NCP-SP ಹೆಸರು ಬಳಸಲು ಶರದ್ ಬಣಕ್ಕೆ ಸುಪ್ರೀಂ ಸಲಹೆ
Team Udayavani, Feb 20, 2024, 12:29 AM IST
ಹೊಸದಿಲ್ಲಿ: ಮುಂದಿನ ಆದೇಶದವರೆಗೆ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ-ಶರದ್ಚಂದ್ರ ಪವಾರ್ (ಎನ್ಸಿಪಿ-ಎಸ್ಪಿ) ಹೆಸರನ್ನೇ ಪಕ್ಷದ ಹೆಸರನ್ನಾಗಿ ಬಳಸಲು ಎನ್ಸಿಪಿ ಸ್ಥಾಪಕ ಶರದ್ ಪವಾರ್ ಬಣಕ್ಕೆ ಸೋಮವಾರ ಸುಪ್ರೀಂ ಕೋರ್ಟ್ ಸೂಚಿಸಿದೆ. ಚುನಾವಣೆಗಳಲ್ಲಿ ಇದೇ ಹೆಸರನ್ನು ಬಳಸುವಂತೆ ಫೆ. 7ರಂದು ಚುನಾವಣ ಆಯೋಗವೂ ಶರದ್ ಬಣಕ್ಕೆ ಸೂಚಿಸಿತ್ತು. ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಬಣವೇ ನಿಜವಾದ ಎನ್ಸಿಪಿ ಎಂದು ತೀರ್ಪು ನೀಡಿತ್ತು.