರಿ ಪಡಿಸಿಕೊಳ್ಳಲು ಮನವಿ ಮಾಡಿದ್ದಾರೆ. ಭಗವಂತ್‌ ಮಾನ್‌ ಅವರ ಮಾಜಿ ಪತ್ನಿ ಇಂದರ್‌ ಪ್ರೀತ್‌ ಕೌರ್‌ ಅವರೊಂದಿಗೆ ಪುತ್ರಿ ಸೀರತ್‌ ಅಮೆರಿಕದಲ್ಲಿ ವಾಸವಿದ್ದಾರೆ.

ಸಿಖ್‌ ದಂಪತಿ ಮೇಲೆ ಹಲ್ಲೆ
ಆಸ್ಟ್ರೇಲಿಯಾದಲ್ಲಿರುವ ಸಿಖ್‌ ದಂಪತಿಗಳ ಮೇಲೆ ಖಲಿಸ್ತಾನಿ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. “ಪಂಜಾಬಿ ಆಸಿ ಅಸೋಸಿಯೇಷನ್‌’ ಎನ್ನುವ ಸಂಸ್ಥೆ ನಿರ್ವಹಿಸುತ್ತಿರುವ ಹರ್ಮೀತ್‌ ಕೌರ್‌ ಹಾಗೂ ರಾಜೇಶ್‌ ಠಾಕೂರ್‌ ದಂಪತಿ ಪ್ರತಿವರ್ಷವೂ ವೈಶಾಕಿ ಮೇಳ ಆಚರಿಸುತ್ತಿದ್ದಾರೆ. ಆದರೆ, ಕಳೆದ ವರ್ಷದಿಂದ ಸರಬ್ಜಿತ್‌ ಸಿಂಗ್‌ ಪಿಲ್ಪಿ ಎಂಬವರ ತಂಡ ಹಬ್ಬದ ಹೆಸರಿನಲ್ಲಿ ಧರ್ಮಕ್ಕೆ ಅವಮಾನವಾಗುತ್ತಿದೆ ಎಂದು ಆಕ್ಷೇಪಿಸುತ್ತಿದೆ. ಈ ವರ್ಷ ಆಯೋಜಕ ದಂಪತಿ ಮೇಲೆ ಹಲ್ಲೆ ನಡೆಸಿದ್ದು, ಗುಂಪು ಖಲಿಸ್ತಾನಿ ಪರವೆಂದು ದಂಪತಿ ಆರೋಪಿಸಿದ್ದಾರೆ.

ಪಾಕಿಸ್ತಾನಕ್ಕೆ ಪರಾರಿಯಾಗಲು ಅಮೃತ್‌ಪಾಲ್‌ಗೆ ಸಲಹೆ
ತಲೆಮರೆಸಿಕೊಂಡಿರುವ ಅಮೃತ್‌ಪಾಲ್‌ ಸಿಂಗ್‌, ವೈಶಾಕಿ ಹಬ್ಬಕ್ಕೂ ಮುನ್ನ ಪೊಲೀಸರಿಗೆ ಶರಣಾಗುತ್ತಾನೆಂದು ಗುಪ್ತಚರ ಮಾಹಿತಿ ಹೊರಬೀಳುತ್ತಿದ್ದಂತೆ ಅಮೃತಸರದ ಶಿರೋಮಣಿ ಅಕಾಲಿದಳದ ಮುಖ್ಯಸ್ಥ, ಲೋಕಸಭೆ ಸಂಸದ ಸಿಮ್ರನ್‌ಜಿತ್‌ ಸಿಂಗ್‌, ಪಾಕ್‌ಗೆ ಪಾರಾರಿಯಾಗುವಂತೆ ಅಮೃತ್‌ಪಾಲ್‌ಗೆ ಸಲಹೆ ನೀಡಿದ್ದಾರೆ. 1984ರಲ್ಲಿ ( ಸಿಖ್‌ ಹತ್ಯಾಕಾಂಡ ಸಂದರ್ಭ) ನಾವೂ ಪಾಕ್‌ಗೆ ಹೋಗಿದ್ದೆವು. ಇಂದು ಮತ್ತದೇ ಪರಿಸ್ಥಿತಿ. ಸರ್ಕಾರ ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಅಮೃತ್‌ ಪಾಲ್‌ಗೆ ಜೀವ ಬೆದರಿಕೆ ಇದೆ. ಆತ ಶರಣಾಗಬಾರದು! ಅದರ ಬದಲು ರಾಬಿ ನದಿ ದಾಟಿ ಪಾಕ್‌ ಸೇರುವ ಮೂಲಕ ಸಿಖ್ಖರ ಇತಿಹಾಸಕ್ಕೆ ನ್ಯಾಯ ದೊರಕಿಸಬೇಕು ಎಂದಿದ್ದಾರೆ. ಅವರ ಈ ಹೇಳಿಕೆ ವಿವಾದಕ್ಕೀಡಾಗಿದೆ.

 

ಟಾಪ್ ನ್ಯೂಸ್

amithab RAJANIKANTH

32 ವರ್ಷಗಳ ಬಳಿಕ ಒಂದಾಗುತ್ತಿದ್ದಾರೆ ಬಿಗ್‌ ಬಿ – ತಲೈವಾ

1rewe

Vijayapura: ಕರಿ ಓಟದ ಹೋರಿ ಇರಿತ; 8 ಜನರಿಗೆ ಗಾಯ

1-sadsadsad

WTC title ; ಆಸ್ಟ್ರೇಲಿಯ ರಣತಂತ್ರ: ಭಾರತಕ್ಕೆ ಬೃಹತ್ ಗುರಿ ನೀಡಿ ಶಾಕ್

arrest-25

Mumbai; 1 ಕೋಟಿ ರೂ.ಮೌಲ್ಯದ ಮಾದಕ ವಸ್ತು ಸಹಿತ ವಿದೇಶಿ ವ್ಯಕ್ತಿ ಸೆರೆ

1-wewerrwe

Modi ಸರಕಾರದಲ್ಲಿ ಭಾರತದ ಸಾಲ 155 ಲಕ್ಷ ಕೋಟಿ ರೂ.ಗೆ ಏರಿದೆ: ಕಾಂಗ್ರೆಸ್

1-sadadsad

Opposition ಮೈತ್ರಿ ಕೂಟದಿಂದ ದೂರ ಉಳಿಯುವ ಸೂಚನೆ ನೀಡಿದ ಒಮರ್ ಅಬ್ದುಲ್ಲಾ

ಬೆಂಗಳೂರು ಕಾರ್ಯಕ್ರಮ ರದ್ದುಮಾಡಿ ಕುತ್ತಾರು ಕೊರಗಜ್ಜಕ್ಷೇತ್ರದಲ್ಲಿ ಮುಹೂರ್ತ ಮಾಡಿದ ಚಿತ್ರತಂಡ

ಬೆಂಗಳೂರು ಕಾರ್ಯಕ್ರಮ ರದ್ದುಮಾಡಿ ಕುತ್ತಾರು ಕೊರಗಜ್ಜಕ್ಷೇತ್ರದಲ್ಲಿ ಮುಹೂರ್ತಮಾಡಿದ ಚಿತ್ರತಂಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

arrest-25

Mumbai; 1 ಕೋಟಿ ರೂ.ಮೌಲ್ಯದ ಮಾದಕ ವಸ್ತು ಸಹಿತ ವಿದೇಶಿ ವ್ಯಕ್ತಿ ಸೆರೆ

1-wewerrwe

Modi ಸರಕಾರದಲ್ಲಿ ಭಾರತದ ಸಾಲ 155 ಲಕ್ಷ ಕೋಟಿ ರೂ.ಗೆ ಏರಿದೆ: ಕಾಂಗ್ರೆಸ್

1-sadadsad

Opposition ಮೈತ್ರಿ ಕೂಟದಿಂದ ದೂರ ಉಳಿಯುವ ಸೂಚನೆ ನೀಡಿದ ಒಮರ್ ಅಬ್ದುಲ್ಲಾ

Kharge 2

Manipur ಜನರ ಗಾಯಗಳಿಗೆ ಪ್ರಧಾನಿ ಮೋದಿ ಉಪ್ಪು ಸವರಿದ್ದಾರೆ: ಖರ್ಗೆ ಕಿಡಿ

ಹನುಮಂತ ಬುಡಕಟ್ಟು ಜನಾಂಗದವರು: ಕಾಂಗ್ರೆಸ್ ಶಾಸಕನ ವಿವಾದಾತ್ಮಕ ಹೇಳಿಕೆ

ಹನುಮಂತ ಬುಡಕಟ್ಟು ಜನಾಂಗದವರು: ಕಾಂಗ್ರೆಸ್ ಶಾಸಕನ ವಿವಾದಾತ್ಮಕ ಹೇಳಿಕೆ

MUST WATCH

udayavani youtube

ಆರೋಗ್ಯ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಪ್ರಥಮ ಆದ್ಯತೆ: ಕಿರಣ್‌ ಕೊಡ್ಗಿ

udayavani youtube

ಮನೆಯಲ್ಲಿಯೇ ಮಾಡಿ ರುಚಿಕರವಾದ ಎಗ್‌ ಘೀ ರೋಸ್ಟ್‌

udayavani youtube

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಹೊಸ ಸೇರ್ಪಡೆ

1-sadasd

Sirsi ಭಾರಿ ಮೌಲ್ಯದ ನಾಟಾ ಅಕ್ರಮ ಸಾಗಾಟ; ನಾಲ್ವರ ಬಂಧನ

amithab RAJANIKANTH

32 ವರ್ಷಗಳ ಬಳಿಕ ಒಂದಾಗುತ್ತಿದ್ದಾರೆ ಬಿಗ್‌ ಬಿ – ತಲೈವಾ

1rewe

Vijayapura: ಕರಿ ಓಟದ ಹೋರಿ ಇರಿತ; 8 ಜನರಿಗೆ ಗಾಯ

1-adsd

Guarantee Scheme ಟೀಕಿಸಿ ಸ್ಟೇಟಸ್; ಶಿಕ್ಷಕ- ಶಿಕ್ಷಕಿಗೆ ನೋಟಿಸ್

1-sadsadsad

WTC title ; ಆಸ್ಟ್ರೇಲಿಯ ರಣತಂತ್ರ: ಭಾರತಕ್ಕೆ ಬೃಹತ್ ಗುರಿ ನೀಡಿ ಶಾಕ್