ನದಿಯ ಮಧ್ಯಭಾಗದಲ್ಲಿ ನಿಂತು ಯುವತಿಯರ ಸೆಲ್ಫಿ ಸಾಹಸ, ಏಕಾಏಕಿ ಹರಿದುಬಂದ ನೀರು: ಮುಂದೇನಾಯ್ತು?
Team Udayavani, Jul 25, 2020, 9:26 AM IST
ಮಧ್ಯಪ್ರದೇಶ: ಸೆಲ್ಫಿ ತೆಗೆದುಕೊಳ್ಳುತ್ತಿರುವ ವೇಳೆಯಲ್ಲಿ ಏಕಾಏಕಿ ನೀರು ಹರಿದುಬಂದ ಕಾರಣ ಇಬ್ಬರು ಯುವತಿಯರು ನದಿಯ ಮಧ್ಯಭಾಗದಲ್ಲಿ ಸಿಲುಕಿಕೊಂಡು ಭಯಭೀತರಾದ ಘಟನೆ ಚಿಂದ್ವಾರ ಜಿಲ್ಲೆಯಲ್ಲಿ ನಡೆದಿದೆ.
ಜುನಾರ್ಡೋದಿಂದ ಆರು ಯುವತಿಯರ ತಂಡ ಚಿಂದ್ವಾರ ಜಿಲ್ಲೆಯಲ್ಲಿರುವ ಪೆಂಚ್ ನದಿ ದಡಕ್ಕೆ ಪ್ರವಾಸ ಕೈಗೊಂಡಿದ್ದರು. ಇವರಲ್ಲಿ ಮೇಘಾ ಜಾವ್ರೆ ಮತ್ತು ವಂದಾನಾ ತ್ರಿಪಾಠಿ ಎಂಬ ಯುವತಿಯರು ಸೆಲ್ಫಿ ಕ್ಲಿಕ್ಕಿಸಲೆಂದು ನದಿಯ ಮಧ್ಯಭಾಗಕ್ಕೆ ತೆರಳಿದ್ದ ವೇಳೆ ಏಕಾಏಕಿ ನೀರಿನ ಹರಿವು ಹೆಚ್ಚಾಗಿದೆ. ಇದರಿಂದ ದಡಕ್ಕೆ ಬರಲು ಸಾಧ್ಯವಾಗದೆ ನದಿಯಲ್ಲಿದ್ದ ಬಂಡೆಯೊಂದರ ಮೇಲೆ ನಿಲ್ಲುತ್ತಾರೆ ಮಾತ್ರವಲ್ಲದೆ ಭಯಾತಂಕದಿಂದ ಚೀರಾಡುತ್ತಾರೆ.
ಇದರಿಂದ ದಡದಲ್ಲಿದ್ದ ಉಳಿದ ನಾಲ್ವರು ಸ್ನೇಹಿತೆಯರು ಬೆಚ್ಚಿಬಿದ್ದು ಪೊಲೀಸರಿಗೆ ಕರೆಮಾಡುತ್ತಾರೆ. ಕೂಡಲೇ ಕಾರ್ಯಾಚರಣೆಗಿಳಿದ 12 ಪೊಲೀಸ್ ಸಿಬ್ಬಂದಿ, ಜಿಲ್ಲಾಡಳಿತ ಮತ್ತು ಸ್ಥಳೀಯರ ಸಹಕಾರದೊಂದಿಗೆ ಯುವತಿಯರನ್ನು ರಕ್ಷಿಸುತ್ತಾರೆ.
Watch | Two Madhya Pradesh girls venture into the Pench river to take selfie, get trapped in swelling water. pic.twitter.com/AdRuZmPv1z
— NDTV (@ndtv) July 24, 2020
ಜಗತ್ತಿನಲ್ಲಿ ಹಲವರು ಏಕಾಏಕಿಯಾಗಿ ಪ್ರಸಿದ್ದರಾಗಲು ಅಪಾಯಕಾರಿಯಾದ ಸೆಲ್ಪಿ ತೆಗೆದುಕೊಳ್ಳಲು ಯತ್ನಿಸುತ್ತಾರೆ. 2018 ರಲ್ಲಿ ಕೂಡ ಯುವಕನೊಬ್ಬ ಹೈದರಾಬಾದ್ ನಲ್ಲಿ ಬರುತ್ತಿರುವ ರೈಲಿನ ಎದುರುಗಡೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿ ಗಂಭೀರವಾಗಿ ಗಾಯಗೊಂಡಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bullet train ಮೊದಲ ಬಾರಿಗೆ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್: ರೈಲ್ವೇ ಸಚಿವ ವೈಷ್ಣವ್
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Bullet train ಮೊದಲ ಬಾರಿಗೆ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್: ರೈಲ್ವೇ ಸಚಿವ ವೈಷ್ಣವ್
Mumbai Indians: ಸೂರ್ಯಕುಮಾರ್ ಶೀಘ್ರ ಚೇತರಿಕೆ ಸಾಧ್ಯತೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್