ಬಿಹಾರ ರಸ್ತೆ ಅಪಘಾತಕ್ಕೆ 7 ಪೊಲೀಸರು, ಒಬ್ಬ ಮಾವೋ ಕೈದಿ ಬಲಿ
Team Udayavani, Apr 15, 2017, 3:43 PM IST
ಪಟ್ನಾ : ಉತ್ತರ ಬಿಹಾರದ ಸೀತಾಮಡಿ ಜಿಲ್ಲೆಯಲ್ಲಿ ಇಂದು ಶನಿವಾರ ಘಟಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಪೊಲೀಸರು ಮತ್ತು ಓರ್ವ ಮಾವೋ ವಿಚಾರಣಾ ಕೈದಿ ಸೇರಿದಂತೆ ಒಟ್ಟು 8 ಮಂದಿ ಅಸುನೀಗಿದರು.
ಮೃತರನ್ನು ಮುನ್ನಾ ಸಿಂಗ್ (ಚಾಲಕ), ಕುಲೇಶ್ವರ್ ಚೌಧರಿ, ಸಂಜಯ್ ಕುಮಾರ್, ಕೃಷ್ಣ ಸಿಂಗ್, ಮದನ್ ಸಹಾ, ಉಮೇಶ್ ಮಿಶ್ರಾ ಮತ್ತು ಚುಮೂನ್ ಸಿಂಗ್ (ಎಲ್ಲರೂ ಕಾನ್ಸ್ಟೆಬಲ್ಗಳು) ಮತ್ತು ಹೇಮಂತ ಕುಮಾರ್ (ವಿಚಾರಣಾಧೀನ ಕೈದಿ) ಎಂದು ಗುರುತಿಸಲಾಗಿದೆ.
ಪೊಲೀಸರು ಹಾಗೂ ಮಾವೋ ವಿಚಾರಣಾ ಕೈದಿ ಇದ್ದ ವ್ಯಾನ್ ರುನ್ನಿಸೈದಾಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಎನ್ಎಚ್ 77ರ ಸಮೀಪದಲ್ಲಿ, 25 ಕಿ.ಮೀ. ದಕ್ಷಿಣದಲ್ಲಿರುವ ಸೀತಾಮಡಿಯ ಗಾಯಿಘಾಟ್ ಗ್ರಾಮದಲ್ಲಿ ನಿಂತಿದ್ದ ಟ್ರಕ್ ಗೆ ಢಿಕ್ಕಿ ಹೊಡೆಯಿತು.
8 ಮಂದಿ ಮೃತಪಟ್ಟ ಈ ದುರ್ಘಟನೆಯಲ್ಲಿ ಇತರ ಏಳು ಪೊಲೀಸರು ಮತ್ತು ಒಬ್ಬ ಮಾವೋ ವಿಚಾರಣಾಧೀನ ಕೈದಿ ಗಾಯಗೊಂಡಿದ್ದು ಅವರನ್ನು ಇಲ್ಲಿಂದ 62 ಕಿ.ಮೀ.ದೂರದ ಮುಜಫರಪುರದಲ್ಲಿನ ಖಾಸಗಿ ನರ್ಸಿಂಗ್ ಹೋಮ್ ಗೆ ದಾಖಲಿಸಲಾಗಿದೆ.
ಪೂರ್ವ ಬಿಹಾರದ ಭಾಗಲ್ಪುರದಿಂದ 14 ಮಂದಿ ಪೊಲೀಸರು ಇಬ್ಬರು ವಿಚಾರಣಾಧೀನ ಕೈದಿಗಳನ್ನು ಒಯ್ಯುತ್ತಿದ್ದ ವ್ಯಾನ್ ಜಲ್ಲಿಕಲ್ಲು ತುಂಬಿದ್ದ ಟ್ರಕ್ಕಿಗೆ ಸೀತಾಮಡಿ – ಮುಜಫರ್ಪುರದ ಎನ್ಎಚ್ 77ರ ಪಟ್ಟಿಯಲ್ಲಿ ಢಿಕ್ಕಿ ಹೊಡೆಯಿತು. ಪೊಲೀಸ್ ವ್ಯಾನ್ ಯಮ ವೇಗದಲ್ಲಿ ಸಾಗುತ್ತಿತ್ತು. ಅದರ ಚಾಲಕನಿಗೆ ಕತ್ತಲೆಯಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಟ್ರಕ್ಕನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!
Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!
Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!
Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?
Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್: ರಾಹುಲ್ ಆರೋಪ
MUST WATCH
ಹೊಸ ಸೇರ್ಪಡೆ
Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!
Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!
Champions Trophy; ಕೊಹ್ಲಿ ಪಾಕ್ನಲ್ಲಿ ಆಡಲಿ: ಯೂನಿಸ್ ಖಾನ್
Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!
Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.