Rude shock: ಮಥುರಾ ರೈತನಿಗೆ ಸಿಕ್ಕಿತು 1 ಪೈಸೆ ಕೃಷಿ ಸಾಲ ಮನ್ನಾ
Team Udayavani, Sep 19, 2017, 11:22 AM IST
ಆಗ್ರಾ : ನಂಬಿದ್ರೆ ನಂಬಿ, ಬಿಟ್ಟೆ ಬಿಡಿ – ಉತ್ತರ ಪ್ರದೇಶದ ಮಥುರಾದಲ್ಲಿನ ರೈತನೋರ್ವ ಪಡೆದ 1.50 ಲಕ್ಷ ರೂ. ಕೃಷಿ ಸಾಲದ ಬಾಕಿ ಮೊತ್ತದ ಮೇಲೆ 1 ಪೈಸೆ ಮನ್ನಾ ಮಾಡಲಾಗಿದೆ.
ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಗೋವರ್ಧನ ತೆಹಶೀಲ್ನ ಅತೀ ಸಣ್ಣ ಹಿಡುವಳಿಯ ರೈತ ಛಿಡ್ಡಿ ಎಂಬಾತ ಕಿಸಾನ್ ಕ್ರೆಡಿಟ್ ಮೂಲಕ ಆರು ವರ್ಷಗಳ ಹಿಂದೆ 1.50 ಲಕ್ಷ ರೂ ಕೃಷಿ ಸಾಲ ಪಡೆದಿದ್ದ. ಆತನಿಗೆ ಕೇವಲ ಐದು ಭೀಗಾ ಜಮೀನಿತ್ತು.
ಛಿಡ್ಡಿ ಮಾಡಿದ್ದ ಕೃಷಿ ಸಾಲದ ಬಾಕಿ ಮೊತ್ತವನ್ನು ಮನ್ನಾ ಮಾಡುವ ಸರ್ಟಿಫಿಕೇಟನ್ನು ಆತನಿಗೆ ಜಿಲ್ಲಾ ಆಡಳಿತಾಧಿಕಾರಿಯವರು ನೀಡಿದರು. ಆ ಸರ್ಟಿಫಿಕೇಟ್ ಕೇವಲ 1 ಪೈಸೆ ಸಾಲ ಮನ್ನಾ ಮಾಡುವ ಸರ್ಟಿಫಿಕೇಟ್ ಆಗಿತ್ತು.
ರೈತ ಛಿಡ್ಡಿಗೆ ಒಂದು ಪೈಸೆ ಕೃಷಿ ಸಾಲ ಮನ್ನಾ ಮಾಡಿರುವ ಸರ್ಟಿಫಿಕೇಟ್ ಕಂಡು ಅತ್ಯಾಶ್ಚರ್ಯವಾಯಿತು; ಇದು ನಿಜವೋ, ಬ್ಯಾಂಕ್ನವರು ಮಾಡಿರುವ ತಪ್ಪೋ ಎಂದು ಅರಿಯದಾಯಿತು. ಆದರೆ 1 ಪೈಸೆ ಸಾಲ ಮನ್ನಾ ಆಗಿರುವುದು ನಿಜವೇ ಎಂದು ಗೊತ್ತಾದಾಗ “ಸರಕಾರ ನನ್ನಂತಹ ರೈತರನ್ನು ಈ ರೀತಿ ಅವಮಾನಿಸುತ್ತಿದೆ; ನಮ್ಮ ನಗೆಪಾಡಲು ಮಾಡುತ್ತಿದೆ’ ಎಂದು ಅನ್ನಿಸಿತು. ಆತನ ಈ ಮಾತುಗಳನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಛಿಡ್ಡಿ ಹೇಳಿರುವ ಪ್ರಕಾರ “ಸರಕಾರ ಮತ್ತು ಅದರ ಅಧಿಕಾರಿಗಳಿಗೆ ಲಂಚ ಕೊಡದ ನನ್ನಂತಹ ರೈತರಿಗೆ ಮಾತ್ರವೇ ಈ ರೀತಿಯಾಗಿದೆ’.
ಮಥುರಾ ಜಿಲ್ಲಾಧಿಕಾರಿ ಅರವಿಂದ ಮಲ್ಲಪ್ಪ ಅವರ ಪ್ರಕಾರ “ಇದು ಹೀಗಾಗಿರುವುದು ತಾಂತ್ರಿಕ ತೊಂದರೆಗಳಿಂದ ಮತ್ತು ಅವಳಿ ಖಾತೆ ಸಮಸ್ಯೆಯಿಂದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ