Civic Body: ಹತ್ತು ಮಂದಿ ಟ್ರೈನಿ ಯುವತಿಯರನ್ನು ನಗ್ನಗೊಳಿಸಿ ಪರೀಕ್ಷೆ ನಡೆಸಿದ ವೈದ್ಯರು!
ಅವಿವಾಹಿತರನ್ನೂ ಕೂಡಾ ಮಹಿಳಾ ವೈದ್ಯರುಗಳು ಗರ್ಭಿಣಿಯಾಗಿದ್ದಾರೋ ಇಲ್ಲವೋ ಎಂದು ಪರೀಕ್ಷಿಸಿದ್ದರು.
Team Udayavani, Feb 21, 2020, 6:13 PM IST
ಅಹಮದಾಬಾದ್: ಋತುಮತಿ ಆಗಿದ್ದಾರೋ ಅಂತ ಪರೀಕ್ಷಿಸಲು ವಿದ್ಯಾರ್ಥಿನಿಯರ ಒಳ ಉಡುಪು ತೆಗೆಸಿ ಪರೀಕ್ಷಿಸಿದ ಘಟನೆ ನಡೆದ ಬೆನ್ನಲ್ಲೇ ಈಗ ಸೂರತ್ ಮಹಾನಗರ ಪಾಲಿಕೆಯ(ಎಸ್ ಎಂಸಿ) ತರಬೇತಿಯಲ್ಲಿರುವ ಮಹಿಳಾ ಕ್ಲರ್ಕ್ ಗಳನ್ನು ಆಸ್ಪತ್ರೆಯಲ್ಲಿ ನಗ್ನಗೊಳಿಸಿ ಮೆಡಿಕಲ್ ಟೆಸ್ಟ್ ನಡೆಸಿದ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಸೂರತ್ ನಲ್ಲಿ ಮಹಾನಗರ ಪಾಲಿಕೆಗೆ ಒಳಪಟ್ಟ ಆಸ್ಪತ್ರೆಯ ಸ್ತ್ರೀರೋಗ ತಪಾಸಣಾ ವಾರ್ಡ್ ನಲ್ಲಿ ಹತ್ತು ಮಂದಿ ಮಹಿಳಾ ಕ್ಲರ್ಕ್ ಗಳನ್ನು ನಗ್ನಗೊಳಿಸಿ ನಿಲ್ಲಿಸಿ ಪರೀಕ್ಷೆ ನಡೆಸಿರುವ ಪ್ರಕರಣದ ಬಗ್ಗೆ ಮುನ್ಸಿಪಲ್ ಕಮಿಷನರ್ ಬಾನ್ಛಾನಿಧಿ ಪಾನಿ ಆದೇಶ ಹೊರಡಿಸಿದ್ದಾರೆ ಎಂದು ವರದಿ ತಿಳಿಸಿದೆ.
ಅವಿವಾಹಿತರನ್ನೂ ಕೂಡಾ ಮಹಿಳಾ ವೈದ್ಯರುಗಳು ಗರ್ಭಿಣಿಯಾಗಿದ್ದಾರೋ ಇಲ್ಲವೋ ಎಂದು ಪರೀಕ್ಷಿಸಿರುವುದಾಗಿ ಎಸ್ ಎಂಸಿ ಉದ್ಯೋಗಿಗಳ ಒಕ್ಕೂಟ ಕಮೀಷನರ್ ಗೆ ನೀಡಿರುವ ದೂರಿನಲ್ಲಿ ತಿಳಿಸಿದೆ.
ಸೂರತ್ ಮುನ್ಸಿಪಲ್ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಅಂಡ್ ರಿಸರ್ಚ್ ಆಸ್ಪತ್ರೆಯಲ್ಲಿ ಫೆ.20ರಂದು ಈ ಘಟನೆ ನಡೆದಿದೆ. ದೂರಿನ ಆಧಾರದ ಮೇಲೆ ಕಮಿಷನರ್ ಮೂವರು ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿ, ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ. ಅಲ್ಲದೇ 15 ದಿನದೊಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ಮೆಡಿಕಲ್ ಕಾಲೇಜಿನ ಮಾಜಿ ಡೀನ್ ಡಾ.ಕಲ್ಪನಾ ದೇಸಾಯಿ, ಮುನ್ಸಿಪಲ್ ಸಹಾಯಕ ಕಮಿಷನರ್ ಗಾಯತ್ರಿ ಜಾರಿವಾಲಾ ಮತ್ತು ಎಕ್ಸಿಕ್ಯೂಟಿವ್ ತೃಪ್ತಿ ಕಾಲಾಥಿಯಾ ಅವರನ್ನೊಳಗೊಂಡ ಸಮಿತಿ ರಚಿಸಿದ್ದಾರೆ.
ಕಾನೂನು ಪ್ರಕಾರ, ಎಲ್ಲಾ ಟ್ರೈನಿ ಉದ್ಯೋಗಿಗಳು ದೈಹಿಕ ಪರೀಕ್ಷೆಗೆ ಒಳಪಡಬೇಕು. ಅವರು ತರಬೇತಿ ಸಮಯದಲ್ಲಿ ದೈಹಿಕವಾಗಿ ಆರೋಗ್ಯವಂತರಾಗಿದ್ದರೆ ಎಂಬುದನ್ನು ಪರೀಕ್ಷಿಸುತ್ತಾರೆ. ಮೂರು ವರ್ಷಗಳ ತರಬೇತಿ ಮುಕ್ತಾಯಗೊಂಡ ನಂತರ ಕೆಲವು ಮಹಿಳಾ ಟ್ರೈನಿ ಕ್ಲರ್ಕ್ ಗಳು ಆಸ್ಪತ್ರೆಗೆ ಮೆಡಿಕಲ್ ಟೆಸ್ಟ್ ಗೆ ಬರುವುದು ಕಡ್ಡಾಯ ಎಂದು ಅಧಿಕಾರಿ ತಿಳಿಸಿದ್ದಾರೆ.
ಕಡ್ಡಾಯ ಪರೀಕ್ಷೆಗೆ ನಮ್ಮ ವಿರೋಧವಿಲ್ಲ. ಆದರೆ ಮಹಿಳಾ ಸಿಬ್ಬಂದಿಗಳನ್ನು ಸ್ತ್ರೀರೋಗ ಪರೀಕ್ಷಾ ಕೊಠಡಿಯಲ್ಲಿ ನಡೆಸಿಕೊಂಡ ರೀತಿ ಸರಿಯಲ್ಲ. ಒಬ್ಬರ ನಂತರ ಒಬ್ಬರನ್ನು ಪರೀಕ್ಷಿಸಲಿ. ಇಲ್ಲಿ ಎಲ್ಲಾ ಹತ್ತು ಮಂದಿ ಯುವತಿಯರನ್ನು ಒಟ್ಟಿಗೆ ನಗ್ನಗೊಳಿಸಿ ನಿಲ್ಲಿಸಿ ಪರೀಕ್ಷೆ ನಡೆಸಿದ್ದು ತಪ್ಪು ಎಂದು ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ