ಅಖಂಡ ಭಾರತದಲ್ಲಿ ಲಾಹೋರ್,ಕರಾಚಿ ಇದ್ದಿದ್ದವೆಂದು ಪಾಕಿಸ್ತಾನ ನೆನಪಿಟ್ಟುಕೊಳ್ಳಲಿ: ಇಂದ್ರೇಶ್
Team Udayavani, Sep 3, 2021, 11:57 AM IST
ನವ ದೆಹಲಿ : ಅಖಂಡ ಭಾರತದಲ್ಲಿ ಲಾಹೋರ್ ಮತ್ತು ಕರಾಚಿ ಎರಡೂ ಇತ್ತು ಎಂಬುದನ್ನು ಪಾಕಿಸ್ತಾನ ನೆನಪಿಟ್ಟುಕೊಳ್ಳಬೇಕು ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಆರ್ ಎಸ್ ಎಸ್ ಪ್ರಚಾರಕ್ ಇಂದ್ರೇಶ್ ಕುಮಾರ್ ಖಡಕ್ ತಿರುಗೇಟು ನೀಡಿದ್ದಾರೆ.
ಪಾಕಿಸ್ತಾನ ಕಾಶ್ಮೀರ ನಮ್ಮದು ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿರುವ ಅವರು, ಪಾಕಿಸ್ತಾನ ಹೀಗೆ ಹೇಳುವ ಮುನ್ನಾ ತಮ್ಮ ಮೂಲವನ್ನು ನೆನಪು ಮಾಡಿಕೊಳ್ಳಬೇಕು. ಲಾಹೋರ್ ಮತ್ತು ಕರಾಚಿ ಅಖಂಡ ಭಾರತದಲ್ಲಿ ಇದ್ದಿದ್ದವು ಎನ್ನುವುದನ್ನು ಪಾಕಿಸ್ತಾನ ಮರೆಯಬಾರದು. ಎಂದು ಖಡಕ್ ಎಚ್ಚರಿಕೆ ನೀಡಿದ್ದಲ್ಲದೇ, ಪಾಕ್ ಕಾಶ್ಮೀರವನ್ನು ತನ್ನದು ಎಂದುಕೊಂಡರೇ, ಲಾಹೋರ್ ಹಾಗೂ ಕರಾಚಿ ನಮ್ಮದು. ಪಾಕಿಸ್ತಾನ ಪಿಒಕೆ (ಪಾಕ್ ಆಕ್ರಮಿತ ಕಾಶ್ಮೀರ) ಯನ್ನು ಖಾಲಿ ಮಾಡಬೇಕು. ಇಲ್ಲವಾದಲ್ಲಿ ಪರಿಣಾಮವನ್ನು ಪಾಕಿಸ್ತಾನ ಎದುರಿಸಲಿದೆ ಎಂದಿದ್ದಾರೆ.
ಇದನ್ನೂ ಓದಿ : ಕಂಚು ಗೆದ್ದ ಅವನಿ: ಒಂದೇ ಪ್ಯಾರಾಲಂಪಿಕ್ಸ್ ನಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಗೆ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ಅವರು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಪಾಕಿಸ್ತಾನವನ್ನು ತಾಲಿಬಾನಿ ಮನಸ್ಥಿತಿಯ ದೇಶ ಎಂದು ಅವರು ಕರೆದಿದ್ದಾರೆ. ಎರಡು ದೇಶಗಳ ನಡುವೆ ಸ್ಥಗಿತಗೊಂಡ ಮಾತುಕತೆಗೆ ಇಮ್ರಾನ್ ಖಾನ್ ಭಾರತವನ್ನು ಹೊಣೆಗಾರರನ್ನಾಗಿ ಮಾಡಿದ ನಂತರ ಇಂದ್ರೇಶ್ ಈ ಹೇಳಿಕೆ ನೀಡಿದ್ದಾರೆ.
ಇಷ್ಟಲ್ಲದೇ, ಕುಮಾರ್ ಚೀನಾಕ್ಕೂ ಎಚ್ಚರಿಕೆ ನೀಡಿದ್ದು, ಟಿಬೆಟ್ ಎಂದಿಗೂ ಚೀನಾದ ಭಾಗವಾಗಿರಲಿಲ್ಲ. ಹಾಗಾಗಿ ಚೀನಾ ಟಿಬೆಟ್ ನನ್ನು ಬಿಟ್ಟು ಬಿಡಬೇಕು ಎಂದಿದ್ದಾರೆ.
ಇದನ್ನೂ ಓದಿ : ದೆಹಲಿ ವಿಧಾನಸಭೆಯೊಳಗೆ ಕೆಂಪುಕೋಟೆಗೆ ಸಂಪರ್ಕ ಕಲ್ಪಿಸುವ ರಹಸ್ಯ ಸುರಂಗ ಮಾರ್ಗ ಪತ್ತೆ!