ಸಾಮಾಜಿಕ ವಲಯಕ್ಕೆ ಸುಧಾರಣಾ ಕ್ರಮಗಳು
Team Udayavani, Feb 2, 2020, 4:05 AM IST
ಕೇಂದ್ರ ಬಜೆಟ್ನಲ್ಲಿ ಸಾಮಾಜಿಕ ವಲಯಕ್ಕೆ ನೀಡುವ ಆದ್ಯತೆಯು ಬಜೆಟ್ನ ಸಮಗ್ರತೆಗೆ ಸಾಕ್ಷಿಯಾಗಿದೆ. ಸಾಮಾಜಿಕ ವಲಯದ ಬೆಳವಣಿಗೆಯ ಜಿಡಿಪಿ ವೃದ್ಧಿಗೂ ಕಾರಣವಾಗಲಿದೆ. ಉದ್ಯೋಗ ಸೃಷ್ಟಿ, ಹೊಸ ಎಂಜಿನಿಯರುಗಳು, ಮಾರ್ಕೆಟಿಂಗ್ ಹೆಡ್ಗಳ ಸೃಷ್ಟಿ ಸೇರಿದಂತೆ ಕೌಶಲ್ಯಸಹಿತ ಸಂಪನ್ಮೂಲದ ಪ್ರಮಾಣ ಹೆಚ್ಚಾಗಲಿದೆ. ಇದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು ಹಾಗೂ ಅಗತ್ಯವೂ ಹೌದು.
ಕೇಂದ್ರ ಬಜೆಟ್ನಲ್ಲಿ ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಅಪೌಷ್ಟಿಕತೆ ನಿವಾರಣೆ, ಎಸ್ಸಿ-ಎಸ್ಟಿ, ಆದಿವಾಸಿಗಳ ಕಲ್ಯಾಣ, ಸೇರಿದಂತೆ ಸಾಮಾಜಿಕ ವಲಯದ ಸುಧಾರಣಾ ಕ್ರಮಗಳು ಮುಂದಿನ ಎರಡು ವರ್ಷಗಳಲ್ಲಿ ಫಲಿತಾಂಶ ನೀಡಲಿವೆ. ಈಗಿನ ಸಂದಿಗ್ಧ ಸ್ಥಿತಿಯಲ್ಲಿ ಬಜೆಟ್ನಲ್ಲಿ ಕೈಗೊಂಡಿರುವ ಈ ವಲಯದ ಸುಧಾರಣಾ ಕ್ರಮಗಳು ಸ್ವಲ್ಪ ಮಟ್ಟಿಗೆ ಆಶಾದಾಯಕ ಎಂದೇ ಹೇಳಬಹುದು.
ಶಿಕ್ಷಣಕ್ಕೆ 99,300 ಕೋಟಿ ರೂ., ಆರೋಗ್ಯಕ್ಕೆ 69,000 ಕೋಟಿ ರೂ., ಎಸ್ಸಿ-ಎಸ್ಟಿ ಕಲ್ಯಾಣಕ್ಕೆ 1.33 ಲಕ್ಷ ಕೋಟಿ ರೂ., ಅಪೌಷ್ಟಿಕತೆ ನಿವಾರಣೆ ಕಾರ್ಯಕ್ರಮಗಳಿಗೆ 35,600 ಕೋಟಿ ರೂ., ಮಹಿಳಾ ಸಬಲೀಕರಣಕ್ಕೆ 28,600 ಕೋಟಿ ರೂ. ಮೀಸಲಿಟ್ಟಿರುವುದು ಸಾಮಾಜಿಕ ವಲಯದ ವೃದ್ಧಿಯ ಸಂಕೇತ. ಇದರಿಂದ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.
ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಆನ್ಲೈನ್ ಪದವಿ ಯೋಜನೆ, ಕೌಶಲ್ಯ ಅಭಿವೃದ್ಧಿ, ಶಿಕ್ಷಕರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿಗೆ ಕೌಶಲ್ಯಾಭಿವೃದ್ಧಿ ಬ್ರಿಡ್ಜ್ ಕೋರ್ಸ್ ಒದಗಿಸುವುದು ಉತ್ತಮ ನಿರ್ಧಾರವಾಗಿದೆ. ಇದರಿಂದ ನಾನಾ ಕ್ಷೇತ್ರಗಳಿಗೆ ಅಗತ್ಯವಾದ ಮಾನವ ಸಂಪನ್ಮೂಲ ದೊರಕುತ್ತದೆ. ಆದರೆ, ಈ ಎಲ್ಲ ಯೋಜನೆಗಳ ಲಾಭ ರಾಜ್ಯ ಸರ್ಕಾರಗಳು ಸಮರ್ಪಕವಾಗಿ ಪಡೆಯಬೇಕು.
ಕೇಂದ್ರ ಬಜೆಟ್ನಲ್ಲಿ ರಾಜ್ಯ ಸರ್ಕಾರಗಳ ಅದರಲ್ಲೂ ಕರ್ನಾಟಕ ರಾಜ್ಯ ಇಂದು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಕ್ಕೆ ಪರಿಹಾರೋಪಾಯಗಳನ್ನು ನೀಡಲಾಗಿದೆ. ಅದರ ಉಪಯೋಗಕ್ಕೆ ರಾಜ್ಯ ಸರ್ಕಾರ ಸೂಕ್ತ ರೀತಿಯಲ್ಲಿ ಮುಂದಾಗಬೇಕು. ಕ್ವಾಂಟಮ್ ಎಂಜಿನಿಯರಿಂಗ್ ಸೇರಿ ಐಟಿ-ಬಿಟಿ ವಲಯದ ಹೊಸ ಆವಿಷ್ಕಾರಗಳು ಬೆಂಗಳೂರಿಗೆ ಹೆಚ್ಚು ಲಾಭ ತರಬಲ್ಲದು. ಲಾಜೆಸ್ಟಿಕ್ ಸೇರಿ ಇತರೆ ವಲಯಗಳಿಗೆ ಒತ್ತು ನೀಡಿರುವುದರಿಂದ ಉದ್ಯಮಿಗಳಿಗೆ ಅನುಕೂಲವಾಗಿದೆ.
ಇದರಿಂದ ಉದ್ಯೋಗವೂ ಸೃಷ್ಟಿಯಾಗುವುದರಿಂದ ಬಡ ಹಾಗೂ ಮಧ್ಯಮ ವರ್ಗದವರಿಗೆ ಅವಕಾಶಗಳು ಹೆಚ್ಚಾಗಿ ಲಭಿಸುತ್ತವೆ. ಈ ಮೂಲಕ ಸಾಮಾಜಿಕ ವಲಯದ ವೃದ್ಧಿಯಾಗುತ್ತದೆ. ಒಟ್ಟಾರೆ ಹೇಳಬಹುದಾದರೆ ಮುಂದಿನ ಐದು ವರ್ಷ ಆರ್ಥಿಕ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಬಜೆಟ್ನಲ್ಲಿ ಸಾಮಾಜಿಕ ವಲಯಕ್ಕೆ ಒತ್ತು ನೀಡಲಾಗಿದೆ.
* ಆರ್.ಜಿ.ಮುರಳೀಧರ್ವಿಶ್ಲೇಷಕ, ಸಾಮಾಜಿಕ ಕ್ಷೇತ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
MUST WATCH
ಹೊಸ ಸೇರ್ಪಡೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ