ಸಿಎಂ ಯೋಗಿ ವಿರುದ್ಧ ಆಕ್ಷೇಪಾರ್ಹ ಟ್ವೀಟ್: ಬಂಧಿತ ಪತ್ರಕರ್ತನಿಗೆ ಜಾಮೀನು
Team Udayavani, Jun 11, 2019, 12:25 PM IST
ಹೊಸದಿಲ್ಲಿ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಟೀಕೆಗಳನ್ನು ಬರೆದ ಕಾರಣಕ್ಕೆ ಬಂಧಿತರಾಗಿದ್ದ ಪತ್ರಕರ್ತ ಪ್ರಶಾಂತ್ ಕನೋಜಿಯಾ ಅವರಿಗೆ ಸುಪ್ರೀಂ ಕೋರ್ಟ್ ಇಂದು ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ಜಸ್ಟಿಸ್ ಇಂದಿರಾ ಬ್ಯಾನರ್ಜಿ ಮತ್ತು ಜಸ್ಟಿಸ್ ಅಜಯ್ ರಸ್ತೋಗಿ ಅವರನ್ನು ಒಳಗೊಂಡ ರಜಾಕಾಲದ ಪೀಠ, “ಬದುಕುವ ಸ್ವಾತಂತ್ರ್ಯ ಮೂಲಭೂತ ಹಕ್ಕಾಗಿದೆ, ಅದರಲ್ಲಿ ಚೌಕಾಶಿ ಇಲ್ಲ” ಎಂದು ಹೇಳಿ ಜಾಮೀನು ಮಂಜೂರು ಮಾಡಿತು.
ಆದರೆ ಜಾಮೀನು ಮಂಜೂರು ಮಾಡುವಲ್ಲಿ ಪತ್ರಕರ್ತನು ಮಾಡಿರುವ ಟ್ವೀಟ್ ಗಳಿಗೆ ಅಥವಾ ಪೋಸ್ಟ್ ಗಳಿಗೆ ಕೋರ್ಟಿನ ಅನುಮೋದನೆ ಇದೆ ಎಂದು ಅರ್ಥವಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿತು.