ಗಣರಾಜ್ಯೋತ್ಸವ ಹಿನ್ನೆಲೆ: ರಾಷ್ಟ್ರಪತಿ ಭವನಕ್ಕೆ ಪ್ರವೇಶವಿಲ್ಲ
Team Udayavani, Jan 17, 2023, 12:25 AM IST
ಹೊಸದಿಲ್ಲಿ: ಗಣರಾಜ್ಯೋತ್ಸವದ ಪರೇಡ್ ಹಾಗೂ ನಿರ್ಗಮನ ಪಥ ಸಂಚಲನದ ಹಿನ್ನೆಲೆ ಜ.25ರಿಂದ ಜ.29ರವರೆಗೆ ರಾಷ್ಟ್ರಪತಿ ಭವನಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.
ಈ ಕುರಿತು ರಾಷ್ಟ್ರಪತಿಗಳ ಕಚೇರಿಯಿಂದ ಪ್ರಕಟನೆ ಹೊರಡಿಸಲಾಗಿದ್ದು, ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಲಿರುವ ಸಾರ್ವಜನಿಕರು ಜ.25ರಿಂದ 29ರ ವರೆಗೆ 4 ದಿನಗಳವರೆಗೆ ಪ್ರವಾಸ ಕೈಗೊಳ್ಳಲು ಅವಕಾಶವಿರುವುದಿಲ್ಲ.
ಗಣರಾಜ್ಯೋತ್ಸವದ ಹಿನ್ನೆಲೆ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.