
ಕನಸಿನಲ್ಲಿ ʼಶ್ರೀಕೃಷ್ಣʼ ದೇವರನ್ನು ಕಂಡು ನಿದ್ದೆಯಿಂದ ಎಚ್ಚೆದ್ದ ಸಚಿವ.!
ದೇವರನ್ನು ಕಂಡ ವಿಡಿಯೋ ಹಂಚಿಕೊಂಡ ಸಚಿವ
Team Udayavani, Mar 23, 2023, 12:49 PM IST

ಪಾಟ್ನಾ: ಆರ್ಜೆಡಿ ನಾಯಕ ಮತ್ತು ಬಿಹಾರ ಸಚಿವರಾಗಿರುವ ತೇಜ್ ಪ್ರತಾಪ್ ಯಾದವ್ ಅವರ ʼಕೃಷ್ಣನ ಕನಸಿನʼ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಚಿವ ತೇಜ್ ಪ್ರತಾಪ್ ಶ್ರೀಕೃಷ್ಣ ದೇವರ ವೇಷಭೂಷಣವನ್ನು ತೊಟ್ಟು ತನ್ನನ್ನು ತಾನು ಹಿಂದೂ ದೇವರಿಗೆ ಹೋಲಿಸುವುದರಲ್ಲಿ ಪ್ರಸಿದ್ಧರಾಗಿದ್ದಾರೆ. ಇವರು ಹಿಂದೂ ದೇವರ ವೇಷಭೂಷಣವನ್ನು ತೊಟ್ಟು ಹಾಕುವ ವಿಡಿಯೋಗಳು ಅವರ ಅಪಾರ ಬೆಂಬಲಿಗರನ್ನು ಸೆಳೆಯುತ್ತದೆ.
ಇಂಥದ್ದೇ ಒಂದು ವಿಡಿಯೋವನ್ನು ಸಚಿವ ತೇಜ್ ಪ್ರತಾಪ್ ಯಾದವ್ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮಲಗಿರುವ ಸಚಿವ, ಮಹಾಭಾರತ ಯುದ್ದ ಹಾಗೂ ಅದರಲ್ಲಿ ಶ್ರೀಕೃಷ್ಣ ದೇವರನ್ನು ಕಂಡಿದ್ದಾರೆ. ಮಿನುಗುವ ಚಕ್ರದಿಂದ ಅಲಂಕೃತವಾದ ಕಿರೀಟ ಮತ್ತು ಗದೆಯಿಂದ ಅಲಂಕೃತವಾದ ಆಯುಧಗಳೊಂದಿಗೆ ನಿಮ್ಮ ವಿಶ್ವರೂಪವನ್ನು ನಾನು ನೋಡುತ್ತಿದ್ದೇನೆ, ಬ್ರಹ್ಮಾಂಡದ ಅದ್ಭುತ ಬೆಳಕಿನಂತೆ ಎಲ್ಲೆಡೆ ಹೊಳೆಯುತ್ತಿದೆ, ”ಎಂದು ಮಲಗುವ ವೇಳೆ ಬಿದ್ದ ಕನಸನ್ನು ಅಕ್ಷರ ರೂಪಕ್ಕಿಳಿಸಿ ವಿಡಿಯೋ ಹಂಚಿಕೊಂಡಿದ್ದಾರೆ.
ವಿಡಿಯೋದ ಕೊನೆಯಲ್ಲಿ ಕನಸಿನಲ್ಲಿ ಕೃಷ್ಣನನ್ನು ನೋಡಿ ಸಚಿವ ಬೆಚ್ಚಿಬಿದ್ದು ಏಳುತ್ತಾರೆ.
ಈ ರೀತಿಯಾಗಿ ಕನಸಿನ ವಿಚಾರಗಳನ್ನು ಹಂಚಿಕೊಂಡು ತಮ್ಮ ಬೆಂಬಲಿಗರ ಗಮನ ಸೆಳೆಯುವುದು ಇದೇ ಮೊದಲಲ್ಲ ,ಇದಕ್ಕೂ ಮೊದಲು ಫೆ.22 ರಂದು ಪಾಟ್ನಾದಲ್ಲಿ ಸೈಕಲ್ ತುಳಿಯುತ್ತ ತೆರಳಿದ್ದರು. ಸಮಾಜವಾದಿ ಪಕ್ಷದ (ಎಸ್ಪಿ) ದಿವಂಗತ ಮುಲಾಯಂ ಸಿಂಗ್ ಯಾದವ್ ಅವರನ್ನು “ಕನಸಿನಲ್ಲಿ ನೋಡಿದ” ನಂತರ ಅವರಿಂದ ಸ್ಫೂರ್ತಿ ಪಡೆದು ಸೈಕಲ್ ನಲ್ಲಿ ತೆರಳಿದೆ ಎಂದು ಹೇಳಿಕೊಂಡಿದ್ದರು.
ಸಚಿವ ತೇಜ್ ಪ್ರತಾಪ್ ಶ್ರೀಕೃಷ್ಣ ದೇವರ ವೇಷಭೂಷಣವನ್ನು ತೊಟ್ಟು ತನ್ನನ್ನು ತಾನು ಹಿಂದೂ ದೇವರಿಗೆ ಹೋಲಿಸಿ ಅವರ ಸಹೋದರ ತೇಜಸ್ವಿ ಯಾದವ್ ಅವರನ್ನು ʼಅರ್ಜುನʼನಿಗೆ ಹೋಲಿಸಿದ್ದಾರೆ. ತನ್ನನ್ನು ತಾನು ʼಕೃಷ್ಣʼನನ್ನು ಹೋಲಿಸಿದ್ದಾರೆ. ಪಾಟ್ನಾದ ಶಿವನ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಅವರು ಶಿವನ ವೇಷವನ್ನು ಧರಿಸಿದ್ದರು.
विश्व रूप दर्शन योग मैं मुकुट से सुशोभित चक्र और गदा से सुसज्जित शस्त्रों के साथ सर्वत्र दीप्तिमान लोक के रूप में आपके रूप को देख रहा हूँ। इस चमचमाती अग्नि में आपके तेज को देख पाना कठिन है जो सभी दिशाओं से प्रस्फुटित होने वाले सूर्य के प्रकाश की भांति है। pic.twitter.com/tqcrkKH5Qo
— Tej Pratap Yadav (@TejYadav14) March 22, 2023
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mumbai; 1 ಕೋಟಿ ರೂ.ಮೌಲ್ಯದ ಮಾದಕ ವಸ್ತು ಸಹಿತ ವಿದೇಶಿ ವ್ಯಕ್ತಿ ಸೆರೆ

Modi ಸರಕಾರದಲ್ಲಿ ಭಾರತದ ಸಾಲ 155 ಲಕ್ಷ ಕೋಟಿ ರೂ.ಗೆ ಏರಿದೆ: ಕಾಂಗ್ರೆಸ್

Opposition ಮೈತ್ರಿ ಕೂಟದಿಂದ ದೂರ ಉಳಿಯುವ ಸೂಚನೆ ನೀಡಿದ ಒಮರ್ ಅಬ್ದುಲ್ಲಾ

Manipur ಜನರ ಗಾಯಗಳಿಗೆ ಪ್ರಧಾನಿ ಮೋದಿ ಉಪ್ಪು ಸವರಿದ್ದಾರೆ: ಖರ್ಗೆ ಕಿಡಿ

ಹನುಮಂತ ಬುಡಕಟ್ಟು ಜನಾಂಗದವರು: ಕಾಂಗ್ರೆಸ್ ಶಾಸಕನ ವಿವಾದಾತ್ಮಕ ಹೇಳಿಕೆ
MUST WATCH

ಮನೆಯಲ್ಲಿಯೇ ಮಾಡಿ ರುಚಿಕರವಾದ ಎಗ್ ಘೀ ರೋಸ್ಟ್

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
ಹೊಸ ಸೇರ್ಪಡೆ

Mumbai; 1 ಕೋಟಿ ರೂ.ಮೌಲ್ಯದ ಮಾದಕ ವಸ್ತು ಸಹಿತ ವಿದೇಶಿ ವ್ಯಕ್ತಿ ಸೆರೆ

Modi ಸರಕಾರದಲ್ಲಿ ಭಾರತದ ಸಾಲ 155 ಲಕ್ಷ ಕೋಟಿ ರೂ.ಗೆ ಏರಿದೆ: ಕಾಂಗ್ರೆಸ್

ಬೊರಿವಲಿಯ ರೋಹಿತ್ ಪೂಜಾರಿ ಡಾನ್ಸ್ ಅಕಾಡೆಮಿ: ಮಂಥನ್-2023 ಸಂಭ್ರಮ

Opposition ಮೈತ್ರಿ ಕೂಟದಿಂದ ದೂರ ಉಳಿಯುವ ಸೂಚನೆ ನೀಡಿದ ಒಮರ್ ಅಬ್ದುಲ್ಲಾ

ಸಾಗರ ದಿನಾಚರಣೆ; ಕೊಳೆಯದ ವಸ್ತುಗಳ ಬಳಕೆ ಬೇಡ; ಜಿಲ್ಲಾಧಿಕಾರಿ