ಸಂಸತ್ ಟಿವಿಯಿಂದ ಹೊರಬಂದ ಶಶಿ ತರೂರ್
Team Udayavani, Dec 6, 2021, 10:15 PM IST
ನವದೆಹಲಿ: ಚಳಿಗಾಲದ ಅಧಿವೇಶನದಿಂದ 12 ಸಂಸದರನ್ನು ಅಮಾನತುಗೊಳಿಸಿರುವ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಆ ಸಂಸದರ ಅಮಾನತು ಆದೇಶವನ್ನು ಹಿಂಪಡೆಯುವವರೆಗೆ ಸಂಸತ್ ಟಿವಿಯ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದಿದ್ದಾರೆ.
ಸಂಸತ್ ಟಿವಿಯಲ್ಲಿ “ಟು ದಿ ಪಾಯಿಂಟ್’ ಹೆಸರಿನ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಶಶಿ ತರೂರ್, ಕಾರ್ಯಕ್ರಮದಿಂದ ಹೊರಬಂದಿರುವ ಬಗ್ಗೆ ಮಾತನಾಡಿದ್ದು, “ಪ್ರತಿ ದಿನ ನಾನು ಹೋರಾಟನಿರತ ಸಂಸದರನ್ನು ಭೇಟಿ ಮಾಡುತ್ತಿದ್ದೇನೆ.
ಆದರೆ ಅದೇ ವೇಳೆ ಸಂಸತ್ ಟಿವಿಯಲ್ಲೂ ಕಾಣಿಸಿಕೊಳ್ಳುವುದರಿಂದ ನಾನು ಸಂಸದೀಯ ಸಂಸ್ಥೆಯ ಅಪ್ರಜಾಸತ್ತಾತ್ಮಕ ರೀತಿಯಲ್ಲಿ ಸಹಭಾಗಿತ್ವ ಪಡೆದಿದ್ದೇನೆ ಎನಿಸಿಕೊಳ್ಳುತ್ತದೆ.
ಇದನ್ನೂ ಓದಿ:ನಾನು ಸತ್ತರೆ ಮಣ್ಣಿಗೆ ಬರಬೇಡ ಎಂದು ಅಣ್ಣನಿಗೆ ಹೇಳಿದ್ದೇನೆ :ಸಂಸದ ಜಿಗಜಿಣಗಿ
ಆ ಹಿನ್ನೆಲೆಯಲ್ಲಿ ಅಮಾನತುಗೊಂಡಿರುವ ಸಂಸದರನ್ನು ಅಧಿವೇಶನಕ್ಕೆ ವಾಪಸು ಕರೆಸಿಕೊಳ್ಳುವವರೆಗೆ ನಾನು ಸಂಸತ್ ಟಿವಿಯ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..