Madhya Pradesh; ಮತಾಂತರಗೊಳಿಸಿ ಉಗ್ರ ಕೃತ್ಯಕ್ಕೆ ಹಿಂದೂಗಳನ್ನೇ ಬಳಕೆ

ಮಧ್ಯಪ್ರದೇಶದಲ್ಲಿ ಘಾತಕ ಜಾಲ ಬಯಲು, ಎಟಿಎಸ್‌ನಿಂದ 19 ಮಂದಿ ಬಂಧನ

Team Udayavani, May 17, 2023, 6:55 AM IST

Madhya Pradesh; ಮತಾಂತರಗೊಳಿಸಿ ಉಗ್ರ ಕೃತ್ಯಕ್ಕೆ ಹಿಂದೂಗಳನ್ನೇ ಬಳಕೆ

ಭೋಪಾಲ: ಹಿಂದೂಗಳನ್ನು ಮತಾಂತರ ಮಾಡುವ ಬೃಹತ್‌ ಜಾಲವನ್ನು ಮಧ್ಯಪ್ರದೇಶ ಪೊಲೀಸ್‌ ಇಲಾಖೆಯ ಉಗ್ರ ನಿಗ್ರಹ ಪಡೆ ಛೇದಿಸಿದೆ. ಹಿಜ್‌º-ಉತ್‌-ತಹಿರ್ರ (ಎಚ್‌ಯುಟಿ) ಎಂಬ ಸಂಘಟನೆಯು ಈ ಕರಾಳ ಜಾಲದ ಹಿಂದೆ ಕೆಲಸ ಮಾಡುತ್ತಿದೆ. ಆ ಸಂಘಟನೆಗೆ ಸೇರಿದ್ದಾರೆ ಎಂದು ಹೇಳಲಾಗಿರುವ ಐವರು ಹಿಂದೂ ಸಮುದಾಯದ ಯುವತಿಯರನ್ನು ಮದುವೆಯಾಗಿ, ಮತಾಂತರ ಮಾಡಿದ್ದಾರೆ ಎಂದು ಮಧ್ಯಪ್ರದೇಶ ಎಟಿಎಸ್‌ ಆರೋಪಿಸಿದೆ.

ಆಘಾತಕಾರಿ ವಿಚಾರವೆಂದರೆ, ಈ ಕೃತ್ಯದಲ್ಲಿ ಭಾಗಿಗಳಾಗಿದ್ದವರು ಮೂಲತಃ ಹಿಂದೂಗಳೇ ಆಗಿದ್ದಾರೆ. ಈ ಪೈಕಿ ಹೈದರಾಬಾದ್‌ ಮೂಲದ ಮೊಹಮ್ಮದ್‌ ಸಲೀಂ ಮೂಲದಲ್ಲಿ ಸೌರಭ್‌ ರಾಜ್‌ವೈದ್ಯ. ಆತನ ತಂದೆ ಡಾ. ಅಶೋಕ್‌ ಜೈನ್‌ ವೈದ್ಯರಾಗಿದ್ದವರು.

ಇದಲ್ಲದೆ ದೇವಿ ನಾರಾಯಣ ಪಾಂಡ (ಈಗ ಅಬ್ದುರ್‌ ರೆಹಮಾನ್‌), ಬೇನು ಕುಮಾರ್‌ (ಈಗ ಮೊಹಮ್ಮದ್‌ ಅಬ್ಬಾಸ್ ಅಲಿ) ಅವರು ಮುಸ್ಲಿಂ ಸಮುದಾಯಕ್ಕೆ ಮತಾಂತರದ ಬಳಿಕ ಹಿಂದೂ ಸಮುದಾಯದ ಯುವತಿಯರನ್ನೇ ಗುರಿಯಾಗಿಸಿಕೊಂಡಿದ್ದಾರೆ. ಇಂಥ ಒಂದು ಜಾಲ ದೇಶದಲ್ಲಿಯೇ ಮೊದಲು ಎಂದು ಎಟಿಎಸ್‌ ಹೇಳಿಕೊಂಡಿದೆ.
ಭೋಪಾಲದಲ್ಲಿ ಇರುವ ಜಿಮ್‌ ಟ್ರೈನರ್‌ ಯಾಸಿರ್‌ ಖಾನ್‌ ಮತ್ತು ಹೈದರಾಬಾದ್‌ನ ಮೊಹಮ್ಮದ್‌ ಸಲೀಮ್‌ ಅವರೇ ಈ ಜಾಲದ ರೂವಾರಿಗಳು. ಈ ಪೈಕಿ ಸಲೀಂ ಹೈದರಾಬಾದ್‌ನಲ್ಲಿ ಇರುವ ಪ್ರಭಾವಿ ರಾಜಕೀಯ ವ್ಯಕ್ತಿಯ ಮಾಲೀಕತ್ವದ ಫಾರ್ಮಸಿ ಕಾಲೇಜಿನ ಪ್ರಾಧ್ಯಾಪಕನಾಗಿದ್ದಾನೆ.

ಸೌರಭ್‌ ರಾಜ್‌ವೈದ್ಯನ ಹತ್ತವರು ಆರೋಪಿಸುವ ಪ್ರಕಾರ ಪುತ್ರನ ಹಿರಿಯ ಸಹೋದ್ಯೋಗಿ ಡಾ.ಕಮಲ್‌ ಎಂಬಾತ ಮನಃಪರಿವರ್ತನೆಗೆ ಕಾರಣನಾಗಿದ್ದಾನೆ. ನಂತರವೇ ಆತ ಸಲೀಂ ಆಗಿ ಬದಲಾಗಿದ್ದ. ಆತ ವಿವಾದಿತ ವಿದ್ವಾಂಸ ಡಾ.ಜಕೀರ್‌ ನಾಯ್ಕನ ವಿಡಿಯೋಗಳನ್ನು ನೋಡುತ್ತಿದ್ದ ಎಂದು ದೂರಿದ್ದಾರೆ. 2010-11ನೇ ಸಾಲಿನಲ್ಲಿ ಆತ ಸಿರಿಯಾಕ್ಕೆ ತೆರಳಲು ಉದ್ದೇಶಿಸಿದ್ದ ಹೆತ್ತವರ ಹೇಳಿಕೆ ಆಧರಿಸಿ “ಎನ್‌ಡಿಟಿವಿ’ ವರದಿ ಮಾಡಿದೆ.

ಯಾವುದಿದು ಎಚ್‌ಯುಟಿ?
ಚೀನಾ, ಜರ್ಮನಿ, ರಷ್ಯಾ, ಬಾಂಗ್ಲಾದೇಶ, ಟರ್ಕಿ ಸೇರಿದಂತೆ 16 ದೇಶಗಳಲ್ಲಿ ಇರುವ ಸಂಘಟನೆ. ಪ್ರಕರಣಕ್ಕೆ ಸಂಬಂಧಿಸಿದಂತೆ 19 ಮಂದಿಯನ್ನು ಭೋಪಾಲ, ಛಿಂದ್ವಾರಾ ಮತ್ತು ಹೈದರಾಬಾದ್‌ನಿಂದ ಬಂಧಿಸಲಾಗಿದೆ. ಸದ್ಯ ಅವರನ್ನು ಮೇ 19ರ ವರೆಗೆ ಎಟಿಎಸ್‌ ವಶಕ್ಕೆ ಒಪ್ಪಿಸಲಾಗಿದೆ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.